![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Aug 14, 2024, 4:55 PM IST
ಮೈಸೂರು: ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತನೆ ಮಾಡಿದ್ದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ಗೆ (Arun Yogiraj) ಅಮೆರಿಕಾ (USA) ವೀಸಾ (Visa) ನಿರಾಕರಿಸಿದೆ.
ಅಮೆರಿಕಾದ ಕನ್ನಡ ಕೂಟಗಳು ಆಯೋಜಿಸುವ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು 20 ದಿನಗಳ ಪ್ರವಾಸಕ್ಕಾಗಿ ಅರುಣ್ ಯೋಗಿರಾಜ್ ಕುಟುಂಬ ಸಹಿತ ತೆರಳಲು ಯುಎಸ್ಎಗೆ ತೆರಳಲು ಉತ್ಸುಕರಾಗಿದ್ದರು. ಅದಕ್ಕಾಗಿಯೇ ಜೂನ್ನಲ್ಲಿ ವೀಸಾಗೆ ಅರ್ಜಿ ಸಲ್ಲಿಸಿ ಅದಕ್ಕೆ ಬೇಕಾದ ದಾಖಲೆಗಳು, ಪೂರ್ವಾಪರ ಮಾಹಿತಿಗಳು ಹಾಗೂ ಅದಕ್ಕೆ ಬೇಕಾದ ನಿಬಂಧನೆಗಳ ಪೂರ್ಣಗೊಳಿಸಿದರು ಇದೀಗ ವೀಸಾ ನಿರಾಕರಣೆಯಾಗಿದೆ.
ಅಮೆರಿಕದ ಕನ್ನಡ ಕೂಟಗಳ ಸಂಘ, ವಿಶ್ವ ಕನ್ನಡ ಸಮ್ಮೇಳನ 2024 ಕಾರ್ಯಕ್ರಮವನ್ನು ವರ್ಜೀನಿಯಾದ ರಿಚ್ಮಂಡ್ನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಯೋಗಿರಾಜ್ ಮತ್ತು ಅವರ ಕುಟುಂಬಸ್ಥರಿಗೆ ಆಹ್ವಾನಿಸಿತ್ತು ಎನ್ನಲಾಗಿದೆ. ಸದ್ಯ ವೀಸಾ ಅರ್ಜಿಯ ತಿರಸ್ಕರಿಸಿರುವ ಅಮೆರಿಕ ರಾಯಭಾರ ಕಚೇರಿ ಇದುವರೆಗೆ ಯಾವುದೇ ಕಾರಣವನ್ನು ನೀಡಿಲ್ಲ.
ಎಲ್ಲ ದಾಖಲೆಗಳ ಸಲ್ಲಿಸಿದ್ದರು ವೀಸಾ ಸಿಕ್ಕಿಲ್ಲ: ಅರುಣ್
ಅಮೇರಿಕಾ ವೀಸಾ ನಿರಾಕರಣೆ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಅರುಣ್ ಯೋಗಿರಾಜ್ ” ನನ್ನ ವೀಸಾ ಯಾತಕ್ಕಾಗಿ ನಿರಾಕರಣೆಯಾಗಿದೆ ಎಂದು ಗೊತ್ತಿಲ್ಲ. ಅಮೆರಿಕಾ ವೀಸಾ ನೀಡುವ ಪ್ರಕ್ರಿಯೆಯಲ್ಲಿ ಹಲವು ನಿಯಮ, ನಿಬಂಧನೆಗಳು ಇರುತ್ತವೆ ಎಂದು ಗೊತ್ತಿತ್ತು ವೀಸಾ ಪ್ರಕ್ರಿಯೆಗೆ ನೀಡಬೇಕಾದ ಎಲ್ಲ ದಾಖಲೆಗಳ ಸಲ್ಲಿಸಿದ್ದು, ಆದಾಯ ತೆರಿಗೆ ಸಲ್ಲಿಕೆ, ಬ್ಯಾಂಕ್ಗೆ ಸಂಬಂಧಿಸಿದ ಮಾಹಿತಿ, ಆಡಿಟ್ ವರದಿಗಳನ್ನು ಸಲ್ಲಿಸಿದ್ದೇನೆ. ಈ ವರ್ಷ ವೀಸಾ ನಿರಾಕರಣೆಯಾದ್ದರಿಂದ ಮುಂದಿನ ವರ್ಷ ಕಾರ್ಯಕ್ರಮದಲ್ಲಿ ಭಾಗವಹಿಸುವೆ. ವೀಸಾ ನಿರಾಕರಣೆಗೆ ಹಲವು ನಿಯಮ, ನಿಬಂಧನೆಗಳು ಕಾರಣವಾಗಿರಬಹುದು ಎಂದು ಅರಿತಿದ್ದೇನೆ. ಅಲ್ಲಿನ ಕನ್ನಡಿಗರೊಂದಿಗೆ ಭೇಟಿಯಾಗಿ ಅವರೊಂದಿಗೆ ಬೆರೆಯುವ ಉತ್ಸಾಹದಲ್ಲಿದ್ದೆ. ನನ್ನ ಮಕ್ಕಳಿಗೂ ಯುಎಸ್ ನೋಡುವ ಉತ್ಸಾಹದಲ್ಲಿದ್ದರು. ಈಗ ಬೇರೆ ದೇಶಕ್ಕೆ ಕರೆದುಕೊಂಡು ಹೋಗಬೇಕು ಅಂದುಕೊಂಡಿದ್ದೇನೆ” ಎಂದು ಹೇಳಿದರು.
2008 ರಿಂದ, ಅವರು ವಿಗ್ರಹಗಳನ್ನು ಕೆತ್ತನೆ ಮಾಡಲು ಆರಂಭಿಸಿದ ಭಾರತದಾದ್ಯಂತ ಮನ್ನಣೆ ಪಡೆದರೆ ಬಳಿಕ ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತನೆ ಮಾಡುವ ಮೂಲಕ ದೇಶಾದ್ಯಂತ ಹಾಗೂ ಕರ್ನಾಟಕದ ಮನೆ ಮಾತಾದರು. ಅರುಣ್ ಯೋಗಿರಾಜ್ ಅವರ ಪ್ರತಿಭೆ ಮತ್ತು ಕೊಡುಗೆಯ ಜಾಗತಿಕ ಮಟ್ಟದಲ್ಲಿಯೂ ಗುರುತಿಸಿಕೊಂಡಿದೆ.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.