Food safety; ಆಹಾರಕ್ಕೆ ಸುರಕ್ಷೆಗೆ ಬರಲಿದೆ ಫುಡ್‌ ಟೆಸ್ಟಿಂಗ್‌ ಲ್ಯಾಬ್‌


Team Udayavani, Aug 14, 2024, 7:12 AM IST

Food testing lab will come for food safety

ಬೆಂಗಳೂರು: ಸಾರ್ವಜನಿಕರು ತಾವು ಖರೀದಿಸುವ ತರಕಾರಿ, ಹಣ್ಣು , ಮೀನು, ಮಾಂಸ, ಹಾಗೂ ಇತರ ತಿಂಡಿ ತಿನಸುಗಳಲ್ಲಿ ರಾಸಾಯನಿಕ ಅಂಶ ಬಳಕೆಯಾಗಿದೆ ಎನ್ನುವ ಅನುಮಾನಗಳಿದ್ದರೆ ತತ್‌ಕ್ಷಣವೇ ಸ್ವಯಂ ಆಹಾರ ಪರೀಕ್ಷೆಗೆ ಮಾಡಿಕೊಳ್ಳಲು ಸ್ಥಳದಲ್ಲಿ “ಫ‌ುಡ್‌ ಟೆಸ್ಟಿಂಗ್‌ ಪ್ರಯೋಗಾಲಯ’ ಹಾಗೂ ಗುಣಮಟ್ಟದ ಆಹಾರದ ಪೂರೈಕೆಗೆ ನಿಯಮಿತ “ಹೈಜಿನಿಕ್‌ ಫ‌ುಡ್‌ ಆಡಿಟಿಂಗ್‌’ ಪ್ರಾರಂಭಿಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸುತ್ತಿದೆ.

ಹಾಗೆಂದು ಇದು ಹೊಟೇಲ್‌, ರೆಸ್ಟೋರೆಂಟ್‌ ಸೇರಿ ಆಯಾ ಆಹಾರ ತಯಾರಿಕೆ ಸಂಸ್ಥೆಗಳ ನಿರ್ಧಾರಕ್ಕೆ ಬಿಟ್ಟಿದ್ದಾಗಿದೆ. ಒಂದು ವೇಳೆ ಅವರಿದನ್ನು ಅಳವಡಿಸಿಕೊಂಡರೆ ಗ್ರಾಹಕರ ಆರೋಗ್ಯದ ಕಾಳಜಿಯ ಜತೆ ಅವುಗಳ ವಿಶ್ವಾಸಾರ್ಹತೆಯನ್ನೂ ಹೆಚ್ಚಿಸುತ್ತದೆ.

ಆಹಾರದಲ್ಲಿ ನಿಷೇಧಿತ ಕೆಮಿಕಲ್‌ ಹಾಗೂ ಕಲಬೆರಕೆ ಪದಾರ್ಥಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಈಗಾಗಲೇ ಕೆಮಿಕಲ್‌ ಗೋಬಿ, ಕಬಾಬ್‌, ಲಿಕ್ವಿಡ್‌ ನೈಟ್ರೋಜನ್‌ಗಳನ್ನು ಆಹಾರ ತಯಾರಿಕೆಯಲ್ಲಿ ಬಳಸುವುದಕ್ಕೆ ನಿಷೇಧ ಹೇರಿದೆ. ಇಷ್ಟಾದರೂ ನಿಷೇಧಿñಜ ಪದಾರ್ಥ ಬಳಸಿ ತಯಾರಿಸಲಾದ ಆಹಾರ ಸೇವಿಸಿ, ಅನಾರೋಗ್ಯಕ್ಕೆ ಒಳಗಾಗುವವರ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಆರೋಗ್ಯ ಹಾಗೂ ಆಹಾರ ಸುರಕ್ಷತಾ-ಗುಣಮಟ್ಟ ಇಲಾಖೆ ಮುಂದಾಗಿದೆ.

ಇಲಾಖೆಯು ನೈರ್ಮಲ್ಯತೆ ಮತ್ತು ಗುಣಮಟ್ಟದ ಕಾಪಾಡುವ ದೃಷ್ಟಿಯಿಂದ ಹೊಟೇಲ್‌ಗ‌ಳಲ್ಲಿ ವಾರ್ಷಿಕ ಹೈಜಿನಿಕ್‌ ಫ‌ುಡ್‌ ಆಡಿಟಿಂಗ್‌’ಗೆ ಸಲಹೆ ನೀಡಿದೆ. ಫ‌ಸ್ಟ್‌ ಇನ್‌ – ಫ‌ಸ್ಟ್‌ ಔಟ್‌ ಮಾದರಿಯನ್ನು ಅಳವಡಿಸಿಕೊಂಡು ಅವಧಿ ಮೀರುವ ಗಡಿಯಲ್ಲಿ ಆಹಾರ ಕಚ್ಚಾ ಸಾಮಗ್ರಿಗಳನ್ನು ಮೊದಲು ಬಳಕೆ ಮಾಡಿಕೊಳ್ಳಬೇಕು. ವೆಜ್‌ ಹಾಗೂ ನಾನ್‌ವೆಜ್‌ ಆಹಾರ ತಯಾರಿಕೆಗೆ ಪ್ರತ್ಯೇಕ ಪಾತ್ರೆಗಳು, ಕಚ್ಚಾ ಆಹಾರ ಸಾಮಗ್ರಿ ಸಂಗ್ರಹಣೆ ಸ್ಥಳವನ್ನು ಎಫ್ಎಸ್‌ಎಸ್‌ಎಐ ನಿಯಮಾವಳಿ ಅನ್ವಯ ಸ್ವತ್ಛತೆ ಕಾಪಾಡಿಕೊಳ್ಳಬೇಕು. ಜತೆಗೆ ಇತರೆ ಸಿಬ್ಬಂದಿಗೆ ತರಬೇತಿ ಸೇರಿದಂತೆ ಕೆಲ ವ್ಯವಸ್ಥೆಯನ್ನು ತ್ರೀ ಸ್ಟಾರ್‌ ಮತ್ತು ಅದಕ್ಕೂ ಮೇಲಿನ ಸ್ಟಾರ್‌ ಹೊಟೇಲ್‌ಗ‌ಳು ಅಳವಡಿಸಿಕೊಳ್ಳಬೇಕು ಎಂದು ಇಲಾಖೆ ತಿಳಿಸಿದೆ.

ಅಜಿನೋಮೋಟೋ ನಿಷೇಧ

ಹಣ್ಣು ಮಾಗಿಸಲು ಕ್ಯಾಲ್ಶೀಯಂ ಕಾರ್ಬಡೈ ಬಳಕೆ ನಿಷೇಧಿಸಿ, ಇಥಿಲಿನ್‌ ಬಳಕೆಯ ಸಾಂದ್ರತೆಯನ್ನು 100 ಪಿಪಿಎಂ ಮಿತಿಯೊಳಗೆ ಬಳಕೆ ಮಾಡತಕ್ಕದ್ದು, ಆಹಾರದಲ್ಲಿ ಅಜಿನೋಮೋಟೋ ಅಥವಾ ಮಾನೋ ಸೋಡಿಯಂ ಗೊಟಾಮೇಟ್‌ ಬಳಸುವುದನ್ನು ನಿಷೇಧಿಸಲಾಗಿದೆ. ಇಲಾಖೆಯು ಧಾನ್ಯ, ಹಣ್ಣು, ತರಕಾರಿ ವ್ಯಾಪಾರಿಗಳು ಹಾಗೂ ಬೇಕರಿ- ಕೇಕ್‌ ತಯಾರಕರಿಗೆ ಕಡ್ಡಾಯವಾಗಿ ಇಲಾಖೆಯಿಂದ ನೋಂದಣಿ ಅಥವಾ ಪರವಾನಿಗೆ ಪಡೆಯುವಂತೆ ಸೂಚಿಸಿದೆ.

ಇಲಾಖೆ ಅಧಿಕಾರಿಗಳು, ಮಾಲ್‌ ಮಾಲಕರು, ಹೊಟೇಲ್‌, ತರಕಾರಿ, ಧಾನ್ಯ, ಹಣ್ಣು, ಬೇಕರಿ ಅಸೋಸಿಯೇಶನ್‌ ಪ್ರತಿನಿಧಿಗಳ ನೇತೃತ್ವದಲ್ಲಿ ಸಭೆ ನಡೆದಿದ್ದು, ಆಹಾರ ಸುರಕ್ಷತಾ ಗುಣಮಟ್ಟದ ನಿಯಮಗಳನ್ನು ಪಾಲಿಸಲು ಒಪ್ಪಿಗೆ ಸೂಚಿಸಲಾಗಿದೆ. ಪ್ರಾಯೋಗಾಲಯದ ಬಗ್ಗೆ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ.

ಟೆಸ್ಟಿಂಗ್‌ ಪ್ರಯೋಗಾಲಯ!

ಸಾರ್ವಜನಿಕರಿಗೆ ತಾವು ಸೇವಿಸುವ ಆಹಾರದಲ್ಲಿ ರಾಸಾಯನಿಕ ಅಂಶಗಳಿವೆ ಎನ್ನುವ ಬಗ್ಗೆ ಅನುಮಾನಗಳನ್ನು ಪರಿಶೀಲಿಸಲು ಹೊಟೇಲ್‌ ಹಾಗೂ ಮಾಲ್‌ ಸೇರಿದಂತೆ ವಿವಿಧೆಡೆ ಫ‌ುಡ್‌ ಟೆಸ್ಟಿಂಗ್‌ ಪ್ರಯೋಗಾಲಯ ಸ್ಥಾಪಿಸಲು ಇಲಾಖೆ ಮುಂದಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು ನಗರದಲ್ಲಿ ಈ ಪ್ರಯೋಗಾಲಯ ಪ್ರಾರಂಭವಾಗಲಿದ್ದು, ಆಸಕ್ತರ ಆಹಾರ ಉದ್ದಿಮೆಗಳ ಮಾಲಕರಿಗೆ ಅಗತ್ಯವಿರುವ ಉಪಕರಣಗಳನ್ನು ಇಲಾಖೆಯ ಮೂಲಕ ನೀಡಲಾಗುತ್ತದೆ. ಅದರ ನಿರ್ವಹಣೆಯನ್ನು ಮಾಲಕರು ಮಾಡಬೇಕಾಗುತ್ತದೆ.

ನಿಷೇಧ ಪದಾರ್ಥಗಳನ್ನು ಬಳಸಿ ತಯಾರಿಸಲಾದ ಆಹಾರ ಸೇವನೆಯಿಂದ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಈಗಾಗಲೇ ರಾಸಾಯನಿಕ ಪದಾರ್ಥ ಬಳಸುವ ಕಬಾಬ್‌, ಗೋಬಿ ಹಾಗೂ ಲಿಕ್ವಿಡ್‌ ನೈಟ್ರೋಜನ್‌ ನಿಷೇಧಿಸಲಾಗಿದೆ. “ಫ‌ುಡ್‌ ಟೆಸ್ಟಿಂಗ್‌ ಪ್ರಯೋಗಾಲಯ’ ಹಾಗೂ “ಫ‌ುಡ್‌ ಆಡಿಟಿಂಗ್‌’ನಿಂದ ಆಹಾರ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಗುಣಮಟ್ಟದ ಆಹಾರ ಜನರಿಗೆ ಸಿಗಲಿದೆ. – ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ

ಹೈಜೆನಿಕ್‌ ಫ‌ುಡ್‌ ಆಡಿಟಿಂಗ್‌, ಸಿಬಂದಿಗೆ ನಿಯಮಿತ ತರಬೇತಿ, ಎಫ್ಸ್‌ಎಸ್‌ಎಐ ನಿಗದಿಪಡಿಸಿದ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಸೇರಿದಂತೆ ಇತರ ಸಲಹೆಗಳನ್ನು ಇಲಾಖೆ ನೀಡಿದೆ. – ಪಿ.ಸಿ. ರಾವ್‌, ಹೊಟೇಲ್‌ ಅಸೋಸಿಯೇಶನ್‌, ಬೆಂಗಳೂರು

ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.