Sullia: ಸುಳ್ಯದ ವಿಸ್ಮಯದ ಬಾವಿ ಶಿಲಾಯುಗದ್ದು

ಆದಿಮಕಲೆಯ ನಿರ್ಮಾಣದ ಬಾವಿ: ಅಧ್ಯಯನ ತಂಡದಿಂದ ಪ್ರಾಥಮಿಕ ಮಾಹಿತಿ

Team Udayavani, Aug 12, 2024, 4:05 PM IST

Sullia: ಸುಳ್ಯದ ವಿಸ್ಮಯದ ಬಾವಿ ಶಿಲಾಯುಗದ್ದು

ಸುಳ್ಯ: ಸುಳ್ಯದ ಅರಣ್ಯದೊಳಗಿನ ಬಾವಿ ಹಾಗೂ ವಿವಿಧ ಆಕೃತಿಗಳು ಬೃಹತ್‌ ಶಿಲಾಯುಗ ಕಾಲದ್ದು ಎಂದು ಅಧ್ಯಯನ ತಂಡ ಪ್ರಾಥಮಿಕವಾಗಿ ಮಾಹಿತಿ ನೀಡಿದೆ.

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇದಿನಡ್ಕ ಅರಣ್ಯದೊಳಗೆ ಬಾವಿ ಆಕೃತಿ ಇದ್ದು, ಇದಕ್ಕೆ ಸುಮಾರು ನೂರಾರು ಎಕ್ರೆ ವ್ಯಾಪ್ತಿಯ ಮಳೆಗಾಲದ ಒರತೆ ನೀರು ಹರಿದು ಬಂದು ಸೇರುತ್ತಿದ್ದು, ಈ ನೀರು ಬಾವಿಯೊಳಗಿನಿಂದಲೇ ಬೇರೆ ಕಡೆಯಿಂದ ಹೊರ ಹೋಗುತ್ತಿರುವುದು ಕಂಡುಬಂದಿತ್ತು. ಜತೆಗೆ ಇಲ್ಲೇ ಸಮೀಪದ ವಿಶಾಲ ಮೈದಾನದಲ್ಲಿ ವಿವಿಧ ಆಕೃತಿಗಳು ಕಂಡುಬಂದಿತ್ತು. ಈ ಬಗ್ಗೆ “ಉದಯವಾಣಿ ಸುದಿನ’ದಲ್ಲೂ ವಿಶೇಷ ವರದಿ ಪ್ರಕಟಗೊಂಡಿತ್ತು. ಇದೀಗ ಇಲ್ಲಿಗೆ ಅಧ್ಯಯನ ತಂಡ ಭೇಟಿ ನೀಡಿ, ಅಧ್ಯಯನಕ್ಕೆ ಮುಂದಾಗಿದ್ದಾರೆ. ರಾಜೇಶ್‌ ಮೇನಾಲ ಅವರ ಮಾಹಿತಿಯಂತೆ ಅಧ್ಯಯನ ತಂಡ ಆಗಮಿಸಿದೆ.

ಉಡುಪಿಯ ಶಿರ್ವದ ಮೂಲ್ಕಿ ಸುಂದರ್‌ ರಾಮ್‌ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಹಾಗೂ ಪುರಾತತ್ತ್ವಶಾಸ್ತ್ರ ವಿಭಾಗದ ನಿವೃತ್ತ ಸಹಪ್ರಾಧ್ಯಾಪಕ ಪ್ರೊ| ಟಿ.ಮುರುಗೇಶಿ ಅವರ ನೇತೃತ್ವದ ತಂಡ ಅಧ್ಯಯನಕ್ಕೆ ರವಿವಾರ ಸುಳ್ಯಕ್ಕೆ ಆಗಮಿಸಿದ್ದು, ಅರಣ್ಯದೊಳಗಿನ ಬಾವಿ, ವಿಶಾಲ ಮೈದಾನದಲ್ಲಿನ ವಿವಿಧ ಆಕೃತಿಗಳನ್ನು ಪರಿಶೀಲನೆ ನಡೆಸಿದರು. ಬ್ರಹ್ಮಾವರ ಎಸ್‌ ಎಂಎಸ್‌ ಕಾಲೇಜಿನ ಇತಿಹಾಸ ಮತ್ತು ಪುರಾತತ್ತ್ವ ವಿಭಾಗದ ಉಪನ್ಯಾಸಕ ಪ್ರಶಾಂತ್‌ ಶೆಟ್ಟಿ, ಪುರಾತ್ತತ್ತ್ವ ಸಂಶೋಧಕ ಸುಭಾಷ್‌ ನಾಯಕ್‌ ಉಡುಪಿ, ಶಿರ್ವ ಎಂಎಸ್‌ ಆರ್‌ಎಸ್‌ ಕಾಲೇಜಿನ ವಿದ್ಯಾರ್ಥಿಗಳಾದ ಅರುಣ್‌, ರವೀಂದ್ರ ಮೊದಲಾದವರು ಅಧ್ಯಯನ ತಂಡದಲ್ಲಿದ್ದಾರೆ. ಅಧ್ಯಯನ ನಡೆಸಿದ ತಂಡ ಪ್ರಾಥಮಿಕ ಅನ್ವೇಷಣೆಯ ಪ್ರಕಾರದ ಮಾಹಿತಿಯನ್ನು ಉದಯವಾಣಿಗೆ ತಿಳಿಸಿದ್ದಾರೆ. ರಾಜೇಶ್‌ ಮೇನಾಲ ಸೇರಿದಂತೆ ಸ್ಥಳೀಯ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆದಿಮಕಲೆಯ ನಿರ್ಮಾಣದ ಬಾವಿ

ಅರಣ್ಯದೊಳಗೆ ಕಂಡುಬಂದಿರುವ ಬಾವಿಯನ್ನು ಪರಿಶೀಲನೆ ನಡೆಸಿದ ಅಧ್ಯಯನ ತಂಡ, ಈ ಬಾವಿ ವಿಸ್ಮಯಕಾರಿ ರಚನೆಯಂತೆ ಕಂಡುಬಂದಿದೆ. ಬಾವಿಯ ಸಮೀಪ ಆದಿಮಕಲೆಯ ನಿವೇಶನ ಇರುವುದರಿಂದ ಈ ಆದಿಮಕಲೆಯ ನಿರ್ಮಾಣರೇ ಈ ಬಾವಿಯನ್ನು ನಿರ್ಮಿಸಿರಬಹುದೆಂದು ಭಾವಿಸಲಾಗಿದೆ.

ಖಗೋಳ ವಿಜ್ಞಾನದ ಆಕೃತಿಗಳು

ಇಲ್ಲಿನ ವಿಶಾಲ ಮೈದಾನದಲ್ಲಿ ಕೇವಲ ಸುರುಳಿ, ಕೇಂದ್ರ ಬಿಂದು ಹೊಂದಿರುವ ವೃತ್ತಗಳು ಕಂಡುಬಂದಿದೆ. ಸುರುಳಿಗಳು ನಿರ್ದಿಷ್ಟ ಸಂಖ್ಯೆ ಗುಂಪುಗಳಾಗಿ, ಪ್ರತ್ಯೇಕ ಗುಂಪುಗಳಾಗಿ ಮಾಡಿರುವುದು ಕಂಡುಬಂದಿದೆ. ಸುರುಳಿಗಳು ಖಗೋಳ ವಿಜ್ಞಾನಕ್ಕೆ ಸಂಬಂಧಿ ಸಿದ ಚಿತ್ರಗಳಂತೆ ಕಂಡುಬರುತ್ತದೆ. ಅಂದರೆ ನಕ್ಷತ್ರ ಪುಂಜಗಳು ಹಾಗೂ ಸೌರವ್ಯೂಹದ ಸಂಕೇತಗಳಾಗಿರಬಹುದು ಎಂದು ಸದ್ಯಕ್ಕೆ ಭಾವಿಸಲಾಗಿದೆ. ಇನ್ನೂ ಹೆಚ್ಚಿನ ಅಧ್ಯಯನ ಅಗತ್ಯವಿದೆ ಎಂದು ಅಧ್ಯಯನ ತಂಡ ತಿಳಿಸಿದ್ದಾರೆ.

ಬೃಹತ್‌ ಶಿಲಾಯುಗ ಕಾಲದ್ದು ಇಲ್ಲಿನ ಚಿತ್ರಗಳು ಬಹಳ ಸ್ಪಷ್ಟವಾಗಿ ಲೋಹದ, ಕಬ್ಬಿಣ ಆಯುಧ ಉಪಯೋಗಿಸಿ ಕೆತ್ತಿರುವ ಚಿತ್ರಗಳಾಗಿವೆ. ಮೇದಿನಡ್ಕ ಸಮೀಪದಲ್ಲಿ ಕರಿಯಮೂಲೆ, ಇತರ ಪ್ರದೇಶಗಳಲ್ಲಿ ಬೃಹತ್‌ ಶಿಲಾಯುಗ ಕಾಲದ ಗುಹಾ ಸಮಾಧಿಗಳು ಪತ್ತೆಯಾಗಿವೆ. ಆದ್ದರಿಂದ ಈ ಆದಿಮಕಲೆಯ ನಿರ್ಮಾಣರು ಕೂಡ ಸುಮಾರು 3 ಸಾವಿರ ವರ್ಷಗಳ ಪುರಾತನ ಬೃಹತ್‌ ಶಿಲಾಯುಗ ಕಾಲದ ಚಿತ್ರಗಳೆಂದು ತರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿರುವ ಪ್ರೊ| ಮುರುಗೇಶಿ ಅವರು ಮುಂದಿನ ದಿನಗಳಲ್ಲಿ ಮತ್ತೆ ಇಲ್ಲಿಗೆ ಆಗಮಿಸಿ ಇಲ್ಲಿ ಇದ್ದುಕೊಂಡು ಇಲ್ಲಿನ ಮತ್ತಷ್ಟು ಅಧ್ಯಯನ ನಡೆಸಿ ಮಾಹಿತಿ ನೀಡುತ್ತೇವೆ. ಈ ಮೇಲಿನ ಮಾಹಿತಿ ಸದ್ಯಕ್ಕೆ ಪ್ರಾಥಮಿಕ ಅಧ್ಯಯನದಿಂದ ಸಿಕ್ಕ ಮಾಹಿತಿ ಎಂದು ತಿಳಿಸಿದ್ದಾರೆ. ಹೆಚ್ಚಿನ ಅಧ್ಯಯನದ ಬಳಿಕ ಸ್ಪಷ್ಟ ಮಾಹಿತಿ ನೀಡಲಾಗುವುದು ಎಂದರು.

ಟಾಪ್ ನ್ಯೂಸ್

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupa ಲಡ್ಡು ಪ್ರಸಾದ ಪ್ರಮಾದ!

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-bantwala

Bantwala: ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದ ಯುವತಿ ನಾಪತ್ತೆ

Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ

Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ

Thumbe: ಅಗೆದಲ್ಲಿ ಕಡೆಗೂ ಡಾಮರು

Thumbe: ಅಗೆದಲ್ಲಿ ಕಡೆಗೂ ಡಾಮರು

Puttur: ಶೂನ್ಯ ತ್ಯಾಜ್ಯದತ್ತ ಪುತ್ತೂರು; ಹಸಿ ಕಸದಿಂದ ಬಯೋಗ್ಯಾಸ್‌ ತಯಾರಿ

Puttur: ಶೂನ್ಯ ತ್ಯಾಜ್ಯದತ್ತ ಪುತ್ತೂರು; ಹಸಿ ಕಸದಿಂದ ಬಯೋಗ್ಯಾಸ್‌ ತಯಾರಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.