Viral video: ಅಬ್ಬಬ್ಭಾ…! ಸಿಂಹಗಳೊಂದಿಗೆ ಕಾಳಗಕ್ಕಿಳಿದ ಶ್ವಾನಗಳು!


Team Udayavani, Aug 14, 2024, 4:39 PM IST

1-simha

ಸೂರತ್:‌ ಮೃಗ ರಾಜ ಸಿಂಹವನ್ನು ಕೆಣಕಲು ಯಾವ ಪ್ರಾಣಿಯೂ ಧೈರ್ಯ ತೋರುವುದಿಲ್ಲ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಸಿಂಹಗಳೊಂದಿಗೆ ನಾಯಿಗಳೆರಡು ಹೋರಾಟಕ್ಕಿಳಿದ ವಿಡಿಯೋ ಸಧ್ಯ ವೈರಲ್‌ ಆಗುತ್ತಿದೆ.

2 ನಾಯಿಗಳು ಮತ್ತು 2 ಸಿಂಹಗಳು ಪರಸ್ಪರ ಜಗಳವಾಡುತ್ತಿರುವ ವಿಡಿಯೋ  ಗುಜರಾತ್‌ನಲ್ಲಿ ಏಷ್ಯಾಟಿಕ್‌ ಲಯನ್ಸ್‌ ಪ್ರದೇಶವೆಂದೆ ಖ್ಯಾತಿ ಹೊಂದಿದ ಗಿರ್‌ ನ್ಯಾಶನಲ್‌ ಪಾರ್ಕ್‌ನ ಸುಮಾರು 70 ಕಿಲೋ ಮೀಟರ್‌ ದೂರದಲ್ಲಿನ ಸಾವರ್‌ಕುಂಡ್ಲ ಎಂಬಲ್ಲಿನ ಗೋಶಾಲೆಯೊಂದರಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಆದಿತ್ಯವಾರ (ಆ.10) ಮಧ್ಯರಾತ್ರಿ 4 ಪ್ರಾಣಿಗಳು ಮುಖಾಮುಖಿಯಾಗಿದ್ದು, ಅತ್ಯಪರೂಪದ ದೃಶ್ಯವು ಗೇಟ್‌ಗೆ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಎರಡು ಸಿಂಹಗಳು ಗೇಟಿನ ಮೂಲಕ ಗೋಶಾಲೆಯೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಒಳಗಿದ್ದ ಎರಡು ನಾಯಿಗಳು ನೀಯತ್ತು ತೋರಿ ಸಿಂಹಗಳು ಒಳಬರದಂತೆ ಬಲವಾದ ಪ್ರತಿರೋಧ ತೋರಿ ಕಾಳಗಕ್ಕೆ ಮುಂದಾಗಿದೆ. ಸಿಂಹಗಳು ಗೇಟನ್ನು ಬಲವಾಗಿ ಗುದ್ದಿದಾಗ ಚಿಲಕ ಕಳಚಿಕೊಂಡಿತಾದರೂ ಅವುಗಳಿಗೆ ಒಳಗೆ ಬರಲು ಸಾಧ್ಯವಾಗಲಿಲ್ಲ. ಹಾಗಾಗಿ ಒಳಗಿದ್ದ ನಾಯಿಗಳಿಗಾಗಲೀ, ಗೋವುಗಳಿಗಾಗಲೀ ಯಾವುದೇ ರೀತಿಯ ಹಾನಿ ಉಂಟಾಗಲಿಲ್ಲ.

ಆ ಬಳಿಕ ಸಿಂಹಗಳು ಸಮೀಪದ ಪೊದೆಯೊಳಗೆ ಓಡಿದ್ದು, ಸೆಕೆಂಡುಗಳ ಅಂತರದಲ್ಲಿ ಗೇಟಿನ ಬಳಿ ಭಾರೀ ಶಬ್ದ ಉಂಟಾದ ಕಾರಣ ಒಳಗಿದ್ದ ವ್ಯಕ್ತಿಯು ಹೊರಗೋಡಿ ಬಂದಿದ್ದಾನೆ. ವ್ಯಕ್ತಿಯು ತನ್ನ ಬಳಿ ಇದ್ದ ಟಾರ್ಚ್‌ ಉಪಯೋಗಿಸಿಕೊಂಡು ಪೊದೆಯನ್ನು ಪರೀಕ್ಷಿಸಿದನಾದರೂ ಏನೂ ಕಾಣದ ಕಾರಣ ಗೇಟಿನ ಚಿಲಕ ಹಾಕಿ ಮರಳಿ ಗೋಶಾಲೆಯೊಳಗೆ ಹೋಗಿದ್ದಾನೆ.

ಮೀಸಲು ಅರಣ್ಯದ ಪ್ರದೇಶದಿಂದ ಸಿಂಹಗಳು ಹೊರಬಂದಿದ್ದು ಈ ವಿಡಿಯೋದಿಂದಾಗಿ ತಿಳಿದುಬಂದಿದೆ. ಆದರೂ ಈ ಘಟನೆಯ ಕುರಿತು ಅಧಿಕಾರಿಗಳ ವಲಯದಿಂದ ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ.

ಸಿಂಹಗಳ ಸಂರಕ್ಷಣೆ ಮತ್ತು ರಕ್ಷಣೆಯ ಸಲುವಾಗಿ ಗುಜರಾತ್ ನಲ್ಲಿ ವಿಶ್ವ ಸಿಂಹ ದಿನವನ್ನು ಆಚರಿಸಿದ ಮರುದಿನವೇ ಈ ಘಟನೆ ನಡೆದಿದೆ.ರಾಜ್ಯ ಅರಣ್ಯ ಇಲಾಖೆಯು ಎಸ್‌ಎಂಎಸ್‌ ಹಾಗೂ ಈಮೇಲ್‌ಗಳ ಮೂಲಕ ವಿಶ್ವ ಸಿಂಹ ದಿನದ ಜಾಗೃತಿಯನ್ನು ಮೂಡಿಸಿದೆ. ಜತೆಗೆ ರಾಜ್ಯಾದ್ಯಂತ 11 ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ರ‍್ಯಾಲಿಯಲ್ಲಿ ಭಾಗವಹಿಸಿದ್ದು, ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.2020 ರ ಗಣತಿಯ ಪ್ರಕಾರ ಗುಜರಾತ್‌ನಲ್ಲಿ ಸಿಂಹಗಳ ಸಂಖ್ಯೆಯು 674 ರಷ್ಟಿರುವುದು ತಿಳಿದು ಬಂದಿದೆ.

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

China: ಗರ್ಭಿಣಿ ಮೇಲೆ ನೆಗೆದು ಹಾರಿದ ಶ್ವಾನ-ಗರ್ಭಪಾತ: ಮಾಲೀಕನಿಗೆ 10 ಲಕ್ಷ ರೂ. ದಂಡ

China: ಗರ್ಭಿಣಿ ಮೇಲೆ ನೆಗೆದು ಹಾರಿದ ಶ್ವಾನ-ಗರ್ಭಪಾತ: ಮಾಲೀಕನಿಗೆ 10 ಲಕ್ಷ ರೂ. ದಂಡ

Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್‌ ಟಿಆರ್‌ ಸಿನಿಮಾ ವೀಕ್ಷಿಸಿದ ರೋಗಿ.!

Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್‌ ಟಿಆರ್‌ ಸಿನಿಮಾ ವೀಕ್ಷಿಸಿದ ರೋಗಿ.!

Video: ಕೇವಲ ಒಂದೇ ಚಕ್ರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಪೈಲೆಟ್

Video: ಕೇವಲ ಒಂದೇ ಚಕ್ರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಪೈಲೆಟ್

IAS officer stuns for Sarpanch woman’s English speech in barmar

Jaipur: ಸರಪಂಚ್‌ ಮಹಿಳೆಯ ಇಂಗ್ಲೀಷ್‌ ಭಾಷಣಕ್ಕೆ ಐಐಎಸ್‌ ಅಧಿಕಾರಿ ಫಿದಾ

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.