Bhyrappa: ನನ್ನ ಕಾದಂಬರಿಗಳಿಗೆ ಹಣ ನೀಡದ ಹಿಂದಿ ಪ್ರಕಾಶಕರು- ಬೈರಪ್ಪ ಬೇಸರ
Team Udayavani, Aug 12, 2024, 4:39 PM IST
■ ಉದಯವಾಣಿ ಸಮಾಚಾರ
ಮೈಸೂರು: ನಾನು ಬರೆದ ಅನೇಕ ಕಾದಂಬರಿಗಳು ಹಿಂದಿ ಭಾಷೆಗೆ ತರ್ಜುಮೆ ಯಾಗಿವೆ. ಲಕ್ಷಾಂತರ ಪ್ರತಿಗಳೂ
ಮಾರಾಟವಾಗಿವೆ. ಆದರೆ, ಲೆಕ್ಕವನ್ನೇ ಕೊಡುತ್ತಿಲ್ಲ, ಹಣವನ್ನೂ ನೀಡುತ್ತಿಲ್ಲ. ಇವರೆಲ್ಲ ದೇಶ, ಹಿಂದು ಸಮಾಜದ ಉದ್ಧಾರ
ಮಾಡುವವರು ಎಂದು ಹಿರಿಯ ಕಾದಂಬರಿಕಾರ ಪ್ರೊ.ಎಸ್.ಎಲ್. ಬೈರಪ್ಪ ಬೇಸರ ವ್ಯಕ್ತಪಡಿಸಿದರು.
ಗೋಸ್ವಾಮಿ ತುಳಸಿದಾಸ ಜಯಂತಿ, ಗೋಸ್ವಾಮಿ ತುಳಸಿದಾಸ ಸಾರಸ್ವತ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ನನ್ನ
ಕಾದಂಬರಿ ಮುದ್ರಿಸಿರುವ ಕನ್ನಡ ಪ್ರಕಾಶ ಕರು ಪ್ರಾಮಾಣಿಕರು. ನಿಯಮಿತವಾಗಿ ನನಗೆ ಹಣ ಕೊಡುತ್ತಾರೆ, ಜತೆಗೆ, ತೆರಿಗೆ
ಪಾವತಿಸುತ್ತಾರೆ.
ಆದರೆ, ಹಿಂದಿ ಪ್ರಕಾಶಕರಿಂದ ಹೀಗಾಗುತ್ತಿಲ್ಲ. ನನ್ನ 15 ಕೃತಿಗಳು ಹಿಂದಿ ಭಾಷೆಯಲ್ಲೇ 78 ಮರು ಮುದ್ರಣಗೊಂಡಿವೆ. ಮೊದಲು ಮುದ್ರ ಣಕ್ಕೆ 25 ಸಾವಿರ ರೂ. ಕೊಟ್ಟು ಸುಮ್ಮನಾಗುತ್ತಾರೆ. ಬಳಿಕ ಏನು ಕೊಡಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ದೇಶ-ವಿದೇಶಕ್ಕೆ ಹೋದಾಗ ಅಲ್ಲಿಯ ಓದುಗರು ನನ್ನ ಕೃತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನಿಮಗೆ ಹೇಗೆ ದೊರೆಯಿತು ಎಂದರೆ ಹಿಂದಿ ಭಾಷೆಯಲ್ಲಿ ಎನ್ನುತ್ತಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.