August15:ದೊಡ್ಡವರ ಗೋಳು-ಬರೋಡಾ ಮಹಾರಾಣಿ ರಾಧಿಕಾರಾಜೆಗೆ ಪಾತ್ರೆ ಮಾರುವ ಸ್ಥಿತಿ ಬಂದಿತ್ತೇ?

ಕೆಲವರು ತಮ್ಮ ಅರಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದ್ದರು...

Team Udayavani, Aug 14, 2024, 1:11 PM IST

August15:ದೊಡ್ಡವರ ಗೋಳು-ಬರೋಡಾ ಮಹಾರಾಣಿ ರಾಧಿಕಾರಾಜೆಗೆ ಪಾತ್ರೆ ಮಾರುವ ಸ್ಥಿತಿ ಬಂದಿತ್ತೇ?

ಸ್ವಾತಂತ್ರ್ಯ ಸಿಕ್ಕಾಗ ಭಾರತದ ನಡುವೆ 560ಕ್ಕೂ ಹೆಚ್ಚು ಚಿಕ್ಕ- ದೊಡ್ಡ ಸಂಸ್ಥಾನಗಳಿದ್ದವು. ಈ ಸಂಸ್ಥಾನಗಳನ್ನು ತುಂಡರಸರು ಆಳುತ್ತಿದ್ದರು. ಭಾರತ ಸರಕಾರ ಇವುಗಳಲ್ಲಿ ಹೆಚ್ಚಿನ ಸಂಸ್ಥಾನಗಳನ್ನು 1949ರ ಒಳಗೆ ಭಾರತದೊಡನೆ ವಿಲಿನೀಕರಿಸಿತ್ತು. ಅರಮನೆ, ಭೂ ಹಿಡುವಳಿ ಮುಂತಾದ ಖಾಸಗಿ ಆಸ್ತಿಗಳು ಆಯಾ ಸಂಸ್ಥಾನದ ರಾಜಕುಟುಂಬಗಳ ಬಳಿಯೇ ಉಳಿದುಕೊಂಡವು. ಇದಲ್ಲದೆ ಈ ರಾಜರಿಗೆ ರಾಜ್ಯದ ಬದಲು “ಪ್ರಿವೀ ಪರ್ಸ್‌’ (ರಾಜಭತ್ಯೆ) ಎಂಬ ಹೆಸರಿನಲ್ಲಿ ಮಾಸಾಶನ ನಿಗದಿಪಡಿಸಲಾಗಿತ್ತು. ಈ ಹಣದಲ್ಲಿ ರಾಜರು ಐಷಾರಾಮದಿಂದ ಜೀವನ ಸಾಗಿಸುತ್ತಿದ್ದರು.

1971ರಲ್ಲಿ ಇಂದಿರಾಗಾಂಧಿ ಸರಕಾರ ಸಂವಿಧಾನದಲ್ಲಿ 26ನೆಯ ತಿದ್ದುಪಡಿಯ ಮೂಲಕರಾಜರಿಗೆ ಸಿಗುತ್ತಿದ್ದ ಇವೆಲ್ಲ ರಾಜಭತ್ಯೆಯನ್ನು ರದ್ದುಪಡಿಸಿತು. ಇವರ ಬಳಿ ಸಾಕಷ್ಟು ಆಸ್ತಿಪಾಸ್ತಿಗಳಿದ್ದು , ಅವುಗಳ ಆದಾಯವೇ ಗಮ್ಮತ್ತಿನ ಜೀವನ ಸಾಗಿಸಲು ಸಾಕಿತ್ತು. ಕೆಲವರು ತಮ್ಮ ಅರಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದರೆ, ಇನ್ನೂ ಕೆಲವರು ಫೈವ್‌ ಸ್ಟಾರ್‌ ಹೊಟೇಲುಗಳಿಗೆ ನಡೆಸಲು ಕೊಟ್ಟರು.

ಇತ್ತೀಚೆಗೆ ಮಾಜಿ ಬರೋಡಾ ಸಂಸ್ಥಾನದ ರಾಜಮಾತೆ ರಾಧಿಕಾರಾಜೆ ಗಾಯಕ್‌ವಾಡ್‌ ತಮ್ಮ ಬದುಕಿನ ಬವಣೆಯ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. “”ಪ್ರಿವೀ ಪರ್ಸ್‌ ರದ್ದಾದ ಬಳಿಕ ನಾವು ಭಾರೀ ಕಷ್ಟದಲ್ಲಿ ದಿನ ಸಾಗಿಸುತ್ತಿದ್ದೆವು. ಹಲವು ಬಾರಿ ಅವಮಾನದ ಪರಿಸ್ಥಿತಿ ಎದುರಿಸಬೇಕಾಗಿತ್ತು. ಅರಮನೆಯ ಕೆಲಸ-ಕಾರ್ಯಗಳನ್ನು ನಡೆಸಲು
ಮನೆಯ ಬಂಗಾರದ ಪಾತ್ರೆಗಳನ್ನು ಗುಟ್ಟಿನಲ್ಲಿ ಮಾರಿದ್ದೆವು. ಕೆಲವರು ಆಸ್ಥಾನದ ಸಿಂಹಾಸನವನ್ನು ಕೂಡ ಮಾರಬೇಕಾಗಿ ಬಂತು” ಎಂದು ಅಲವತ್ತಿದ್ದರು.

ಈ ಹೇಳಿಕೆಗೆ ಟ್ವಿಟರ್‌ನಲ್ಲಿ ಉಗ್ರ ಪ್ರತಿಕ್ರಿಯೆ ಬಂದಿತ್ತು. “ಹಿಂದೆ ಇವರೆಲ್ಲ ಜನರನ್ನು ಸುಲಿದು ಅರಮನೆಯ ಕಾರುಬಾರು ಚಲಾಯಿಸುತ್ತಿದ್ದರು. ಸ್ವಾತಂತ್ರ್ಯದ ಬಳಿಕ ನಮ್ಮ ತೆರಿಗೆಯ ಹಣ ಇವರ ಐಷಾರಾಮಕ್ಕೆ ಹೋಗುತ್ತಿತ್ತು. ಇವರ ಬಂಗಾರದ ಪಾತ್ರೆಗಳು, ಸಿಂಹಾಸನ ಬಂದಿದ್ದು ನಮ್ಮ ಹಣದಿಂದ ತಾನೆ?” ಎಂದು ಹಲವರು ಪ್ರಶ್ನಿಸಿದ್ದರು.

“ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದವರು ಬಡತನದಲ್ಲಿ ಹೊಟ್ಟೆಗಿಲ್ಲದೆ ತೀರಿಕೊಂಡರು. ಇವರ ಬಳಿ ಬಂಗಾರದ ಪಾತ್ರೆ ಇತ್ತು. ಜನರು ಮಣ್ಣಿನ ತಟ್ಟೆಯಲ್ಲಿ ಉಣ್ಣುತ್ತಿದ್ದರು. ಇವರ ಐಷಾರಾಮಕ್ಕೆ ಸಿಂಹಾಸನ ಮಾರಿದರು ಎನ್ನುವುದು ದೊಡ್ಡ ಸಂಗತಿಯೆ? ಭಾರತದ ಅನೇಕ ಕಡೆಗಳಲ್ಲಿ ಬಡಪಾಯಿ ಜನರು ಮನೆಯ ಮಕ್ಕಳನ್ನು ಕೂಡ ಮಾರಿ ಜೀವನ ಸಾಗಿಸಿದ ದಾರುಣ ಘಟನೆಗಳಿವೆ! ” ಎಂದು ಜನರು ಟೀಕಿಸಿದರು.

ಬರೋಡಾ ಸಂಸ್ಥಾನ ಬ್ರಿಟಿಷರ ಬೆಂಬಲಿಗ ರಾಜ್ಯಗಳಲ್ಲಿ ಒಂದಾಗಿತ್ತು. ಈ ರಾಜಕುಟುಂಬದ ಬಳಿ ಈಗ ಇರುವ ಆಸ್ತಿಪಾಸ್ತಿಗಳ ಮೌಲ್ಯ 20 ಸಾವಿರ ಕೋಟಿಗೂ ಹೆಚ್ಚು. ಇವರ ವಾಸಸ್ಥಾನ “ಲಕ್ಷ್ಮೀವಿಲಾಸ ಪ್ಯಾಲೇಸ್‌’ ಜಗತ್ತಿನ ಅತ್ಯಂತ ದೊಡ್ಡ ಖಾಸಗಿ ನಿವಾಸವಾಗಿದೆ. ಲಂಡನ್‌ನ ಬಕಿಂಗ್‌ಹ್ಯಾಮ್‌ ಪ್ಯಾಲೇಸ್‌ಗಿಂತ ಮೂರು ಪಟ್ಟು ಹೆಚ್ಚು ದೊಡ್ಡದು ಇದು. ಇದರ ಕೆಲವು ಭಾಗಗಳನ್ನು ಈಗ ಮ್ಯೂಸಿಯಂ ಆಗಿ ಮಾಡಲಾಗಿದೆ. ಇದರೊಳಗೆ ಪ್ರವೇಶಕ್ಕಾಗಿ ಭಾರತೀಯ ಪ್ರವಾಸಿಗರು ತಲಾ 250 ರೂಪಾಯಿ ಟಿಕೇಟು ಖರೀದಿಸಬೇಕು. ತಿಂಗಳಿಗೆ ಇಲ್ಲಿಂದಲೇ ಸುಮಾರು 20 ಲಕ್ಷ ಆದಾಯ ಬರುತ್ತದೆ!

*ತುಕಾರಾಮ್‌ ಶೆಟ್ಟಿ
ಕೃಪೆ: ತರಂಗ ವಾರಪತ್ರಿಕೆ

ಟಾಪ್ ನ್ಯೂಸ್

Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್‌ ಮಾಡಿದ ಕ್ರಿಕೆಟ್‌ ಆಸ್ಟ್ರೇಲಿಯಾ

Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್‌ ಮಾಡಿದ ಕ್ರಿಕೆಟ್‌ ಆಸ್ಟ್ರೇಲಿಯಾ

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

8-chikkamagaluru

ಗಣಪತಿ ವಿಸರ್ಜನೆ ವೇಳೆ ಕುಣಿಯುವ ವಿಚಾರಕ್ಕೆ ಗಲಾಟೆ; ಯುವಕನಿಗೆ ಬ್ಲೇಡ್ ನಿಂದ ಹಲ್ಲೆ

Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್‌ ಮಾಡಿದ ಕ್ರಿಕೆಟ್‌ ಆಸ್ಟ್ರೇಲಿಯಾ

Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್‌ ಮಾಡಿದ ಕ್ರಿಕೆಟ್‌ ಆಸ್ಟ್ರೇಲಿಯಾ

ಮಲ್ಪೆ ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Malpe ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.