Neeraj Chopra;ಒಲಿಂಪಿಕ್ಸ್ಗಾಗಿ ಮುಂದೂಡಿದ್ದೆ,ಶಸ್ತ್ರಚಿಕಿತ್ಸೆ ಬಗ್ಗೆ ಈಗ ನಿರ್ಧರಿಸಬೇಕು
ಗಾಯದ ನೋವಿನಲ್ಲೂ ಬೆಳ್ಳಿ ಗೆದ್ದ ಚಿನ್ನದ ಹುಡುಗ...
Team Udayavani, Aug 9, 2024, 5:21 PM IST
ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಥ್ರೋ ಬೆಳ್ಳಿ ಪದಕ ವಿಜೇತ್ ನೀರಜ್ ಚೋಪ್ರಾ ಅವರು ತಮ್ಮ ಗಾಯದ ನೋವಿನ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಪ್ಯಾರಿಸ್ ಗೇಮ್ಸ್ ನಡೆಯುತ್ತಿರುವಾಗಲೇ ಚೋಪ್ರಾ ಅವರುತೊಡೆಯ ಸ್ನಾಯುಗಳಿಗೆ ಸಂಬಂಧಿಸಿದ ತೀವ್ರ ಸಮಸ್ಯೆ ಯನ್ನು ಎದುರಿಸುತ್ತಿದ್ದು, ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಬಹುದು ಎಂದು ಬಹಿರಂಗಪಡಿಸಿದ್ದಾರೆ.
”ನನ್ನ ಮನಸ್ಸಿನಲ್ಲಿ ಬಹಳಷ್ಟು ಇದೆ. ನಾನು ಎಸೆಯುತ್ತಿರುವಾಗ, ನನ್ನ ಶೇಕಡಾ 60-70 ರಷ್ಟು ಗಮನವು ಗಾಯದ ನೋವಿನ ಮೇಲೆ ಇರುತ್ತಿತ್ತು. ನಾನು ಗಾಯಗೊಳ್ಳಲು ಬಯಸುವುದಿಲ್ಲ. ನಾನು ಎಸೆಯಲು ಹೋದಾಗಲೆಲ್ಲಾ ನನ್ನ ವೇಗವು ಕಡಿಮೆಯಾಗಿದೆ ಎಂದು ನೀವು ನೋಡಿದ್ದೀರಿ. ನಾನು ನನ್ನನ್ನು ತಳ್ಳುತ್ತಿದ್ದೆ. ಶಸ್ತ್ರಚಿಕಿತ್ಸೆಗೆ ಒಳಗಾಗಲು ವೈದ್ಯರು ನನಗೆ ಹೇಳಿದ್ದರು ಆದರೆ ವಿಶ್ವ ಚಾಂಪಿಯನ್ಶಿಪ್ಗೆ ಮೊದಲು ಅಥವಾ ವಿಶ್ವ ಚಾಂಪಿಯನ್ಶಿಪ್ ನಂತರ ಆ ನಿರ್ಧಾರವನ್ನು ತೆಗೆದುಕೊಳ್ಳಲು ನನಗೆ ಹೆಚ್ಚು ಸಮಯವಿರಲಿಲ್ಲ. ಒಲಿಂಪಿಕ್ಸ್ಗೆ ತಯಾರಿ ಮಾಡಲು ಸಾಕಷ್ಟು ಸಮಯ ತೆಗೆದುಕೊಂಡೆ”ಎಂದು ಚೋಪ್ರಾ ಹೇಳಿದ್ದಾರೆ.
ಚಿನ್ನದ ಪದಕ ಕಳೆದುಕೊಂಡ ಮತ್ತು ನೋವಿನ ಹತಾಶೆಯಲ್ಲಿದ್ದ ನೀರಜ್ ಅವರು ‘ನಾನು ಇನ್ನೂ ತಳ್ಳುತ್ತಲೇ ಇದ್ದೇನೆ. ಇದು ಕ್ರೀಡೆಯಲ್ಲಿ ಒಳ್ಳೆಯದಲ್ಲ,ಸುದೀರ್ಘ ವೃತ್ತಿಜೀವನವನ್ನು ನಡೆಸಲು ಬಯಸಿದರೆ ಫಿಟ್ ಮತ್ತು ಆರೋಗ್ಯಕರವಾಗಿರಬೇಕು ಆದರೆ ನಾವು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದ ಸ್ಪರ್ಧೆಗಳಿವೆ. ಈಗ ಈ ಬಗ್ಗೆ ಕೆಲಸ ಮಾಡಬೇಕು.ನಮ್ಮ ತಂಡದೊಂದಿಗೆ ಮಾತನಾಡಿ ನಂತರ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಫಿಟ್ನೆಸ್ಗೆ ಸಂಬಂಧಿಸಿದಂತೆ ಕಳೆದ ಏಳು ವರ್ಷಗಳು ತನಗೆ ಹೇಗೆ ಕಠಿನವಾಗಿವೆ ಎಂಬುದನ್ನುವಿವರಿಸಿ “ನಾನು 2017 ರಲ್ಲಿ ನೋವನ್ನು ಅನುಭವಿಸಿದೆ. ಅದರ ನಂತರ, ನಾನು ಬಹಳಷ್ಟು ಚಿಕಿತ್ಸೆಗಳನ್ನು ಪಡೆದುಕೊಂಡೆ. ಆದರೆ ಈಗ ನಾನು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ” ಎಂದರು.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದ ಚೋಪ್ರಾ ಅವರು ಚಿನ್ನ ಗೆದ್ದು ಭಾರೀ ಸುದ್ದಿಯಾಗಿದ್ದರು. ಈ ಬಾರಿ ನೋವಿನಲ್ಲೂ ಹೋರಾಟ ನಡೆಸಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಋತುವಿನ ಅತ್ಯುತ್ತಮ 89.45 ಮೀ ಎಸೆತ ದಾಖಲಿಸಿದರು. ಎರಡು ಒಲಿಂಪಿಕ್ ಪದಕಗಳನ್ನು ಪಡೆದ ಭಾರತದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ಹಿರಿಮೆಗೆ ಭಾಜನರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.