Bangladesh ಮಾಜಿ ಪ್ರಧಾನಿ ಹಸೀನಾ ವಿರುದ್ಧ ಕೊಲೆ ಪ್ರಕರಣ ದಾಖಲು
ಹಿಂಸಾಚಾರ ವೇಳೆ ಕಿರಾಣಿ ಅಂಗಡಿ ಮಾಲಕನ ಹತ್ಯೆ ಸಂಬಂಧಿಸಿದಂತೆ ಕೇಸು
Team Udayavani, Aug 14, 2024, 6:19 AM IST
ಢಾಕಾ: ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಸಮಯದಲ್ಲಿ ಕಿರಾಣಿ ಅಂಗಡಿಯ ಮಾಲಕರೊಬ್ಬರ ಹತ್ಯೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಮಂತ್ರಿ ಶೇಖ್ ಹಸೀನಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ದೇಶದಿಂದ ಪರಾರಿಯಾಗಿರುವ ಮಾಜಿ ಪ್ರಧಾನಮಂತ್ರಿ ವಿರುದ್ಧ ದಾಖಲಾದ ಮೊದಲ ಪ್ರಕರಣ ಇದಾಗಿದೆ.
ಕೊಲೆಗೆ ಸಂಬಂಧಿಸಿದಂತೆ ಮಾಮುನ್ ಮಿಯಾ ಎಂಬ ವಕೀಲರು ಢಾಕಾ ಕೋರ್ಟ್ನಲ್ಲಿ ಈ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಕೋರ್ಟ್ ಪ್ರಕರಣ ದಾಖಲಿಸಿ, ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದೆ. ಹಸೀನಾ ಅಷ್ಟೇ ಅಲ್ಲದೇ ಮಾಜಿ ಗೃಹ ಸಚಿವ ಹಾಗೂ ಇತರ ನಾಲ್ವರ ವಿರುದ್ಧವೂ ಪ್ರಕರಣ ದಾಖಲಿಸಿದೆ.
ಹಿಂಸಾಚಾರದಲ್ಲಿ ಅಮೆರಿಕ ಪಾತ್ರವಿಲ್ಲ:
ಬಾಂಗ್ಲಾ ಪ್ರತಿಭಟನೆ ಹಾಗೂ ಸರಕಾರ ಬೀಳಿಸುವಲ್ಲಿ ಅಮೆರಿಕದ ಪಾತ್ರವಿದೆ ಎಂಬ ಆರೋಪವನ್ನು ಅಮೆರಿಕ ತಳ್ಳಿಹಾಕಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೈನ್ ಜೀನ್ ಪಿಯರಿ, ನಾವು ಬಾಂಗ್ಲಾದೇಶದ ಆಂತರಿಕ ವಿಷಯದಲ್ಲಿ ಯಾವುದೇ ಪಾತ್ರ ವಹಿಸಿಲ್ಲ. ಈ ಹಿಂಸಾಚಾರಕ್ಕೆ ಅಮೆರಿಕ ಕಾರಣ ಎಂಬುದು ಸಂಪೂರ್ಣ ಸುಳ್ಳು ಎಂದಿದ್ದಾರೆ.
ಢಾಕೇಶ್ವರಿ ದೇಗುಲಕ್ಕೆ ಬಾಂಗ್ಲಾ ಮುಖ್ಯಸ್ಥ ಭೇಟಿ
ಬಾಂಗ್ಲಾದೇಶ ಮಧ್ಯಾಂತರ ಸರಕಾರದ ನೇತೃತ್ವ ವಹಿಸಿಕೊಂಡಿರುವ ಮೊಹಮ್ಮದ್ ಯೂನುಸ್, ಮಂಗಳವಾರ ರಾಷ್ಟ್ರೀಯ ದೇಗುಲವಾದ “ಢಾಕೇಶ್ವರಿ’ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಾವು ಒಂದೇ ಹಕ್ಕುಗಳನ್ನು ಹೊಂದಿರುವ ಜನ. ನಮಗೆ ಕೆಲಸ ಮಾಡಲು ಬಿಡಿ, ಇದಾದ ಬಳಿಕವೂ ನಾವು ವಿಫಲರಾದರೆ ಟೀಕಿಸಿ ಎಂದರು. ಇದೇ ವೇಳೆ, ಸರಕಾರವು ಸಹಾ ಯ ವಾ ಣಿ ಯೊಂದನ್ನು ಆರಂ ಭಿಸಿ, ಹಿಂದೂ ದೇಗು ಲ ಗಳು ಸೇರಿ ಧಾರ್ಮಿಕ ಸ್ಥಳಗಳ ಮೇಲೆ ನಡೆದ ದಾಳಿಯ ಮಾಹಿತಿ ನೀಡು ವಂತೆ ದೇಶ ವಾಸಿಗಳಿಗೂ ಸೂಚಿಸಿದೆ.
ಬಾಂಗ್ಲಾ ಹಣದುಬ್ಬರ 11.66%: ಕಳೆದ 12 ವರ್ಷಗಳಲ್ಲೇ ಗರಿಷ್ಠ
ವಿವಾದಾತ್ಮಕ ಉದ್ಯೋಗ ಮೀಸಲು ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಯ ಬೆನ್ನಲ್ಲೇ ಬಾಂಗ್ಲಾದೇಶವು ಭಾರೀ ಹಣದುಬ್ಬರಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಾಂಗ್ಲಾದ ಸಾಂಖ್ಯಿಕ ಬ್ಯೂರೊ, ಕಳೆದ 12 ವರ್ಷಗಳಲ್ಲೇ ಅಧಿಕ ಅಂದರೆ ಶೇ.11.66ರಷ್ಟು ಹಣದುಬ್ಬರ ಜುಲೈ ತಿಂಗ ಳಲ್ಲಿ ದಾಖಲಾಗಿದೆ ಎಂದು ತಿಳಿಸಿದೆ. ಈ ಪೈಕಿ ಆಹಾರ ಹಣ ದುಬ್ಬರ ಶೇ.14.10, ಆಹಾರೇತರ ಉತ್ಪನ್ನಗಳ ಹಣದುಬ್ಬರ ಶೇ.9.68 ತಲುಪಿದೆ. ಮೇಯಲ್ಲಿ ಹಣದುಬ್ಬರ ಶೇ.9.94, ಜೂನ್ನಲ್ಲಿ ಶೇ.9.72ರಷ್ಟಿದ್ದ ಹಣದುಬ್ಬರ ಪ್ರಮಾಣವು, ಜುಲೈಯಲ್ಲಿ ಪ್ರತಿಭಟನೆಯ ಕಾವಿನಂತೆಯೇ ಏರಿಕೆ ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್ ಸ್ಟಾರ್ ಬಂಧನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.