Udupi: ಕುಸಿದು ಬಿತ್ತು ಮತ್ತೂಂದು ಕಿರು ಸೇತುವೆ!
ಇಂದ್ರಾಳಿ- ಸಗ್ರಿ ಶಾಲೆ ಸಂಪರ್ಕ ರಸ್ತೆ ಕಡಿತ
Team Udayavani, Aug 12, 2024, 6:20 PM IST
ಉಡುಪಿ: 15 ದಿನಗಳ ಹಿಂದೆ ಎಂಜಿಎಂ-ಚಕ್ರತೀರ್ಥ-ದೊಡ್ಡಣಗುಡ್ಡೆ ಸಂಪರ್ಕ ರಸ್ತೆ ಕುಸಿದು ಬಿದ್ದು ಸಂಚಾರವೇ ಸ್ಥಗಿತಗೊಂಡಿತ್ತು. ಇದೀಗ ಸಗ್ರಿ ಶಾಲೆ ಸಂಪರ್ಕ ಕಡಿತಗೊಂಡಿದ್ದು, ಇಲ್ಲಿನ ಮೋರಿ ಕುಸಿದು ಬಿದ್ದಿರುವುದರಿಂದ ಸ್ಥಳೀಯ ಸಂಚಾರವೇ ಅಸ್ತವ್ಯಸ್ತಗೊಂಡಿದೆ. ಸಗ್ರಿ ಶಾಲೆ ಸಂಪರ್ಕ ರಸ್ತೆಯ ಮಳೆ ನೀರು ಹರಿಯುವ ಕಾಲುವೆಗೆ ನಿರ್ಮಿಸಿದ್ದ ಕಿರು ಸೇತುವೆ ಶಿಥಿಲಗೊಂಡು ಕುಸಿದಿದೆ. ಪರಿಣಾಮ ಇಂದ್ರಾಳಿ ಮೂಲಕ ಸಗ್ರಿ ಶಾಲೆ ಕಡೆಗೆ ತೆರಳುವ ಸಾವಿರಾರು ಮಂದಿ ಇದರಿಂದ ನಿತ್ಯ ತೊಂದರೆ ಒಳಪಡುವಂತಾಗಿದೆ.
ಇಂದ್ರಾಳಿ, ಎಂಜಿಎಂ, ಪೆರಂಪಳ್ಳಿ , ಸಗ್ರಿ, ಮಣಿಪಾಲ, ಲಕ್ಷ್ಮೀಂದ್ರ ನಗರ, ದೊಡ್ಡಣಗುಡ್ಡೆ, ಅಂಬಾಗಿಲು ಕೇಂದ್ರೀಕೃತವಾಗಿ ಓಡಾಡುವರಿಗೆ ಈ ಕಿರು ಸೇತುವೆ ಮಾರ್ಗ ಉತ್ತಮ ರಸ್ತೆಯಾಗಿತ್ತು. ಇದೀಗ ಕಿರು ಸೇತುವೆ ಕುಸಿತ ಬಳಿಕ ಸದ್ಯಕ್ಕೆ ದ್ವಿಚಕ್ರ ವಾಹನಗಳು ಓಡಾಡುತ್ತಿವೆ. ಕಾರು, ರಿಕ್ಷಾ ಓಡಾಟಕ್ಕೆ ಸೂಕ್ತವಾಗಿಲ್ಲ. ಶಿಕ್ಷಣ, ಉದ್ಯೋಗ, ಆರೋಗ್ಯ ಸಂಬಂಧಿಸಿ ಈ ಮಾರ್ಗದಲ್ಲಿ ಸಾಕಷ್ಟು ಮಂದಿ ಓಡಾಡುತ್ತಾರೆ. ಪ್ರಸ್ತುತ ಕಿರು ಸೇತುವೆ ಕುಸಿದ ಬಿದ್ದಿರುವ ಕಾರಣ ಎಲ್ಲರೂ ಸುತ್ತಿಬಳಸಿಕೊಂಡು ಓಡಾಡಬೇಕಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಒಳ ರಸ್ತೆಗಳ ಸಂಪರ್ಕ ಅಸ್ತವ್ಯಸ್ತ ನಗರದಲ್ಲಿ ಎಂಜಿಎಂ ಚಕ್ರತೀರ್ಥ ಬಳಿ ಕಿರು ಸೇತುವೆ ಮತ್ತು ಸಗ್ರಿ ಶಾಲೆ ಸಂಪರ್ಕ ರಸ್ತೆಯ ಕಿರು ಸೇತುವೆಗೆ ಹಾನಿಯಾಗಿರುವ ಕಾರಣ ಒಳ ರಸ್ತೆಗಳ ಸಂಪರ್ಕ ಅಸ್ತವ್ಯಸ್ತಗೊಂಡಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. 2-3 ಕಿ. ಮೀ. ಸಂಚಾರಕ್ಕೆ 6-7 ಕಿ. ಮೀ. ಸುತ್ತಿಬಳಸಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕೂಡಲೆ ಕಿರು ಸೇತುವೆ ದುರಸ್ತಿಪಡಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಭಿವೃದ್ಧಿಗೆ ಶೀಘ್ರ ಕ್ರಮ
ಸಗ್ರಿಶಾಲೆ ಸಂಪರ್ಕ ರಸ್ತೆ ಕಿರು ಸೇತುವೆ ಕುಸಿದಿರುವುದರಿಂದ ರಸ್ತೆ ತಾತ್ಕಲಿಕವಾಗಿ ಸಂಚಾರ ನಿಷೇಧಿಸಲಾಗಿದೆ. ಸವಾರರು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು. ಕಿರು ಸೇತುವೆ ಅಭಿವೃದ್ಧಿಗೆ ಶೀಘ್ರ ಕ್ರಮವಹಿಸಲಾಗುವುದು. ಚಕ್ರತೀರ್ಥ ಬಳಿ ಕುಸಿದ ಕಿರುಸೇತುವೆ ಮರು ನಿರ್ಮಾಣ 13.50 ರೂ. ವೆಚ್ಚದಲ್ಲಿ ನಡೆಯಲಿದೆ.
-ರಾಯಪ್ಪ, ಪೌರಾಯುಕ್ತರು, ಉಡುಪಿ ನಗರಸಭೆ.
ಒಳ ರಸ್ತೆಗಳ ಸಂಪರ್ಕ ಅಸ್ತವ್ಯಸ್ತ
ನಗರದಲ್ಲಿ ಎಂಜಿಎಂ ಚಕ್ರತೀರ್ಥ ಬಳಿ ಕಿರು ಸೇತುವೆ ಮತ್ತು ಸಗ್ರಿ ಶಾಲೆ ಸಂಪರ್ಕ ರಸ್ತೆಯ ಕಿರು ಸೇತುವೆಗೆ ಹಾನಿಯಾಗಿರುವ ಕಾರಣ ಒಳ ರಸ್ತೆಗಳ ಸಂಪರ್ಕ ಅಸ್ತವ್ಯಸ್ತಗೊಂಡಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. 2-3 ಕಿ. ಮೀ. ಸಂಚಾರಕ್ಕೆ 6-7 ಕಿ. ಮೀ. ಸುತ್ತಿಬಳಸಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕೂಡಲೆ ಕಿರು ಸೇತುವೆ ದುರಸ್ತಿಪಡಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup ಕೊಳಚೆ ಮುಕ್ತಿಗೆ ಸರ್ವರ ಸಹಕಾರ
Kaup LaxmiJanardhana Temple: ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮನೋಹರ್ ಶೆಟ್ಟಿ ಆಯ್ಕೆ
Goodudeepa Competition: ಪರ್ಯಾಯ ಶ್ರೀಕೃಷ್ಣ ಮಠ… ಗೂಡುದೀಪ ಸ್ಪರ್ಧೆ ಉದ್ಘಾಟನೆ
ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ
Ajekar Case Follow Up: ನಿಧಾನಗತಿಯ ಸಾವಿಗೆ ಎರಡು ವಿಷದ ಬಾಟಲಿ ಖರೀದಿಸಿದ್ದ ದಿಲೀಪ್
MUST WATCH
ಹೊಸ ಸೇರ್ಪಡೆ
BBK11: 11 ವರ್ಷದ ಬಿಗ್ಬಾಸ್ ಜರ್ನಿಯಲ್ಲಿ ಕಿಚ್ಚ ಗೈರಾಗಿದ್ದು ಎಷ್ಟು ಬಾರಿ, ಯಾಕೆ?
ಸಲ್ಮಾನ್ ವಿಷಯದಿಂದ ದೂರವಿರಿ… ಬಿಷ್ಣೋಯ್ ಗ್ಯಾಂಗ್ ನಿಂದ ಬಿಹಾರ ಸಂಸದನಿಗೆ ಬೆದರಿಕೆ
Railways’ ವಾರ್ಷಿಕ ಆದಾಯ ಎಷ್ಟು ಗೊತ್ತಾ?2023-24ನೇ ಸಾಲಿನ ಪ್ರಯಾಣಿಕರ ಸಂಖ್ಯೆ 648 ಕೋಟಿ!
Kaup ಕೊಳಚೆ ಮುಕ್ತಿಗೆ ಸರ್ವರ ಸಹಕಾರ
Mallikatte: ಸಿಟಿ ಆಸ್ಪತ್ರೆ ಜಂಕ್ಷನ್; ರಸ್ತೆ ಕಾಂಕ್ರೀಟ್ ಕಾಮಗಾರಿ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.