Channapatna ತಹಶೀಲ್ದಾರ್ ಕಚೇರಿಗೆ ಕೃಷ್ಣಬೈರೇಗೌಡ ದಿಢೀರ್ ಭೇಟಿ
ಕಚೇರಿ ಪರಿಸ್ಥಿತಿ ಕಂಡು ಸಿಟ್ಟಿಗೆದ್ದ ಸಚಿವರು
Team Udayavani, Aug 9, 2024, 2:28 PM IST
ರಾಮನಗರ: ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಶುಕ್ರವಾರ (ಆ.09) ಚನ್ನಪಟ್ಟಣ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುವ ಆರೋಪದ ಕಾರಣದಿಂದ ಕಂದಾಯ ಸಚಿವರು ದಿಢೀರ್ ಭೇಟಿ ನೀಡಿದರು. ಇಲ್ಲಿ ಎಲ್ಲವೂ ಭ್ರಷ್ಟಾಚಾರ ಎಂದು ಜನರು ಕಣ್ಣೀರಿಟ್ಟು ಸಚಿವರಿಗೆ ದೂರು ಕೊಟ್ಟರು.
ತಹಶೀಲ್ದಾರ್ ನರಸಿಂಹಮೂರ್ತಿ, ಎಸಿ ಬಿನೋಯ್ ಗೆ ಸಚಿವರು ತರಾಟೆಗೆ ತೆಗೆದುಕೊಂಡರು.
ಕಡತಗಳನ್ನು ಪರಿಶೀಲನೆ ಮಾಡಿದಾಗ ಎಲ್ಲದರಲ್ಲಿಯೂ ವ್ಯತ್ಯಾಸ ಕಂಡ ಹಿನ್ನೆಲೆಯಲ್ಲಿ ತಹಶೀಲ್ದಾರ್ ನರಸಿಂಹಮೂರ್ತಿ ವಿರುದ್ದ ಅಸಮಾಧಾನಗೊಂಡರು.
ತಾಲೂಕು ಕಚೇರಿ ಒಳಗೆಯೇ ಕಸದ ರಾಶಿ ಕಂಡು ಸಿಟ್ಟಿಗೆದ್ದ ಸಚಿವ ಕೃಷ್ಣಬೈರೇಗೌಡ, ಇದು ತಾಲೂಕು ಕಚೇರಿನಾ ಅಥವಾ ಕಸದ ಕಚೇರಿನಾ ಎಂದು ಪ್ರಶ್ನಿಸಿದರು.
“ಇದು ನಿಜಕ್ಕೂ ಬೇಸರ ತರಿಸಿದೆ. ನಮ್ಮ ಇಲಾಖೆಯಲ್ಲಿ ಈ ರೀತಿ ಆಗುತ್ತಿದೆ. ಇದು ನನ್ನದೇ ತಪ್ಪು ಎಂದು ಹೇಳುತ್ತೇನೆ, ಬೇರೆ ಯಾರಿಗೂ ದೋಷ ಹೊರಿಸಲ್ಲ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಸುತ್ತೇನೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದು ಸರ್ಕಾರದ ಕೆಲಸ ಎಂದು ಅಂದುಕೊಂಡಿಲ್ಲ. ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ, ಇದು ಸರಿಯಲ್ಲ ಎಂದು ಕೃಷ್ಣಬೈರೇಗೌಡ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.