Kundapura: ನಮಗೆ ಕಾಲು ಸಂಕ ಬೇಕು: ಈ ಸಂಕ ನೋಡಿದರೇ ಕಾಲು ನಡುಗುತ್ತದೆ!

ಹಳೆ ಅಮಾಸೆಬೈಲಿನಿಂದ ಮೆಣಸಾಡಿ ದಾರಿಯಲ್ಲಿ ಅಪಾಯಕಾರಿ ಸಂಕ | ವಿಮಲಾ ನದಿ ದಾಟಲು ಸರ್ಕಸ್‌

Team Udayavani, Aug 11, 2024, 3:21 PM IST

Kundapura: ನಮಗೆ ಕಾಲು ಸಂಕ ಬೇಕು: ಈ ಸಂಕ ನೋಡಿದರೇ ಕಾಲು ನಡುಗುತ್ತದೆ!

ಕುಂದಾಪುರ: ಅಪರೂಪಕ್ಕೊಮ್ಮೆ ರಸ್ತೆ ಬದಿ ಜೀವನಕ್ಕಾಗಿ ಹಗ್ಗದ ಮೇಲೆ ನಡೆದು ಸರ್ಕಸ್‌ ಮಾಡುವವರನ್ನು ಕಂಡರೇ ಎದೆ ಝಲ್‌ ಎನ್ನುತ್ತದೆ. ಅಂತಹದ್ದರಲ್ಲಿ ಕಾಡು ಹಾದಿಯಲ್ಲಿ ಮರದ ತುಂಡು ರೀಪುಗಳು ಹಾಗೂ ಸರಿಗೆಯಿಂದ ಮಾಡಿದ ಕಾಲು ಸಂಕದಲ್ಲಿ ನಿತ್ಯವೂ ಸರ್ಕಸ್‌ ಮಾಡುತ್ತಾ ನದಿ ದಾಟುವ ಜನರ ಪರಿಸ್ಥಿತಿ ಹೇಗಿರಬಹುದು ಎಂದು ನೀವೇ ಊಹಿಸಿ.

ಹೌದು, ಅಮಾಸೆಬೈಲು ಸಮೀಪ ದ ಶೇಡಿಮನೆ ಗ್ರಾಮದ ಮೆಣಸಾಡಿ ಭಾಗದ ಜನರು ವಿಮಲಾ ನದಿಗೆ ಅವರೇ ನಿರ್ಮಿಸಿರುವ ಮರದ ಕಾಲು ಸಂಕದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು, ನೀರ ಮೇಲೆ ಸರ್ಕಸ್‌ ಮಾಡುತ್ತಾ ಓಡಾಡುತ್ತಿದ್ದಾರೆ.

ಒಂದೂವರೆ ಕಿ.ಮೀ.

ದೂರ ಈ ಕಾಲು ಸಂಕದ ಮೂಲಕವಾಗಿ ತೆರಳಿದರೆ ಹಳೆ ಅಮಾಸೆಬೈಲಿನಿಂದ ಶೇಡಿಮನೆಗೆ ಕೇವಲ ಒಂದೂವರೆ ಕಿ.ಮೀ. ಅಷ್ಟೇ ದೂರ. ಬೈಕ್‌ ಅಥವಾ ಇನ್ನಿತರ ವಾಹನ ಗಳಲ್ಲಿ ತೆರಳಬೇಕಾದರೆ ಸುತ್ತು ಬಳಸಿ ಸುಮಾರು 15 ಕಿ.ಮೀ. ದೂರ ಕ್ರಮಿಸಬೇಕು. ಅದು ಅಮಾಸೆಬೈಲಿಂದ ತೊಂಭತ್ತು ಮಾರ್ಗವಾಗಿ ಶೇಡಿಮನೆಗೆ ಬರಬೇಕಾಗಿದೆ.

7 ಕಿ.ಮೀ.ಗೆ 20 ಕಿ.ಮೀ. ಸಂಚಾರ

ಶೇಡಿಮನೆಯಿಂದ ಅಮಾಸೆಬೈಲು ಗ್ರಾಮದ ಬಳ್ಮನೆಯ ಕೋಟೆರಾಯ ದೇವಸ್ಥಾನ, ಚತುರ್ಮುಖ ಬ್ರಹ್ಮ ದೇವಸ್ಥಾನಕ್ಕೆ ಹೋಗುವವರು ಸಾಕಷ್ಟು ಜನ ಇದ್ದಾರೆ. ಈ ವಿಮಲಾ ನದಿ ದಾಟಿದರೆ ಕೇವಲ 7 ಕಿ.ಮೀ. ದೂರದ ಅಂತರವಷ್ಟೆ ಇರುವುದು. ಆದರೆ ಸಂಪರ್ಕ ಕಾಲು ಸಂಕವಿಲ್ಲದ ಕಾರಣ ಬರೋಬ್ಬರಿ 20 ಕಿ.ಮೀ. ಸುತ್ತಾಟ ನಡೆಸಿ, ಬರಬೇಕಾದ ಸ್ಥಿತಿ ಇಲ್ಲಿನ ಭಕ್ತರದು.

ಚಿಕ್ಕ ಮಕ್ಕಳು, ಹಿರಿಯರಿಗೆ ದಾಟಲು ಸಾಧ್ಯವೇ ಇಲ್ಲ

ಇದು ಅಂತಿಂಥ ಕಾಲು ಸಂಕವಲ್ಲ. ಅಡಿಕೆ ಮರದ ರೀಪುಗಳು ಹಾಗೂ ಸರಿಗೆಯಿಂದ ಮಾಡಿರುವ ಕಾಲು ಸಂಕ. ಸುಮಾರು 65-70 ಮೀಟರ್‌ ದೂರದವರೆಗೆ ಇರುವ ಈ ಕಾಲು ಸಂಕದಲ್ಲಿ ನಡೆಯುವುದೇ ಒಂದು ದೊಡ್ಡ ಸವಾಲು. ದೊಡ್ಡವರು ಆದರೂ ಹೇಗೋ ಕಷ್ಟಪಟ್ಟುಕೊಂಡು ನಡೆದುಕೊಂಡು ಹೋದಾರು, ಆದರೆ ಚಿಕ್ಕ ಮಕ್ಕಳು ಮಾತ್ರ ನಡೆಯಲು ಸಾಧ್ಯವೇ ಇಲ್ಲದಂತಿದೆ. ನಡೆದರೂ ಅಪಾಯ ಕಟ್ಟಿಟ್ಟ ಬುತ್ತಿ. ನಿತ್ಯಬೆಳ್ಳಂಬೆಳಗ್ಗೆ 4 ಗಂಟೆಗೆ ಇಲ್ಲಿಂದ ಕುರ್ಲಾನ್‌ ಎಸ್ಟೇಟ್‌, ಇನ್ನಿತರ ಎಸ್ಟೇಟ್‌ಗಳಿಗೆ ಕೆಲಸಕ್ಕೆ ಹೋಗುವವರು ಇದೇ ಕಾಲು ಸಂಕದಲ್ಲಿ ಸರ್ಕಸ್‌ ಮಾಡಿಕೊಂಡು ಹೋಗುತ್ತಾರೆ. ಈ ಭಾಗದಲ್ಲಿ ಸುಮಾರು 20 ಎಸ್ಟೇಟ್‌ಗಳಿದ್ದು, ಅಲ್ಲಿಗೆ ಹೋಗುವವರಿಗೆ ಇದೇ ಹತ್ತಿರದ ದಾರಿ. ಇಲ್ಲದಿದ್ದರೆ ಹತ್ತಾರು ಕಿ.ಮೀ. ಸುತ್ತಾಡಿ ವಾಹನಗಳಲ್ಲಿ ಬರಬೇಕು.

ನಿತ್ಯವೂ ಇದೇ ಪಾಡು

ಕೆಲಸಕ್ಕೆ ಹೋಗಬೇಕಾದರೆ ಇದೇ ಕಾಲು ಸಂಕದಲ್ಲಿ ಕಷ್ಟಪಟ್ಟುಕೊಂಡು ಹೋಗಬೇಕು. ಇಲ್ಲದಿದ್ದರೆ ಬೈಕ್‌ ಮೂಲಕ ಸುತ್ತು ಬಳಸಿ ಬರಬೇಕಾಗಿದೆ. ಸುಮಾರು ಸಮಯಗಳಿಂದ ಎಲ್ಲರಿಗೂ ಮನವಿ ಮಾಡಿ ಆಯಿತು. ಕಾಲು ಸಂಕವೂ ಆಗಿಲ್ಲ. ಇದ್ದಂತಹ ರಸ್ತೆಯೂ ಇಲ್ಲದಂತಾಗಿದೆ. ಈ ಕಾಲು ಸಂಕವನ್ನು ಶಾಸಕರು, ಸಂಸದರು ಹಾಗೂ ಸಂಬಂಧಪಟ್ಟವರು ಮಾಡಿಕೊಡಲಿ ಅನ್ನುವುದು ನಮ್ಮ ಒತ್ತಾಯವಾಗಿದೆ.

– ರಾಘವೇಂದ್ರ ಗೋಳಿಗದ್ದೆ, ಸ್ಥಳೀಯರು

ಎರಡು ಗ್ರಾಮ ಬೆಸೆಯುವ ಸಂಕ

ಇಲ್ಲಿ ಕಾಲು ಸಂಕವಾದರೆ ಅಮಾಸೆಬೈಲು ಗ್ರಾಮ ಹಾಗೂ ಶೇಡಿಮನೆ ಈ ಎರಡೂ ಗ್ರಾಮಗಳು ಇನ್ನಷ್ಟು ಹತ್ತಿರವಾಗಲಿದೆ. ಶೇಡಿಮನೆ ಗ್ರಾಮದ ಮೆಣಸಾಡಿ ಭಾಗದ ಜನರು ಅಮಾಸೆಬೈಲು ಪೇಟೆ, ಜಡ್ಡಿನಗದ್ದೆಗೆ ತೆರಳಲು ಇದು ಹತ್ತಿರವಾಗಲಿದೆ. ಈ ಕಾಲು ಸಂಕದಿಂದ ಕುಂದಾಪುರದ ಶಾಸಕರ ಮನೆಗೆ ಕೇವಲ 2 ಕಿ.ಮೀ. ಅಷ್ಟೆ ದೂರವಿದೆ. ಈ ಬಾರಿಯಾದರೂ ಒಂದು ಸುಸಜ್ಜಿತ ಕಾಲು ಸಂಕ ಆಗಲಿ ಅನ್ನುವುದು ನಿತ್ಯವೂ ಈ ಅಪಾಯಕಾರಿ ಮರದ ಕಾಲು ಸಂಕದಲ್ಲಿ ಸರ್ಕಸ್‌ ಮಾಡಿಕೊಂಡು ತೆರಳುತ್ತಿರುವ ಜನರ ಒಕ್ಕೊರಲ ಮನವಿ.

60ಕ್ಕೂ ಮಿಕ್ಕಿ ಮನೆಗೆ ಪ್ರಯೋಜನ

ಮೆಣಸಾಡಿ ಪ್ರದೇಶದಲ್ಲಿ ವಿಮಲಾ ನದಿಗೆ ಸುಸಜ್ಜಿತವಾದ, ವಾಹನಗಳು ಸಂಚರಿಸಲು ಸಾಧ್ಯವಿರುವಂತಹ ಕಾಲು ಸಂಕವಾದರೆ ಬಳ್ಮನೆ, ಹಂದಿಮನೆ ಪರಿಸರದ 10ಕ್ಕೂ ಮಿಕ್ಕಿ ಮನೆಗಳಿಗೆ ಶೇಡಿಮನೆ ಕಡೆಗೆ, ಹಳೆ ಅಮಾಸೆಬೈಲಿನ 50ಕ್ಕೂ ಮಿಕ್ಕಿ ಮನೆಗಳಿಗೆ ಪ್ರಯೋಜನವಾಗಲಿದೆ. ಇದಲ್ಲದೆ ಶೇಡಿಮನೆ ಭಾಗದ ಗೋಳಿಗದ್ದೆ, ಮೆಣಸಾಡಿ, ಮರೂರು, ಶೇಡಿಮನೆ, ಅರಸಮ್ಮಕಾನು ಪ್ರದೇಶದ ಜನರಿಗೂ ಅಮಾಸೆಬೈಲು ಕಡೆಗೆ ತೆರಳಲು ಅನುಕೂಲವಾಗಲಿದೆ.

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

1-dsad

Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್‌ನಲ್ಲಿ ಸಿಲುಕಿಕೊಂಡ ಮಹಿಳೆ!!

CHandrababu-Naidu

Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು

Theetrhalli–Sunil

Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ! 

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Udupi: ಮದ್ಯ ಸೇವಿಸಿ ಬಸ್‌ ಚಾಲನೆ: ಪ್ರಕರಣ ದಾಖಲು

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

POlice

Kundapura: ನಿಂದನೆ, ಜೀವ ಬೆದರಿಕೆ: ಕೇಸು ದಾಖಲು

13

Udupi: ಅಪಾಯಕಾರಿಯಾಗಿ ಬಸ್‌ ಚಾಲನೆ: ಪ್ರಕರಣ ದಾಖಲು

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-weewqe

Road roller ಅಡಿಯಲ್ಲಿ ಸಿಲುಕಿ ಇಬ್ಬರು ದಾರುಣ ಸಾ*ವು

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

1-dsad

Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್‌ನಲ್ಲಿ ಸಿಲುಕಿಕೊಂಡ ಮಹಿಳೆ!!

CHandrababu-Naidu

Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು

Theetrhalli–Sunil

Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ! 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.