Manichitrathazhu: ರೀ- ರಿಲೀಸ್‌ ಆಗಲಿದೆ ʼನಾಗವಲ್ಲಿʼ ಕಥೆಯ ʼಮಣಿಚಿತ್ರತಾಳ್ʼ; ಯಾವಾಗ?


Team Udayavani, Aug 11, 2024, 6:21 PM IST

12

ಕೊಚ್ಚಿ: ರೀ- ರಿಲೀಸ್‌ ಚಿತ್ರಗಳ ಟ್ರೆಂಡ್ ಸಾಲಿಗೆ ಮಾಲಿವುಡ್‌ ನ ಸೂಪರ್‌ ಚಿತ್ರವೊಂದು ಸೇರಿದೆ. ‌ 1993ರಲ್ಲಿ ಬಂದ ಮೋಹನ್‌ ಲಾಲ್‌, ಸುರೇಶ್‌ ಗೋಪಿ ಅಭಿನಯದ ಸಿನಿಮಾ ಮತ್ತೆ ಬಿಗ್‌ ಸ್ಕ್ರೀನ್‌ ನಲ್ಲಿ ತೆರೆಗೆ ಬರಲು ಸಿದ್ದವಾಗಿದೆ.

1993 ರಲ್ಲಿ ಮಾಲಿವುಡ್‌ ನಲ್ಲಿ ಬಂದ ಸೈಕಲಾಜಿಕಲ್ ಹಾರಾರ್ ಥ್ರಿಲ್ಲರ್ ʼ ಮಣಿಚಿತ್ರತಾಳ್ʼ (Manichitrathazhu) ಬಾಕ್ಸ್‌ ಆಫೀಸ್‌ನಲ್ಲಿ ಅಂದು ಮೋಡಿ ಮಾಡಿತ್ತು. ಇದೀಗ 31 ವರ್ಷದ ಬಳಿಕ ಸಿನಿಮಾ ರೀ- ರಿಲೀಸ್‌ ಆಗಲಿದೆ.

ಫಾಸಿಲ್‌ ನಿರ್ದೇಶನ ಮಾಡಿದ್ದ ಈ ಸಿನಿಮಾ ಮಾಲಿವುಡ್‌ನಲ್ಲಿ ದೊಡ್ಡ ಹಿಟ್‌ ಆಗುವುದರ ಜೊತೆಗೆ ಇತರೆ ಭಾಷೆಗೆ ರಿಮೇಕ್‌ ಆಗಿತ್ತು. ಮೋಹನ್‌ ಲಾಲ್ (Mohanlal), ಶೋಭನಾ(Shobana), ಸುರೇಶ್‌ ಗೋಪಿ (Suresh Gopi) ಪ್ರಧಾನ ಪಾತ್ರದಲ್ಲಿ ನಟಿಸಿದ್ದರು.

ಶೋಭನಾ ʼಗಂಗಾʼ ಪಾತ್ರದಲ್ಲಿ ʼನಾಗವಲ್ಲಿʼಯಾಗಿ ಕಾಣಿಸಿಕೊಂಡಿದ್ದರು. ಮೋಹನ್‌ ಲಾಲ್‌ ಡಾ.ಸನ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

31 ವರ್ಷದ ಬಳಿಕ ʼಮಣಿಚಿತ್ರತಾಳ್‌ʼ 4K ಡಾಲ್ಬಿ ಅಟ್ಮಾಸ್ ಫಾರ್ಮ್ಯಾಟ್ ನಲ್ಲಿ ರೀ – ರಿಲೀಸ್‌ ಆಗಲಿದೆ. ಇದೇ ಆಗಸ್ಟ್‌ 17 ರಂದು  ʼಮಣಿಚಿತ್ರತಾಳ್‌ʼ ತೆರೆ ಕಾಣಲಿದೆ.

ಸಿನಿಮಾದ ರೀ – ರಿಲೀಸ್‌ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರತಂಡ ಸಿನಿಮಾದ ಸಿಬ್ಬಂದಿಗಾಗಿ ವಿಶೇಷ ಶೋವನ್ನು ಆಯೋಜಿಸಿತು. ಈ ಪ್ರಿಮಿಯರ್‌  ಶೋಗೆ ಅಮೋಘ ರೆಸ್ಪಾನ್ಸ್‌ ಸಿಕ್ಕಿದೆ.

4 ಭಾಷೆಗೆ ರಿಮೇಕ್‌ ಆಗಿತ್ತು ʼʼಮಣಿಚಿತ್ರತಾಳ್‌ʼ:

2005ರಲ್ಲಿ ಪಿ.ವಾಸು(P.Vasu) ಇದನ್ನು ತಮಿಳಿಗೆ ರಿಮೇಕ್‌ ಮಾಡಿದ್ದರು. ʼಚಂದ್ರಮುಖಿʼ (Chandramukhi) ಎನ್ನುವ ಟೈಟಲ್‌ ನಲ್ಲಿ ಈ ಸಿನಿಮಾ ಬಂದಿತ್ತು. ಕನ್ನಡದಲ್ಲಿ ಪಿ.ವಾಸು ಅವರೇ ʼಆಪ್ತಮಿತ್ರʼ ಎನ್ನುವ ಟೈಟಲ್‌ ನಲ್ಲಿ ಬಂದಿತ್ತು. ವಿಷ್ಣುವರ್ಧನ್‌, ಸೌಂದರ್ಯ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು.  ಬೆಂಗಾಳಿ ಭಾಷೆಯಲ್ಲಿ ʼರಾಜ್‌ಮೊಹೋಲ್ʼ, ಹಿಂದಿ ಭಾಷೆಯಲ್ಲಿ ʼಭೂಲ್ ಭುಲೈಯಾʼ (Bhool Bhulaiyaa) ಟೈಟಲ್‌ ನಲ್ಲಿ ಬಂದಿತ್ತು. ಅಕ್ಷಯ್‌ ಕುಮಾರ್‌ (Akshay Kumar) ವಿದ್ಯಾ ಬಾಲನ್‌ (Vidya Balan) ಹಿಂದಿಯಲ್ಲಿ ಲೀಡ್‌ ರೋಲ್‌ ನಲ್ಲಿ ನಟಿಸಿದ್ದರು. ಈ ಸಿನಿಮಾಗಳ ಸೀಕ್ವೆಲ್‌ ಕೂಡ ರಿಲೀಸ್‌ ಆಗಿ ಸದ್ದು ಮಾಡಿತ್ತು.

ಟಾಪ್ ನ್ಯೂಸ್

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

6

Kanguva Movie: ಸೂರ್ಯ ಪ್ಯಾನ್‌ ಇಂಡಿಯಾ ʼಕಂಗುವʼ ಹೊಸ ರಿಲೀಸ್‌ ಡೇಟ್‌ ಔಟ್

Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್‌ ಟಿಆರ್‌ ಸಿನಿಮಾ ವೀಕ್ಷಿಸಿದ ರೋಗಿ.!

Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್‌ ಟಿಆರ್‌ ಸಿನಿಮಾ ವೀಕ್ಷಿಸಿದ ರೋಗಿ.!

12

Actress Sakunthala: ಹೃದಯಾಘಾತದಿಂದ ಬಹುಭಾಷಾ ನಟಿ ʼಸಿ.ಐ.ಡಿ. ಶಕುಂತಲಾʼ ನಿಧನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಮಲ್ಪೆ ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Malpe ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.