Pyaraolympics: ಡೋಪಿಂಗ್‌ ನಿಯಮ ಉಲ್ಲಂಘನೆ; ಪ್ಯಾರಾ ಶಟ್ಲರ್‌ ಭಗತ್‌ ಅಮಾನತು

ಪ್ಯಾರಾಲಿಂಪಿಕ್ಸ್‌  ಸಿಂಗಲ್ಸ್‌  ಚಾಂಪಿಯನ್‌ , ಪ್ಯಾರಿಸ್‌ ಕೂಟದಿಂದ ಹೊರಕ್ಕೆ

Team Udayavani, Aug 14, 2024, 6:50 AM IST

BHAGATH

ಹೊಸದಿಲ್ಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಪ್ಯಾರಾ ಶಟ್ಲರ್‌ ಪ್ರಮೋದ್‌ ಭಗತ್‌ ಬಿಡಬ್ಲ್ಯುಎಫ್ ಡೋಪಿಂಗ್‌ ನಿಯಮವನ್ನು ಉಲ್ಲಂ ಸಿದ ಹಿನ್ನೆಲೆಯಲ್ಲಿ 18 ತಿಂಗಳು ಅಮಾನತುಗೊಂಡಿದ್ದಾರೆ. ಇದರಿಂದ ಅವರು ಮುಂಬರುವ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡಿದ್ದಾರೆ. ಭಾರತಕ್ಕೆ ದೊಡ್ಡ ಪದಕವೊಂದು ಕೈತಪ್ಪಿದೆ.

ಪ್ರಮೋದ್‌ ಭಗತ್‌ ಕಳೆದ 12 ತಿಂಗಳ ಅವಧಿಯಲ್ಲಿ 3 ಬಾರಿ ತಮ್ಮ ಇರುವಿಕೆಯ ಬಗ್ಗೆ ಮಾಹಿತಿ ನೀಡಲು ವಿಫ‌ಲರಾದ ಕಾರಣ ಬಿಡಬ್ಲ್ಯುಎಫ್ ಡೋಪಿಂಗ್‌ ನಿಯಮ ವನ್ನು ಉಲ್ಲಂ ಸಿ ದಂತಾಗಿದೆ. ಹೀಗಾಗಿ ಅವರು ತಪ್ಪಿತಸ್ಥರಾಗು ತ್ತಾರೆಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ (ಸಿಎಎಸ್‌) ಮಾರ್ಚ್‌ ಒಂದರಂದು ಹೇಳಿತ್ತು. ಇದರ ವಿರುದ್ಧ ಭಗತ್‌ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಸಿಎಎಸ್‌ ತನ್ನ ಆದೇಶವನ್ನು ಎತ್ತಿಹಿಡಿದು ಅಮಾನತು ಕ್ರಮವನ್ನು ದೃಢಪಡಿಸಿದೆ.

ಘೋರ ಶಿಕ್ಷೆ: ಪ್ರಮೋದ್‌ ವಿಷಾದ
“ನನ್ನ ಪಾಲಿಗೆ ಇದೊಂದು ಘೋರ ಶಿಕ್ಷೆ. ಆದರೆ ನಾನು ವಾಡಾ ತೀರ್ಪನ್ನು ಗೌರವಿಸು ತ್ತೇನೆ. ಆದರೆ ತಾಂತ್ರಿಕ ಕಾರಣಗಳಿಗೆ ಈ ರೀತಿ ಅಮಾನತು ಶಿಕ್ಷೆ ವಿಧಿಸುವುದು ಸರಿಯಾದ ಕ್ರಮವಲ್ಲ’ ಎಂಬುದಾಗಿ ಭಗತ್‌ ಹೇಳಿದ್ದಾರೆ.

“ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದು ಅಮಾನತು ಗೊಂಡರೆ ಅದು ಸಹಜ. ಆದರೆ ಎರಡು ಸಲ ಪರೀಕ್ಷೆಗೆ ಕರೆ ಬಂದಾಗ ನಾನು ಬೇರೊಂದು ಸ್ಥಳದಲ್ಲಿದ್ದೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಮತ್ತು ಸಾಕ್ಷ್ಯಗಳನ್ನು ನಾನು ಮೂರನೇ ಪರೀಕ್ಷೆ ವೇಳೆ ಸಲ್ಲಿಸಿದ್ದೆ. ಆದರೆ ಇದನ್ನು ತಿರಸ್ಕರಿಸಲಾಯಿತು. ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ಗೆ ಸಿದ್ಧತೆಯಲ್ಲಿದ್ದ ನನ್ನ ಪಾಲಿಗೆ ಇದೊಂದು ಭಾರೀ ನಷ್ಟ. ಅಲ್ಲದೇ ನಾನೋರ್ವ ಪದಕ ವಿಜೇತ ಕ್ರೀಡಾಪಟು. ನಿಜಕ್ಕೂ ಹೃದಯ ಬಿರಿದಿದೆ’ ಎಂದು ಪ್ರಮೋದ್‌ ಭಗತ್‌ ಅತ್ಯಂತ ನೋವಿನಿಂದ ಹೇಳಿಕೊಂಡಿದ್ದಾರೆ.

2025ರ ಸೆ. ಒಂದರ ತನಕ ಪ್ರಮೋದ್‌ ಭಗತ್‌ ಅವರ ಅಮಾನತು ಜಾರಿಯಲ್ಲಿರುತ್ತದೆ. 36 ವರ್ಷದ ಪ್ರಮೋದ್‌ ಭಗತ್‌ ಬಿಹಾರದವರಾಗಿದ್ದು, ಕಳೆದ ಥಾಯ್ಲೆಂಡ್‌ ಟೂರ್ನಿಯಲ್ಲಿ 5ನೇ ಸಲ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿ ಚೀನದ ಲೆಜೆಂಡ್ರಿ ಶಟ್ಲರ್‌ ಲಿನ್‌ ಡಾನ್‌ ಅವರ ದಾಖಲೆಯನ್ನು ಸರಿದೂಗಿಸಿದ್ದರು. ಪ್ರಮೋದ್‌ ಭಗತ್‌ 5 ವರ್ಷದವರಿದ್ದಾಗಿ ಎಡಗಾಲಿನ ಪೋಲಿಯೋಗೆ ತುತ್ತಾಗಿದ್ದರು. ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಜಾಗತಿಕ ಕ್ರೀಡಾಕೂಟಗಳಲ್ಲಿ ಒಟ್ಟು 11 ಚಿನ್ನ, 3 ಬೆಳ್ಳಿ ಹಾಗೂ 9 ಕಂಚಿನ ಪದಕ ಗೆದ್ದ ಸಾಧನೆ ಇವರದ್ದಾಗಿದೆ.

ಭಾರೀ ನಷ್ಟ: ಕೋಚ್‌ ಖನ್ನಾ
“ಇದು ಅತ್ಯಂತ ದುಃಖದ ಹಾಗೂ ದುರದೃಷ್ಟಕರ ಸಂಗತಿ. ಪ್ರಮೋದ್‌ ಭಗತ್‌ ಮುಂದಿನ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಖಂಡಿತವಾಗಿಯೂ ಪದಕವೊಂದನ್ನು ಗೆದ್ದು ತರುತ್ತಿದ್ದರು. ಆದರೆ ಅವರೋರ್ವ ಹೋರಾಟಗಾರ. ಅತ್ಯಂತ ಬಲಿಷ್ಠರಾಗಿ ಅವರು ಮರಳಲಿದ್ದಾರೆ’ ಎಂಬುದಾಗಿ ಪ್ಯಾರಾ ಬ್ಯಾಡ್ಮಿಂಟನ್‌ ಕೋಚ್‌ ಗೌರವ್‌ ಖನ್ನಾ ಹೇಳಿದ್ದಾರೆ.
ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ಆ. 28ರಿಂದ ಸೆ. 8ರ ತನಕ ನಡೆಯಲಿದೆ.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

1-rrrr

15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು

1-asdas

Commonwealth ಚಾಂಪಿಯನ್‌ಶಿಪ್‌ : ಅಲ್ಲುರಿ ಅಜಯ್‌ಗೆ ಬಂಗಾರ

1-malavika

China ಓಪನ್‌ ಬ್ಯಾಡ್ಮಿಂಟನ್‌:ಮಾಳವಿಕಾ ಕ್ವಾರ್ಟರ್‌ ಫೈನಲಿಗೆ

1-frrr

Duleep Trophy Cricket: ಸ್ಯಾಮ್ಸನ್‌ ಅರ್ಧಶತಕ; ಭಾರತ ‘ಡಿ’ 5ಕ್ಕೆ 306

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.