Moodbidri ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದರೂ ಹೃದ್ರೋಗಿಯ ಜೀವ ಉಳಿಸಲಾಗಲಿಲ್ಲ!
Team Udayavani, Aug 11, 2024, 11:24 PM IST
ಮೂಡುಬಿದಿರೆ: ಪ್ರಯಾಣಿಕರೊಬ್ಬರು ಹೃದಯಾಘಾತಕ್ಕೆ ಒಳಗಾದದ್ದನ್ನು ಗಮನಿಸಿದ ಬಸ್ ಸಿಬಂದಿ, ಬಸ್ಸನ್ನು ಆಸ್ಪತ್ರೆಗೆ ಒಯ್ದರೂ ಜೀವ ಉಳಿಸಲಾಗದ ಘಟನೆ ಶನಿವಾರ ಮೂಡುಬಿದಿರೆಯಲ್ಲಿ ನಡೆದಿದೆ.
ವೇಣೂರು ಕರಿಮಣೇಲು ನರಂಗೆ ನಿವಾಸಿ, ಕೃಷಿಕ ಸದಾನಂದ ಹೆಗ್ಡೆ (67) ಮಗಳ ಸೀಮಂತಕ್ಕೆ ಸಂಬಂಧಿಕರನ್ನು ಆಹ್ವಾನಿಸಲು ಮೂಡುಬಿದಿರೆಯಿಂದ ಕಾರ್ಕಳಕ್ಕೆ ಪತ್ನಿ ಜತೆ ತೆರಳುತ್ತಿದ್ದರು. ಬಸ್ ಹತ್ತಿ ಸ್ವಲ್ಪ ಸಮಯದಲ್ಲೇ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾದರು.
ಕೂಡಲೇ ನಿರ್ವಾಹಕ ನವೀನ್ ಅವರು ಚಾಲಕ ವಿಜಯ್ಗೆ ತಿಳಿಸಿದರು.
ಚಾಲಕ ಬಸ್ಸನ್ನು ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿ ವೈದ್ಯರು ಪರೀಕ್ಷಿಸಿದಾಗ ಸದಾನಂದ ಮೃತಪಟ್ಟಿರುವುದು ತಿಳಿದು ಬಂತು. ಈಚೆಗೆ ಮಂಗಳೂರು, ಸುರತ್ಕಲ್, ಉಡುಪಿಯಲ್ಲೂ ಇಂಥದ್ದೇ ಪ್ರಕರಣಗಳು ಬಸ್ಸಿನಲ್ಲಿ ನಡೆದಿದ್ದು, ಇದು ಐದನೆಯ ಘಟನೆಯಾಗಿದೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.