NIRF Ranking: ದೇಶದ ಶಿಕ್ಷಣ ಸಂಸ್ಥೆಗಳ ರ್‍ಯಾಂಕಿಂಗ್‌ನಲ್ಲಿ ಕರ್ನಾಟಕದ 78ಕ್ಕೆ ಸ್ಥಾನ

ಸತತ 9ನೇ ಬಾರಿ ಬೆಂಗಳೂರಿನ ಐಐಎಸ್‌ಸಿ ನಂ.1 ವಿವಿ,  16 ವಿಭಾಗಗಳ ಟಾಪ್‌ 10ರಲ್ಲಿ ರಾಜ್ಯದ 9 ಶಿಕ್ಷಣ ಸಂಸ್ಥೆ, ಕೇಂದ್ರದಿಂದ ಪಟ್ಟಿ ಬಿಡುಗಡೆ

Team Udayavani, Aug 13, 2024, 7:20 AM IST

Manipal

2024ನೇ ಸಾಲಿನ ಎನ್‌ಐಆರ್‌ಎಫ್ ರ್‍ಯಾಂಕಿಂಗ್‌ ಅನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಸೋಮವಾರ ಬಿಡುಗಡೆಗೊಳಿಸಿದ್ದು, ಪಟ್ಟಿಯಲ್ಲಿ ದೇಶದ 2ನೇ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆ ಎಂಬ ಗರಿ ಬೆಂಗಳೂರಿನ ಐಐಎಸ್‌ಸಿಗೆ ಸಂದಿದೆ. ಒಟ್ಟು 16 ವಿಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರ್‍ಯಾಂಕಿಂಗ್‌ ಪ್ರಕಟಿಸಲಾಗಿದೆ. ಈ ಪೈಕಿ 14 ವಿಭಾಗಗಳಲ್ಲಿ ಕರ್ನಾಟಕದ 78 ಶಿಕ್ಷಣ ಸಂಸ್ಥೆಗಳು ವಿವಿಧ ರ್‍ಯಾಂಕಿಂಗ್‌ ಪಡೆದುಕೊಂಡಿವೆ. ಯಾವ ವಿಭಾಗದಲ್ಲಿ ಕರ್ನಾಟಕದ ಯಾವ ಶಿಕ್ಷಣ ಸಂಸ್ಥೆಗಳಿಗೆ ಯಾವ ಶ್ರೇಯಾಂಕ ದೊರೆತಿದೆ ಎಂಬ ವಿವರ ಹೀಗಿದೆ…

ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು: ಐಐಎಸ್‌ಸಿ ಬೆಂಗಳೂರು (2), ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ (14ನೇ ಸ್ಥಾನ) , ಜೆಎಸ್‌ಎಸ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ ಆ್ಯಂಡ್‌ ರಿಸರ್ಚ್‌ -ಮೈಸೂರು (36), ಎನ್‌ಐಟಿಕೆ ಸುರತ್ಕಲ್‌ (46), ಮೈಸೂರ್‌ ವಿವಿ (86), ಕ್ರೈಸ್ಟ್‌ ವಿವಿ(90).

ಉತ್ತಮ ವಿಶ್ವವಿದ್ಯಾನಿಲಯಗಳು:  ಐಐಎಸ್‌ಸಿ ಬೆಂಗಳೂರು (1) ಸತತ 9ನೇ ಬಾರಿ, ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ (4), ಜೆಎಸ್‌ಎಸ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ ಆ್ಯಂಡ್‌ ರಿಸರ್ಚ್‌ (24), ಮೈಸೂರು ವಿವಿ (54), ಕ್ರೈಸ್ಟ್‌ ವಿವಿ (60), ಜೈನ್‌ ವಿವಿ (65), ನಿಟ್ಟೆ ಮಂಗಳೂರು (66), ವಿಶ್ವೇಶ್ವರಯ್ಯ ಟೆಕ್ನಾಲಜಿ ಬೆಳಗಾವಿ (75), ಬೆಂಗಳೂರು ವಿವಿ (81), ಯೂನಿವರ್ಸಿಟಿ ಆಫ್ ಅಗ್ರಿಕಲ್ಚರಲ್‌ ಸೈನ್ಸ್‌ ಬೆಂಗಳೂರು (90) ಯೇನಪೊಯ ವಿವಿ ಮಂಗಳೂರು (95).

ಉತ್ತಮ ಕಾಲೇಜು: ಸೈಂಟ್‌ ಜೋಸೆಫ್ ಕಾಲೇಜ್‌ ಆಫ್ ಕಾಮರ್ಸ್‌, ಬೆಂಗಳೂರು (55), ಸೈಂಟ್‌ ಅಲೋಶಿಯಸ್‌, ಮಂಗಳೂರು (58), ಕ್ರಿಸ್ತ ಜಯಂತಿ ಕಾಲೇಜು, ಬೆಂಗಳೂರು (60), ಎಂ.ಎಸ್‌.ರಾಮಯ್ಯ ಕಾಲೇಜು -ಬೆಂಗಳೂರು (87)

ಸಂಶೋಧನ ವಿಭಾಗ:
ಐಐ ಎ ಸ್‌ಸಿ ಬೆಂಗಳೂರು (1), ಜವಾಹರ್‌ ಲಾಲ್‌ ನೆಹರೂ ಸೆಂಟರ್‌ ಫಾರ್‌ ಅಡ್ವಾನ್ಸ್‌ಡ್‌ ಸೈಂಟಿಫಿಕ್‌ ರಿಚರ್ಸ್‌ (34) ಎನ್‌ಐಟಿಕೆ ಸುರತ್ಕಲ್‌ (42), ನಿಮ್ಹಾನ್ಸ್‌ (43).

ಎಂಜಿನಿಯರಿಂಗ್‌ ವಿಭಾಗ: ಎನ್‌ಐಟಿಕೆ ಸುರತ್ಕಲ್‌ (17), ವಿಶ್ವೇಶ್ವರಯ್ಯ ಟೆಕ್ನಾಲಜಿ -ಬೆಳಗಾವಿ (69), ಐಐಐಟಿ – ಬೆಂಗಳೂರು (74), ಎಂ.ಎಸ್‌.ರಾಮಯ್ಯ ತಂತ್ರಜ್ಞಾನ ಸಂಸ್ಥೆ (75), ಕ್ರೈಸ್ಟ್‌ ವಿವಿ (93), ಜೈನ್‌ ವಿವಿ (95), ಆರ್‌ವಿ ಕಾಲೇಜ್‌ ಆಫ್ ಎಂಜಿನಿಯರಿಂಗ್‌ (99), ಸಿದ್ಧಗಂಗಾ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (100).

ಮ್ಯಾನೇಜ್‌ಮೆಂಟ್‌: ಐಐಎಂ ಬೆಂಗಳೂರು (2), ಕ್ರೈಸ್ಟ್‌ ವಿವಿ (60), ಅಲಯೆನ್ಸ್‌ ವಿವಿ (71), ಜೈನ್‌ ವಿವಿ (77)
n ಫಾರ್ಮಸಿ: ಜೆಎಸ್‌ಎಸ್‌ ಕಾಲೇಜ್‌ ಆಫ್ ಫಾರ್ಮಸಿ (6), ಎನ್‌ಜಿಎಸ್‌ಎಂ ಇನ್‌ಸ್ಟಿಟ್ಯೂಟ್‌ ಆಫ್ ಫಾರ್ಮಾಸ್ಯುಟಿಕಲ್‌ ಸೈನ್ಸ್‌, ಮಂಗಳೂರು (41), ಕೆಎಲ್‌ಇ ಕಾಲೇಜ್‌ ಆಫ್ ಫಾರ್ಮಸಿ -ಬೆಳಗಾಂ (42), ಎಂಎಸ್‌ ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೆ„ಡ್‌ ಸೈನ್ಸ್‌ (68), ಶ್ರೀ ಆದಿಚುಂಚನಗಿರಿ ಕಾಲೇಜು (83), ಆಚಾರ್ಯ ಆ್ಯಂಡ್‌ ಬಿಎಂ ರೆಡ್ಡಿ ಕಾಲೇಜ್‌ ಆಫ್ ಫಾರ್ಮಸಿ (86), ಕೃಪಾನಿಧಿ ಕಾಲೇಜ್‌ ಆಫ್ ಫಾರ್ಮಸಿ -ಬೆಂಗಳೂರು (98)

ವೈದ್ಯಕೀಯ: ನಿಮ್ಹಾನ್ಸ್‌ (4), ಸೈಂಟ್‌ ಜಾನ್ಸ್‌ ಮೆಡಿಕಲ್‌ ಕಾಲೇಜು (28), ಜೆಎಸ್‌ಎಸ್‌ ಮೆಡಿಕಲ್‌ ಕಾಲೇಜು, (39), ಎಂ.ಎಸ್‌. ರಾಮಯ್ಯ ಮೆಡಿಕಲ್‌ ಕಾಲೇಜು, (46)

ದಂತ ವೈದ್ಯಕೀಯ: ಎ.ಬಿ.ಶೆಟ್ಟಿ ಮೆಮೋರಿಯಲ್‌ ಇನ್‌ಸ್ಟಿಟ್ಯೂಟ್‌ ಆಫ್ ಡೆಂಟಲ್‌ ಸೈನ್ಸ್‌ – ಮಂಗಳೂರು (6), ಜೆಎಸ್‌ಎಸ್‌ ಡೆಂಟಲ್‌ ಕಾಲೇಜು ಮತ್ತು ಆಸ್ಪತ್ರೆ -ಮೈಸೂರು (12), ಎಂಎಸ್‌ ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೆ„ಡ್‌ ಸೈನ್ಸ್‌(16), ಸರಕಾರಿ ಡೆಂಟಲ್‌ ಕಾಲೇಜು ಬೆಂಗಳೂರು (19), ಯೇನಪೊಯ ಡೆಂಟಲ್‌ ಕಾಲೇಜು, ಮಂಗಳೂರು (26) ಕೆಎಲ್‌ಇ ಡೆಂಟಲ್‌ ಸೈನ್ಸ್‌ (29), ಎಸ್‌ಡಿಎಂ ಕಾಲೇಜ್‌ ಆಫ್ ಡೆಂಟಲ್‌ ಸೈನ್ಸ್‌ ಆ್ಯಂಡ್‌ ಹಾಸ್ಪಿಟಲ್‌ (31), ಬಾಪೂಜಿ ಡೆಂಟಲ್‌ ಕಾಲೇಜ್‌ ಆ್ಯಂಡ್‌ ಹಾಸ್ಪಿಟಲ್‌- ದಾವಣಗೆರೆ ( 37)

ಕಾನೂನು ಶಿಕ್ಷಣ: ನ್ಯಾಶನಲ್‌ ಲಾ ಸ್ಕೂಲ್‌ ಆಫ್ ಇಂಡಿಯಾ ವಿವಿ -ಬೆಂಗಳೂರು(1), ಕ್ರೈಸ್ಟ್‌ ವಿವಿ -ಬೆಂಗಳೂರು (15), ಅಲಯನ್ಸ್‌ ವಿವಿ (18)

ವಾಸ್ತುಶಿಲ್ಪ ಮತ್ತು ಯೋಜನೆ: ಎಂ.ಎಸ್‌ ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ -ಬೆಂಗಳೂರು (21), ಬಿಎಂಎಸ್‌ ಕಾಲೇಜ್‌ ಆಫ್ ಆರ್ಕಿಟೆಕ್ಚರ್‌ -ಬೆಂಗಳೂರು (23), ಬಿಎಂಎಸ್‌ ಸ್ಕೂಲ್‌ ಆಫ್ ಆರ್ಕಿಟೆಕ್ಚರ್‌ ಯಲಹಂಕ -ಬೆಂಗಳೂರು (38)

ಕೃಷಿ ಮತ್ತು ಸಂಬಂಧಿತ ಕ್ಷೇತ್ರ: ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್‌ ಸೈನ್ಸ್‌ -ಬೆಂಗಳೂರು (11), ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್‌ ಸೈನ್ಸ್‌ – ಧಾರವಾಡ (24)

ನಾವೀನ್ಯತೆ ವಿಭಾಗ: ಐಐಎಸ್‌ಸಿ -ಬೆಂಗಳೂರು (4),
ರಾಜ್ಯ ಸರಕಾರ‌ದ ಅಧೀನದ ಅತ್ಯುತ್ತಮ ವಿವಿಗಳು: ಮೈಸೂರು ವಿಶ್ವ ವಿದ್ಯಾನಿಲಯ (19), ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ-ಬೆಳಗಾವಿ (22), ಬೆಂಗಳೂರು ವಿಶ್ವವಿದ್ಯಾನಿಲಯ (24), ಯೂನಿವರ್ಸಿಟಿ ಆಫ್ ಅಗ್ರಿಕಲ್ಚರಲ್‌ ಸೈನ್ಸಸ್‌- ಧಾರವಾಡ (44).

ಮಣಿಪಾಲ ಸಮೂಹದ 11 ಶಿಕ್ಷಣ ಸಂಸ್ಥೆಗಳಿಗೂ ಹಿರಿಮೆ
ಮಣಿಪಾಲ ಸಮೂಹದ 11 ಶಿಕ್ಷಣ ಸಂಸ್ಥೆಗಳಿಗೆ 9 ವಿಭಾಗದಲ್ಲಿ ವಿವಿಧ ರ್‍ಯಾಂಕಿಂಗ್‌ ದೊರೆತಿದೆ. ಈ ಪೈಕಿ 4 ಸಂಸ್ಥೆಗಳು ಅಗ್ರ 10 ರಲ್ಲಿ ಸ್ಥಾನ ಪಡೆದಿವೆ. ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌(ಮಾಹೆ) 14ನೇ ಸ್ಥಾನ ಪಡೆದಿದ್ದರೆ, ಉತ್ತಮ ವಿವಿಗಳ ಪೈಕಿ ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ 4ನೇ ಸ್ಥಾನ ಪಡೆದಿದೆ. ಸಂಶೋಧನ ವಿಭಾಗ- ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ (23), ಎಂಜಿನಿಯರಿಂಗ್‌ ವಿಭಾಗ- ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ – ಮಣಿಪಾಲ್‌ (56), ಮ್ಯಾನೇಜ್‌ಮೆಂಟ್‌- ಟಿ. ಎ. ಪೈ ಮ್ಯಾನೇಜ್‌ಮೆಂಟ್‌

ಇನ್‌ಸ್ಟಿಟ್ಯೂಟ್‌ ಮಣಿಪಾಲ್‌ (58), ಫಾರ್ಮಸಿ: ಮಣಿಪಾಲ್‌ ಕಾಲೇಜ್‌ ಆಫ್ ಫಾರ್ಮಾಸ್ಯುಟಿಕಲ್‌ ಸೈನ್ಸ್‌ -ಉಡುಪಿ ( 8), ವೈದ್ಯಕೀಯ- ಕಸ್ತೂರ್ಬಾ ಮೆಡಿಕಲ್‌ ಕಾಲೇಜು -ಮಣಿಪಾಲ (9), ಕಸ್ತೂರ್ಬಾ ಮೆಡಿಕಲ್‌ ಕಾಲೇಜು -ಮಂಗಳೂರು (33), ದಂತ ವೈದ್ಯಕೀಯ – ಮಣಿಪಾಲ್‌ ಕಾಲೇಜ್‌ ಆಫ್ ಡೆಂಟಲ್‌ ಸೈನ್ಸ್‌ -ಮಣಿಪಾಲ (2), ಮಣಿಪಾಲ್‌ ಕಾಲೇಜ್‌ ಆಫ್ ಡೆಂಟಲ್‌ ಸೈನ್ಸ್‌ -ಮಂಗಳೂರು (11), ವಾಸ್ತುಶಿಲ್ಪ ಮತ್ತು ಯೋಜನೆ :- ಮಣಿಪಾಲ್‌ ಸ್ಕೂಲ್‌ ಆಫ್ ಆರ್ಕಿಟೆಕ್ಚರ್‌ ಆ್ಯಂಡ್‌ ಪ್ಲಾನಿಂಗ್‌ ಮಾಹೆ -ಉಡುಪಿ 28ನೇ ಶ್ರೇಯಾಂಕ ಪಡೆದುಕೊಂಡಿದೆ.

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

1-tirupati-laddu

Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

Haryana: Financial assistance to women, MSP promised; BJP manifesto released

Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್‌ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ

Chennai: ರಸ್ತೆ ಬದಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…

Chennai: ರಸ್ತೆ ಬದಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.