Udupi; ಶ್ರೀಕೃಷ್ಣಮಾಸೋತ್ಸವ-ಸಾಂಸ್ಕೃತಿಕ ವೈವಿಧ್ಯ
Team Udayavani, Aug 11, 2024, 11:00 PM IST
ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀಕೃಷ್ಣ ಮಾಸೋತ್ಸವ “ಶ್ರೀಕೃಷ್ಣ ಜನ್ಮಾಷ್ಟಮಿ-ಶ್ರೀಕೃಷ್ಣ ಲೀಲೋತ್ಸವ’ ಪ್ರಯುಕ್ತ ರಾಜಾಂಗಣದಲ್ಲಿ ಸಂಜೆ 7ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಆ. 25ರಂದು ಮಂಗಳೂರು ನಾದನೃತ್ಯ ಸ್ಕೂಲ್ ಆಫ್ ಡ್ಯಾನ್ಸ್ ಆ್ಯಂಡ್ ಕಲ್ಚರಲ್ ಟ್ರಸ್ಟ್ನ ಡಾ| ಭ್ರಮರೀ ಶಿವಪ್ರಕಾಶ್ ಅವರಿಂದ ಬಣ್ಣಗಳ ಭಾವಲೋಕ ನೃತ್ಯ ಕಾರ್ಯಕ್ರಮ ನೆರವೇರಲಿದೆ (ಚಿತ್ರ: 1).
ಆ. 28ರಂದು ಬೆಂಗಳೂರಿನ ನಾಟ್ಯರತ್ನ ಗುರು ಡಾ| ಸಂಜಯ್ ಶಾಂತಾರಾಮ್ ಮತ್ತು ಶಿವಪ್ರಿಯ ತಂಡದಿಂದ ಶ್ರೀ ಕೃಷ್ಣಾಮೃತ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ ಎಂದು ಶ್ರೀ ಮಠದ ಪ್ರಕಟನೆ ತಿಳಿಸಿದೆ (ಚಿತ್ರ: 2).
ಆ. 23ರಂದು ಎಸ್. ಐಶ್ವರ್ಯ ಮತ್ತು ಎಸ್. ಸೌಂದರ್ಯ ಅವರಿಂದ “ಜಗದೋದ್ಧಾರನ’ ಕರ್ನಾಟಕ ಸಂಗೀತ ಕಛೇರಿಯಲ್ಲಿ ಜನಾರ್ದನ್ ಶ್ರೀನಾಥ್ ವಯೋಲಿನ್, ಪುತ್ತೂರು ನಿಕ್ಷಿತ್ ಮೃದಂಗ ಹಾಗೂ ಪಯ್ಯನೂರು ಗೋವಿಂದ ಪ್ರಸಾದ್ ಅವರು ಮೋರ್ಸಿಂಗ್ನಲ್ಲಿ ಸಾಥ್ ನೀಡಲಿದ್ದಾರೆ (ಚಿತ್ರ: 3).
ಆ. 17ರಂದು ದಾಸವಾಣಿ ಸಂಗೀತ ಕಛೇರಿಯಲ್ಲಿ ರಾಮ್ ರಕ್ಷಿತ್ ವಿ. ಅವರ ಗಾಯನಕ್ಕೆ ಶ್ರೀಪಾದ್ ದಾಸ್ ರಾಯಚೂರ್ ಅವರ ಹಾರ್ಮೋನಿಯಂ, ಗೋಪಾಲ್ ಗುಡಿಬಂಡೆ ಅವರ ತಬಲಾ ವಾದನ ಇರಲಿದೆ (ಚಿತ್ರ: 4).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.