Viral Video: ನಾನು – ಐಶ್ವರ್ಯಾ ವಿಚ್ಚೇದನ ಪಡೆಯಲಿದ್ದೇವೆ….: ಅಭಿಷೇಕ್ ಬಚ್ಚನ್
Team Udayavani, Aug 11, 2024, 9:34 AM IST
ಮುಂಬಯಿ: ಬಾಲಿವುಡ್ ಕಪಲ್ ಅಭಿಷೇಕ್ ಬಚ್ಚನ್ (Abhishek Bachchan) ಹಾಗೂ ಐಶ್ವರ್ಯಾ ರೈ (Aishwarya Rai) ದಾಂಪತ್ಯ ಜೀವನದಲ್ಲಿ ಕಳೆದ ಸಮಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ಮಾತುಗಳು ಹರಿದಾಡುತ್ತಿದೆ. ಆದರೆ ಈ ಬಗ್ಗೆ ಎಲ್ಲೂ ಅಧಿಕೃತವಾಗಿ ಮಾಹಿತಿ ಹೊರಬಿದ್ದಿಲ್ಲ.
ಐಶ್ವರ್ಯಾ ರೈ ಹಾಗೂ ಅಭಿಷೇಕ್ ಯಾವ ಕಾರ್ಯಕ್ರಮಕ್ಕೆ ಹೋದರು ಮೊದಲು ಜೊತೆಯಾಗಿ ಹೋಗುತ್ತಿದ್ದರು. ಆದರೆ ಇತ್ತೀಚೆಗೆ ವರ್ಷದಲ್ಲಿ ಇಬ್ಬರು ಪ್ರತ್ಯೇಕವಾಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಅಂಬಾನಿ ಪುತ್ರ ಅನಂತ್ ಹಾಗೂ ರಾಧಿಕಾ ವಿವಾಹ ಕಾರ್ಯಕ್ರಮದಲ್ಲಿ ಅಭಿಷೇಕ್ ಬಚ್ಚನ್ ತನ್ನ ಕುಟುಂಬದ ಜತೆ ಭಾಗಿಯಾಗಿದ್ದರು. ಆದರೆ ಐಶ್ವರ್ಯ ರೈ ಅವರೊಂದಿಗೆ ಬಂದಿರಲಿಲ್ಲ. ಅವರು ತನ್ನ ಮಗಳು ಆರಾಧ್ಯಳ ಜತೆ ಭಾಗಿಯಾಗಿದ್ದರು. ಪ್ರತ್ಯೇಕವಾಗಿ ವಿವಾಹಕ್ಕೆ ಬಂದ ಪರಿಣಾಮ ಅಭಿಷೇಕ್ – ಐಶ್ವರ್ಯ ನಡುವೆ ಏನೋ ಬಿರುಕು ಉಂಟಾಗಿದೆ ಎನ್ನುವ ಮಾತು ಮತ್ತೊಮ್ಮೆ ಮುನ್ನೆಲೆಗೆ ಬಂದಿತ್ತು.
ಇದರ ನಡುವೆ ಅಭಿಷೇಕ್ ಬಚ್ಚನ್ ವಿಚ್ಚೇದನದ ಬಗ್ಗೆ ಹೇಳುವ ಪೋಸ್ಟ್ ವೊಂದನ್ನು ಲೈಕ್ ಮಾಡಿದ್ದು ಕೂಡ ಸುದ್ದಿಯಾಗಿತ್ತು. ಇದೀಗ ಅವರ ವಿಡಿಯೋವೊಂದು ವೈರಲ್ ಆಗಿದೆ.
“ಈ ಜುಲೈನಲ್ಲಿ ನಾನು ಹಾಗೂ ಐಶ್ವರ್ಯ ವಿಚ್ಚೇದನ ಪಡೆಯಲು ನಿರ್ಧರಿಸಿದ್ದೇವೆ. ಕಳೆದ ಕೆಲ ವರ್ಷಗಳು ನಮಗೆ ಕಷ್ಟವಾಗಿದ್ದವು” ಎಂದು ವಿಡಿಯೋವೊಂದರಲ್ಲಿ ಅಭಿಷೇಕ್ ಬಚ್ಚನ್ ಹೇಳಿರುವುದು ವೈರಲ್ ಆಗಿದೆ.
ಈ ವಿಡಿಯೋ ನೋಡಿದಾಗ ಇದು ಅಸಲಿಯೋ, ನಕಲಿಯೋ ಎಂದು ನೆಟ್ಟಿಗರು ಪರಿಶೀಲನೆಗೆ ಮುಂದಾಗಿದ್ದಾರೆ. ಮೂಲಗಳ ಪ್ರಕಾರ ಇದೊಂದು ಎಐ ಟೂಲ್ ಬಳಸಿ ಮಾಡಿರುವ ವಿಡಿಯೋ, ಅಭಿಷೇಕ್ ಬಚ್ಚನ್ ಅವರ ಯಾವುದೋ ವಿಡಿಯೋಗೆ ಎಐ ಮೂಲಕ ಧ್ವನಿ ಸೇರಿಸಿ ಇದನ್ನು ಹರಿದು ಬಿಡಲಾಗಿದೆ ಎಂದು ವರದಿಯಾಗಿದೆ.
2007ರ ಏಪ್ರಿಲ್ ನಲ್ಲಿ ಅಭಿಷೇಕ್ – ಐಶ್ವರ್ಯ ಮದುವೆಯಾಗಿದ್ದರು. 2011ರಲ್ಲಿ ಈ ದಂಪತಿಗೆ ಆರಾಧಿ ಎಂಬ ಹೆಣ್ಣು ಮಗು ಜನಿಸಿತು.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?
Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್ ಬಾಸ್ʼ ಖ್ಯಾತಿಯ ಅಬ್ದು ವಿವಾಹ
National Cinema Day: ಈ ದಿನ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್
Dhoom 4: ಬಾಲಿವುಡ್ ʼಧೂಮ್-4ʼ ನಲ್ಲಿ ಸೌತ್ ಸ್ಟಾರ್ ಸೂರ್ಯ ವಿಲನ್?
Tumbbad 2: ಪ್ರಳಯ್ ಆಯೇಗಾ.. ಹಾರಾರ್ ಥ್ರಿಲ್ಲರ್ ‘ತುಂಬಾಡ್ʼ ಸೀಕ್ವೆಲ್ ಅನೌನ್ಸ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.