Paris Olympics: ಕೇವಲ 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿದ್ದ ಅಮನ್‌ ಸೆಹ್ರಾವತ್!‌

ತಪ್ಪಿತು ಮತ್ತೊಂದು ಆಘಾತ! ತೂಕ ಇಳಿಸಿ ಕಂಚಿನ ಪದಕ ಗೆದ್ದ ಅಮನ್

Team Udayavani, Aug 10, 2024, 1:28 PM IST

aman sehrawat

ಪ್ಯಾರಿಸ್:‌ ಕೆಲವೇ ದಿನಗಳ ಹಿಂದೆ ಮಹಿಳಾ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಕೇವಲ 100 ಗ್ರಾಮ್‌ ಹೆಚ್ಚಿದ್ದ ಕಾರಣ ಫೈನಲ್‌ ಪಂದ್ಯದಿಂದ ಭಾರತದ ವಿನೀಶ್‌ ಪೋಗಾಟ್‌ (Vinesh Phogat) ಅವರು ಹೊರಬಿದ್ದಿರುವ ಆಘಾತದಿಂದ ಭಾರತೀಯರು ಇನ್ನೂ ಹೊರಬಂದಿಲ್ಲ. ಇಂತಹುದೇ ಘಟನೆಯೊಂದು ಮರುಕಳಿಸುವುದು ಸ್ವಲ್ಪದರಲ್ಲಿ ತಪ್ಪಿದೆ.

ಹೌದು, ಶುಕ್ರವಾರ (ಆ.09) ರಾತ್ರಿ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಭಾರತದ ಯುವ ಪಟು ಅಮನ್‌ ಸೆಹ್ರಾವತ್‌ (Aman Sehrawat) ಕೂಡಾ ಇಂತಹದ್ದೇ ಕಾರಣದಿಂದ ಅನರ್ಹರಾಗುವ ಸಾಧ್ಯತೆಯಿತ್ತು. ಆದರೆ ಸಕಾಲದ ಕಠಿಣ ಪರಿಶ್ರಮ ಮತ್ತು ಅದೃಷ್ಟದ ಬಲದಿಂದ ಅಮನ್‌ ಪಂದ್ಯವಾಡಿ ಗೆದ್ದರು.

57 ಕೆಜಿ ವಿಭಾಗದಲ್ಲಿ ಆಡಿದ್ದ ಅಮನ್‌ ಸೆಹ್ರಾವತ್‌ ಸೆಮಿ ಫೈನಲ್‌ ಪ್ರವೇಶಿಸಿದ್ದರು. ಆದರೆ ಸೆಮಿ ಪಂದ್ಯದಲ್ಲಿ ಜಪಾನ್‌ ಆಟಗಾರನೆದುರು ಸೋತು ಕಂಚಿನ ಪದಕದ ಪಂದ್ಯಕ್ಕೆ ಅರ್ಹತೆ ಪಡೆದಿದ್ದರು. ಆದರೆ ಸೆಮಿ ಫೈನಲ್‌ ಪಂದ್ಯದ ಬಳಿಕ ಅಮನ್‌ ಅವರ ದೇಹತೂಕ 61.5 ಕೆಜಿಗೆ ಏರಿಕೆಯಾಗಿತ್ತು.

ಆದರೆ ಮುಂದಿನ ದೇಹ ತೂಕ ಪರೀಕ್ಷೆಗೆ ಮೊದಲು ಅಂದರೆ 10 ಗಂಟೆಯ ಅವಧಿಯೊಳಗೆ ಕಠಿಣ ಶ್ರಮದಿಂದ ಅಮನ್‌ ದೇಹತೂಕವನ್ನು 61.5 ಕೆಜಿಯಿಂದ 57 ತಂದು  ಅಂದರೆ 4.6 ಕೆಜಿ ಇಳಿಸಿಕೊಂಡು ಪಂದ್ಯಕ್ಕೆ ಅರ್ಹತೆ ಪಡೆದಿರುವ ವಿಚಾರ ಇದೀಗ ಬಯಲಾಗಿದೆ.

ಕೇವಲ 21 ವರ್ಷ ವಯಸ್ಸಿನ ಅಮನ್ ತನ್ನ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್‌ನ ರೀ ಹಿಗುಚಿ ವಿರುದ್ಧ ಸಂಜೆ 6:30 ರ ಸುಮಾರಿಗೆ ಸೋತ ನಂತರ ಅವರ ದೇಹ ತೂಕ ಏರಿಕೆಯಾಗಿರುವುದು ಕಂಡು ಬಂದಿತ್ತು. ಹೆಚ್ಚಿನ ಸಮಯಾವಕಾಶವಿಲ್ಲದೆ, ಅಮನ್ ಮತ್ತು ಅವರ ತರಬೇತುದಾರರು ತೂಕದ ಅಗತ್ಯವನ್ನು ಪೂರೈಸಲು ತೀವ್ರವಾದ ಪ್ರಯತ್ನವನ್ನು ಪ್ರಾರಂಭಿಸಿದರು.

ಅಮನ್‌ ಅವರ ಕೋಚ್‌ ಗಳಾದ ಜಗ್ಮಂದರ್‌ ಸಿಂಗ್‌ ಮತ್ತು ವೀರೆಂದರ್‌ ದಹಿಯಾ ಸೇರಿ ಅಮನ್‌ ಅವರ ತೂಕ ಇಳಿಕೆ ಕಸರತ್ತು ನಡೆಸಿದ್ದಾರೆ. 1.5 ಗಂಟೆಯ ಮ್ಯಾಟ್ ಸೆಶನ್‌ ನಡೆಸಿದ ಬಳಿಕ, ಒಂದು ಗಂಟೆ ಬಿಸಿ ನೀರ ಸ್ನಾನದ ಮೊರೆ ಹೋಗಿದ್ದಾರೆ. ಬೆವರು ಹರಿದ ಕಾರಣ ತೂಕ ಇಳಿಕೆಗೆ ಪ್ರಯೋಜನವಾಗಿದೆ.

ರಾತ್ರಿ 12.30ರ ಸುಮಾರಿಗೆ ಜಿಮ್‌ ಗೆ ತೆರಳಿ ತ್ರೆಡ್‌ ಮಿಲ್‌ ಮೇಲೆ ಒಂದು ಗಂಟೆ ನಿರಂತರವಾಗಿ ಅಮನ್‌ ಓಡಿದ್ದಾರೆ. ಅರ್ಧ ಗಂಟೆಯ ವಿರಾಮ ಪಡೆದು ಬಳಿಕ ಮಸಾಜ್‌ ಮತ್ತು ಜಾಗಿಂಗ್‌ ಮಾಡಿದ್ದಾರೆ. ಇದರ ಬಳಿಕ ತಲಾ 15 ನಿಮಿಷದಂತೆ ಐದು ಸೆಟ್‌ ಗಳ ರನ್ನಿಂಗ್‌ ಸೆಶನ್‌ ಮಾಡಿಸಿದ್ದಾರೆ. ಹೀಗಾಗಿ ಮುಂಜಾನೆ 4.30ರ ಸುಮಾರಿಗೆ ಅಮನ್‌ ದೇಹತೂಕ 56.9 ಕೆಜಿಗೆ ಬಂದಿಳಿದಿತ್ತು.

ಈ ತೀವ್ರವಾದ ಚಟುವಟಿಕೆಗಳ ಉದ್ದಕ್ಕೂ, ಅಮಾನ್‌ಗೆ ಸ್ವಲ್ಪ ಕಾಫಿ ಜೊತೆಗೆ ನಿಂಬೆ ಮತ್ತು ಜೇನುತುಪ್ಪದೊಂದಿಗೆ ಉಗುರು ಬೆಚ್ಚಗಿನ ನೀರನ್ನು ನೀಡಲಾಯಿತು. ತೂಕದ ಕಡಿತವನ್ನು ಪೂರ್ಣಗೊಳಿಸಿದ ನಂತರ, ಅಮನ್ ನಿದ್ರೆ ಮಾಡಲಿಲ್ಲ, ತೂಕ ಪರೀಕ್ಷೆಯ ತನಕ ಎಚ್ಚರದಿಂದಲೇ ಇದ್ದರು.

ಆಗಾಗ ತೂಕ ಪರೀಕ್ಷೆ ಮಾಡಲಾಗುತ್ತಿತ್ತು. ಅಮನ್‌ ಒಂಚೂರು ನಿದ್ರೆ ಮಾಡಲಿಲ್ಲ. ಬೆಳಗಿನ ವೇಳೆ ಅವರು ಕುಸ್ತಿ ವಿಡಿಯೋಗಳನ್ನು ನೋಡುತ್ತಿದ್ದರು ಎಂದು ಕೋಚ್‌ ದಹಿಯಾ ಹೇಳಿದ್ದಾರೆ.

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvsBAN: Ashwin, Jadeja prop up slumping India; A local boy scored a century

‌INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್‌, ಜಡೇಜಾ; ಶತಕ ಬಾರಿಸಿದ ಲೋಕಲ್‌ ಬಾಯ್

INDvsBAN: ”ಈತ ಭಾರತದ ಬಾಬರ್‌ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ

INDvsBAN: ”ಈತ ಭಾರತದ ಬಾಬರ್‌ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ

Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್‌ ಮಾಡಿದ ಕ್ರಿಕೆಟ್‌ ಆಸ್ಟ್ರೇಲಿಯಾ

Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್‌ ಮಾಡಿದ ಕ್ರಿಕೆಟ್‌ ಆಸ್ಟ್ರೇಲಿಯಾ

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.