Fan throated lizard: ಬೀಸಣಿಕೆ ಗಂಟಲ ಹಲ್ಲಿ ಎಂಬ ವಿಸ್ಮಯ


Team Udayavani, Aug 11, 2024, 6:37 PM IST

12334

ಹಿಂದಿನ ಕಾಲುಗಳನ್ನು ಬಳಸಿ ಓಡುವ, ನಿಲ್ಲುವ ಸಾಮರ್ಥ್ಯ ಹೊಂದಿರುವ ಬೀಸಣಿಕೆ ಗಂಟಲಿನ ಹಲ್ಲಿಗಳು ಕುರುಚಲು ಪ್ರದೇಶಗಳು, ಹುಲ್ಲುಗಾವಲು ಅಥವಾ ಬಂಡೆಗಳಿಂದ ಕೂಡಿದ ಬಯಲು ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಹಗಲು ಹೊತ್ತಿನಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ಅತ್ಯುತ್ತಮ ದೃಷ್ಟಿ ಮತ್ತು ಚುರುಕುತನದಿಂದ, ತ್ವರಿತ ಹಠಾತ್‌ ಚಲನೆಗಳನ್ನು ಬಳಸಿಕೊಂಡು ಬೇಟೆಯಾಡುತ್ತವೆ. 

ಮೆಣಸಿನಕಾಯಿಗೆ ಹೆಸರಾದ ಬ್ಯಾಡಗಿಯ ಹೊಲದಲ್ಲಿ, ಶೇಂಗಾ ಬೆಳೆಯುವುದಕ್ಕೆ ಆಗಷ್ಟೇ ಉಳುಮೆ ಮಾಡಿದ ಶುಷ್ಕ ಕಪ್ಪು ಮಣ್ಣಿನ ನೆಲದಲ್ಲಿ ಓಡಾಡುತ್ತಿದ್ದಾಗ, ಸರಸರ ಹರಿದಾಡುತ್ತಿದ್ದ ಓತಿಕ್ಯಾತದಂಥ ಪ್ರಾಣಿ ಕಣ್ಣಿಗೆ ಬಿತ್ತು. ಇದರ ಕತ್ತಿನ ಕೆಳಭಾಗದ ಬಣ್ಣ ಗಮನಿಸಿದಾಗ ಇದು ಓತಿಕ್ಯಾತ ಅಲ್ಲ ಎಂಬುದು ಅರಿವಾಯಿತು. ಮಣ್ಣಿನ ಗುಡ್ಡೆ ಏರಿ ನಿಂತು ಕತ್ತಿನ ಭಾಗವನ್ನು ಪುಷ್‌-ಅಪ್‌ ಮಾಡುತ್ತಿದ್ದಂತೆ ಅದರ ಗಂಟಲಿನ ವರ್ಣಮಯ ಬೀಸಣಿಕೆಯಂತಹ ಭಾಗವೇ ಹೇಳಿತು, ಇದು ಬೀಸಣಿಕೆ ಗಂಟಲಿನ ಹಲ್ಲಿ  (ಫ್ಯಾನ್‌ ತ್ರೋಟೆಡ್‌ ಲಿಜಾರ್ಡ್‌) ಎಂದು.

ಸಾಮಾನ್ಯವಾಗಿ ಈ ಜಾತಿಯ ಹಲ್ಲಿಗಳು ಒಣ ಕುರುಚಲು ಪ್ರದೇಶಗಳು, ಹುಲ್ಲುಗಾವಲು ಅಥವಾ ಬಂಡೆಗಳಿಂದ ಕೂಡಿದ ಬಯಲು ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಇದು ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಮೊದಲಾದ ದಕ್ಷಿಣ ಏಷ್ಯಾದ  ಭಾಗಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಣ್ಣ ಹಲ್ಲಿಗಳ ಜಾತಿ. ಇದರ ವೈಜ್ಞಾನಿಕ ಹೆಸರು ಸಿತಾನಾ ಪಾಂಟಿಸೆರಿಯಾನಾ.  ಗಂಟಲಿನ ಕೆಳಗಡೆ ಇರುವ ಬೀಸಣಿಕೆ ಆಕಾರದ ಚರ್ಮದ ಮಡಿಕೆ (ಡ್ಯೂಲಾಪ್‌) ಇದರ ವಿಶೇಷತೆ. ಗಂಡು ಹಲ್ಲಿಗಳ ಗಂಟಲಿನ ಕೆಳಭಾಗ ಸಡಿಲವಾದ ಚರ್ಮದ ಹೊದಿಕೆ ಹೊಂದಿದ್ದು, ಬಂಡೆಯ ಮೇಲೆ ಓಡುವಾಗ ನಾಗರ ಭಂಗಿಯಲ್ಲಿ  ಹೆಡೆ ಎತ್ತಿ ನಿಲ್ಲುತ್ತವೆ. ಎದೆಯುಬ್ಬಿಸಿ ನಿಂತಾಗ ಕಪ್ಪು, ಕಿತ್ತಳೆ ಮತ್ತು ನೀಲಿ ಬಣ್ಣದ ಬೀಸಣಿಕೆಯಾಕಾರದ ವರ್ಣರಂಜಿತ ಚರ್ಮದ ಹೊದಿಕೆ ಎದ್ದು ಕಾಣುತ್ತದೆ.

ಗಂಡು ಹಲ್ಲಿಯೇ ಆಕರ್ಷಣೀಯ…

ಇವು ಸುಮಾರು 26 ಮಿಲಿಯನ್‌ ವರ್ಷಗಳ ಹಿಂದೆಯೇ ಭೂಮಿಯಲ್ಲಿ ಕಾಣಿಸಿಕೊಂಡ ಸರೀಸೃಪಗಳು ಎನ್ನಲಾಗುತ್ತದೆ. ತಮ್ಮ ಹತ್ತಿರದ ಸಂಬಂಧಿಗಳಾದ ಕಾಂಗರೂ ಹಲ್ಲಿಗಳಿಂದ ಬೇರ್ಪಟ್ಟು ರೂಪಾಂತರಗೊಂಡ ಜೀವಿಗಳು. ಎರಡು ಗುಂಪುಗಳು ಲಕ್ಷಾಂತರ ವರ್ಷಗಳ ಹಿಂದೆ ತೇವಾಂಶವುಳ್ಳ ಕಾಡುಗಳಲ್ಲಿ ವಾಸಿಸುತ್ತಿದ್ದ ತಮ್ಮ ಪೂರ್ವಜರ ರೂಪದಿಂದ ವಿಕಸನಗೊಂಡು ಈ ರೂಪ ಪಡೆದಿವೆ ಎಂದು ನಂಬಲಾಗಿದೆ. ಭಾರತದಲ್ಲಿ ಕನಿಷ್ಠ 15 ಹಾಗೂ ಉಪಖಂಡದಲ್ಲಿ 18 ಕ್ಕೂ ಹೆಚ್ಚಿನ ಹಲ್ಲಿ ಜಾತಿಗಳಿವೆ. ಬೀಸಣಿಕೆ ಗಂಟಲಿನ ಹಲ್ಲಿಗಳು ಸೀತಾನಾ ಹಾಗೂ ಸರದಾ ಎಂಬ ಎರಡು ಕುಲಗಳಿಗೆ ಸೇರಿವೆ. ಇವು 5 ರಿಂದ 10 ಸೆಂ.ಮೀ.ಗಳಷ್ಟು ಉದ್ದವಾದ ದೇಹ ಹೊಂದಿದ್ದು, ದೇಹಕ್ಕಿಂತ ಉದ್ದವಾದ ತೆಳುವಾದ ಬಾಲವನ್ನು ಹೊಂದಿರುತ್ತವೆ. ಲೈಂಗಿಕ ದ್ವಿರೂಪತೆಯನ್ನು ಪ್ರದರ್ಶಿಸುವ ಈ ಜಾತಿಯಲ್ಲಿ ಗಂಡು ಹೆಚ್ಚು ವರ್ಣರಂಜಿತ. ಅದರ ಕೊರಳಿನ ಸುತ್ತ ಇರುವ ಚರ್ಮದ ಪ್ಲಾಪ್‌ ಕಪ್ಪು, ಕೆಂಪು, ನೀಲಿ ಬಣ್ಣಗಳ ಸಂಯೋಜನೆಯಿಂದಾಗಿ ಬಹಳ ಆಕರ್ಷಕವಾಗಿ ಕಾಣುತ್ತವೆ. ಹೆಣ್ಣು  ಹಲ್ಲಿಗಳು ಸಾಮಾನ್ಯವಾಗಿ ಮಂದವಾದ ಬಣ್ಣ ಹೊಂದಿರುತ್ತವೆ.

ಬಾಲವೇ ವಿಶೇಷ..!

ಇರುವೆಗಳು, ಜೀರುಂಡೆಗಳು ಮತ್ತಿತರ ಸಣ್ಣ ಕೀಟಗಳೇ ಇವುಗಳ ಮುಖ್ಯ ಆಹಾರ.  ಅತ್ಯುತ್ತಮ ದೃಷ್ಟಿ ಮತ್ತು ಚುರುಕುತನದಿಂದ, ತ್ವರಿತ ಹಠಾತ್‌ ಚಲನೆಗಳನ್ನು ಬಳಸಿಕೊಂಡು ಬೇಟೆಯಾಡುತ್ತವೆ. ಹಿಂದಿನ ಕಾಲುಗಳನ್ನು ಬಳಸಿ ಓಡುವ, ನಿಲ್ಲುವ ಸಾಮರ್ಥ್ಯ ಹೊಂದಿವೆ. ಹಗಲು ಹೊತ್ತಿನಲ್ಲಿ ಇವು ಹೆಚ್ಚು ಸಕ್ರಿಯವಾಗಿರುತ್ತವೆ. ತಮ್ಮ ಮರೆಮಾಚುವಿಕೆ ತಂತ್ರ, ವಿಷಸ್ರಾವ ಮಾಡುವುದು, ತಮ್ಮ ಬಾಲಗಳನ್ನೇ ಕಳಚಿ ಪರಭಕ್ಷಕಗಳಿಂದ ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತವೆಯಾ­ದರೂ, ತೆರೆದ ಪ್ರದೇಶ, ಬಯಲುಗಳಲ್ಲಿಯೇ ಹೆಚ್ಚು ಓಡಾಡುತ್ತಿರುವುದರಿಂದ ಒಮ್ಮೊಮ್ಮೆ ಹಾವು, ಗಿಡುಗವೇ ಮೊದಲಾದ ಪರಭಕ್ಷಕಗಳಿಗೆ ಆಹಾರವಾಗಿ ಬಿಡುತ್ತವೆ. ಒಮ್ಮೆ ಕಳಚಿದ ಇವುಗಳ ಬಾಲ ಎಲ್ಲ  ಹಲ್ಲಿಗಳಂತೆ ಮತ್ತೆ ಬೆಳೆಯುವುದೊಂದು  ವಿಶೇಷ.

 ಅದೃಷ್ಟದ ಸಂಕೇತ…

ಏಪ್ರಿಲ್, ಮೇ ತಿಂಗಳು ಬೀಸಣಿಕೆ ಗಂಟಲಿನ ಹಲ್ಲಿಗಳ ಸಂತಾನೋತ್ಪತ್ತಿಯ ಸಮಯ. ಹೆಣ್ಣನ್ನು ಆಕರ್ಷಿಸಲು ಗಂಡು ತನ್ನ ಗಂಟಲಿನ ಚರ್ಮವನ್ನು ಉಬ್ಬಿಸಿ ಬಣ್ಣದ ಬೀಸಣಿಕೆ ತೋರಿಸಿ ಆಕರ್ಷಿಸುತ್ತದೆ. ಯಶಸ್ವಿ ಸಂಯೋಗದ ನಂತರ ಹೆಣ್ಣು ಹಲ್ಲಿ, ಮಣ್ಣಿನ ಚಿಕ್ಕ ಚಿಕ್ಕ ಬಿಲಗಳಲ್ಲಿ ಮೊಟ್ಟೆಗಳನ್ನಿಟ್ಟು ಹಲವಾರು ವಾರಗಳ ಕಾಲ ಕಾವು ಕೊಡುತ್ತದೆ. ನಂತರದಲ್ಲಿ ಮರಿಗಳು ಹೊರಬಂದು ಹೊಸ ಜೀವನ ಆರಂಭಿಸುತ್ತವೆ. ರೈತಾಪಿ ಜನ ಬೀಸಣಿಕೆ ಗಂಟಲಿನ ಹಲ್ಲಿಯನ್ನು ಅದೃಷ್ಟದ ಸಂಕೇತವೆಂದು ನಂಬುತ್ತಾರೆ. ಇವು ಮಳೆಯ ಮುನ್ಸೂಚನೆ ನೀಡುತ್ತವೆ ಎಂದು ಭಾವಿಸುತ್ತಾರೆ. ಹೊಲ, ಗದ್ದೆಗಳಲ್ಲಿ ಕೀಟಗಳ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಇವು ಸಹಕಾರಿಯಾದ್ದರಿಂದ ರೈತರ ಪಾಲಿನ ಮಿತ್ರನೂ ಹೌದು.

ಚಿತ್ರ-ಲೇಖನ: ಜಿ. ಆರ್‌. ಪಂಡಿತ್‌, ಸಾಗರ

ಟಾಪ್ ನ್ಯೂಸ್

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

Gudavi Pakshidhama: ದೂರದೊಂದು ತೀರದಿಂದ… ಸೈಬೀರಿಯಾದಿಂದ ಶಿವಮೊಗ್ಗದ ಗುಡವಿಗೆ!

Gudavi Pakshidhama: ದೂರದೊಂದು ತೀರದಿಂದ… ಸೈಬೀರಿಯಾದಿಂದ ಶಿವಮೊಗ್ಗದ ಗುಡವಿಗೆ!

2

Short Stories: ಸಣ್ಕತೆ ಸಾಮ್ರಾಜ್ಯ: ಪುಟ್‌ ಪುಟ್‌ ಕತೆ, ಪುಟಾಣಿ ಕತೆ…

ಹಸಿರು ವನಸಿರಿ ಸಂಡೂರಿನ ಸಿರಿ

ಹಸಿರು ವನಸಿರಿ ಸಂಡೂರಿನ ಸಿರಿ

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.