ದೇಶ ಶ್ರೀಮಂತವಾಗಲು ನಮಗಾಗಿ ದುಡಿಯುವ ಹೊರಗಿನ ಕೈಗಳು ಒಳಗಿರ ಬೇಕು: ಹೊಸ ಆರ್ಥಿ ಕ ಚಿಂತನೆ


Team Udayavani, Aug 14, 2024, 6:13 PM IST

ದೇಶ ಶ್ರೀಮಂತವಾಗಲು ನಮಗಾಗಿ ದುಡಿಯುವ ಹೊರಗಿನ ಕೈಗಳು ಒಳಗಿರ ಬೇಕು: ಹೊಸ ಆರ್ಥಿ ಕ ಚಿಂತನೆ

ಅಬುಧಾಬಿಯ ಫಲವತ್ತಾದ ಮರುಭೂಮಿಯ ಮೇಲೆ ವಾಯುವಿಹಾರ ಮಾಡುತ್ತಿರುವಾಗ ಹೊಸದೊಂದು ಆರ್ಥಿಕ ಚಿಂತನೆ ಇದ್ದಕ್ಕಿದ್ದ ಹಾಗೆ ತಲೆಗೆ ಹೊಳೆಯಿತು. ಏನು ಇಲ್ಲದ ದೇಶಗಳಿಂದು ಸುಖದ ಸುಪತ್ತಿಗೆಯಲ್ಲಿ ಮೆರೆಯುತ್ತಿದ್ದಾವೆ. ಅಮೇರಿಕಾ; ಸ್ವಿಟ್ಜರ್ಲ್ಯಾಂಡ್ ಯು.ಎ.ಇ. ಮುಂತಾದ ರಾಷ್ಟ್ರಗಳು.ಸರಿಯಾಗಿ ನೇೂಡಿದರೆ ಅವುಗಳಿಗೆ ಸರಿಯಾದ ಪರಿಸರವುಾ ಇಲ್ಲ ನೈಸರ್ಗಿಕ ಸಂಪತ್ತು ಇಲ್ಲ..ಒಳಹೊಕ್ಕು ನೇೂಡಿದರೆ ಸರಿಯಾದ ಮಾನವ ಸಂಪತ್ತು ಕೂಡ ಇಲ್ಲ..ಆದರೆ ಅದೇ ಸಕಲ ಸಂಪತ್ತು ಹೊಂದಿರುವ ನಮ್ಮ ದೇಶಕ್ಕೆ ಈ ಸಿರಿ ಸಂಪತ್ತಿನ ಭಾಗ್ಯ ಪಡೆಯ ಬೇಕಾದರೆ ಎಷ್ಟೊಂದು ಕಾಲ ಇಷ್ಟೊಂದು ಕಷ್ಟ ಪಡಬೇಕಾಗಿ ಬಂದಿದೆ ಅಂದರೆ ಇದಕ್ಕೆ ಕಾರಣವೇನು?.

ಹಾಗಾದರೆ ಈ ಅಮೇರಿಕಾ;ಈ ಸ್ವಿಟ್ಜರ್ಲ್ಯಾಂಡ್; ಈ ಯು ಎ ಇ.;ಮುಂತಾದ ದೇಶಗಳು ಈ ಶ್ರೀಮಂತಿಕೆಯನ್ನು ಸ್ವಂತ ದುಡಿದು ಗಳಿಸಿದ ಸಂಪತ್ತಾ?ಖಂಡಿತವಾಗಿಯೂ ಅಲ್ಲ. ಇದರೊಳಗೊಂದು ಸುಲಭವಾದ ಆಥಿ೯ಕತೆಯ ಚಿಂತನೆಯೂ ಅಡಗಿದೆ..ಆದರೆ ಈ ಉಪಾಯ ಇದುವರೆಗೂ ನಮ್ಮ ತಲೆಗೆ ಹೊಳೆಯಲೇ ಇಲ್ಲ.ಹಾಗಾದರೆ ಇದು ನಮ್ಮಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ..ಅನ್ನುವ ಹತ್ತಾರು ಪ್ರಶ್ನೆಗಳು ನನ್ನ ತಲೆಯಲ್ಲಿ ಸುಳಿದು ಹೋದವು.

ಕೊನೆಗೂ ಹೊಳೆದ ಒಂದು ಸುಲಭದ ಉಪಾಯವೆಂದರೆ ನಾವು ಶ್ರೀಮಂತರಾಗ ಬೇಕಾದರೆ ನಮಗಾಗಿ ದುಡಿಯುವ ಹೊರಗಿನ ಕೈಗಳು ದೇಶದ ಒಳಗಿರ ಬೇಕು ಅನ್ನುವ ಹೊಸದೊಂದು ಆರ್ಥಿಕ ಚಿಂತನೆ. ಇಂದಿನ ಕಾಲದಲ್ಲಿ ನಾವು ಆರ್ಥಿಕವಾಗಿ ಬಲಿಷ್ಠರಾಗಲು ನಮ್ಮ ದುಡಿಮೆಯೊಂದೇ ಸಾಕಾಗುವುದಿಲ್ಲ ಬೇರೆಯವರು ನಮ್ಮ ಪರವಾಗಿ ದುಡಿಯುವವರು ಬೇಕು.ಇದು ಹೇಗೆ ಸಾಧ್ಯ ಅನ್ನುವುದನ್ನು ಜಗತ್ತಿನ ಈ ಎಲ್ಲಾ ಶ್ರೀಮಂತ ರಾಷ್ಟ್ರಗಳು ಸಾಧಿಸಿತೇೂರಿಸಿದ್ದಾವೆ.. ಹಾಗಾಗಿ ಅವರು ಇಂದು ಶ್ರೀಮಂತರ ಪಟ್ಟಿಯಲ್ಲಿ ನಿಂತಿದ್ದಾರೆ..ಇದು ಹೇಗೆ ಅನ್ನುವುದೇ ಇಂದಿನ ಅರ್ಥಿಕ ಚಿಂತನೆ.

ಈ ಮೇಲಿನ ಎಲ್ಲಾ ದೇಶಗಳಿಗೆ ತಮ್ಮ ಜನರನ್ನು ಸಾಕುವ ಕೆಲಸ ತುಂಬಾ ಕಡಿಮೆ.ಆದರೆ ಆ ದೇಶಗಳಲ್ಲಿ ದುಡಿಯುವ ಹೊರಗಿನ ಕೈಗಳು ಆ ದೇಶದ ಜನರಿಗ್ಗಿಂತ ತುಂಬಾ ಜಾಸ್ತಿ ಇದ್ದಾರೆ.ಹೊರಗಿನಿಂದ ಬಂದು ದುಡಿಯುವ ಮಂದಿಗೆ ಆ ದೇಶದ ಖಜಾನೆಯಿಂದ ನಯಾಪೈಸೆ ಖಚ೯ ಮಾಡ ಬೇಕಾಗಿಲ್ಲ..ಬದಲಾಗಿ ಇವರಿಂದಾಗಿ ಅವರ ಖಜಾನೆ ತುಂಬಿಸಿ ಕೊಡುವ ಕೆಲಸ ನಾವು ಮಾಡುತ್ತಿದ್ದೇವೆ.ಇಲ್ಲಿ ಸರ್ಕಾರಕ್ಕೆ ಲಾಭವೇ ಜಾಸ್ತಿ ಹೊರತು ನಷ್ಟವೇ ಇಲ್ಲ.ನಮ್ಮ ವಿದ್ಯೆ, ನಮ್ಮ ಆರೇೂಗ್ಯ, ನಮ್ಮ ವಿಮೆ ಎಲ್ಲವನ್ನೂ ನಾವೇ ನೇೂಡಿಕೊಳ್ಳ ಬೇಕು.

ಉದಾ: ನಮ್ಮ ದೇಶದ ವಿದ್ಯಾವಂತರು ಬುದ್ಧಿವಂತರು ಅನ್ನಿಸಿಕೊಂಡವರು ಹೆಚ್ಚಿನ ವೇತನಕ್ಕಾಗಿಯೊ ಸೌಕರ್ಯಕ್ಕಾಗಿಯೊ ಐಷಾರಾಮಿ ಜೀವನಕ್ಕಾಗಿ ಇಂತಹ ದೇಶಗಳನ್ನೆ ಹುಡುಕಿಕೊಂಡು ನಾವೇ ಹೇೂಗುತ್ತೇವೆ..ನಾವು ಗಳಿಸಿದ ವೇತನದ ಮುಕ್ಕಾಲು ಭಾಗವಾದರೂ ಅಲ್ಲಿ ಖರ್ಚು ಮಾಡಿಯೇ ಮಾಡುತ್ತೇವೆ..ಇದು ನಾವು ಅವರ ದೇಶದಲ್ಲಿ ನಮ್ಮ ಪ್ರತಿಭೆಯನ್ನು ಅಡವಿಟ್ಟು ಕೆಲಸ ಮಾಡಿ ಪರೇೂಕ್ಷವಾಗಿ ಅವರಿಗೆ ಕೊಡುವ ಸಂಪತ್ತು ಹೌದು.ನಮ್ಮ ಸೇವೆಗಾಗಿ ಆ ದೇಶ ನಮಗಾಗಿ ಏನು ಕೊಡ ಬೇಕಾಗಿಲ್ಲ. ಎಲ್ಲಿಯವರೆಗೆ ಅಂದರೆ ಪೌರತ್ವ ಕೂಡಾ ಕೊಡುವುದಿಲ್ಲ.ಒಂದು ಅರ್ಥದಲ್ಲಿ ಪ್ರವಾಸೋದ್ಯಮ ಒಂದು ದೇಶಕ್ಕೆ ಯಾವ ರೀತಿಯಲ್ಲಿ ಲಾಭ ತರಬಹುದೊ ಅದೇ ತರದಲ್ಲಿ ನಮ್ಮ ಹಣದಿಂದಲೇ ಅವರ ಬೊಕ್ಕಸ ತುಂಬಿಸುವ ಕೆಲಸ ನಾವುಮಾಡುತ್ತೆವೆ ಅಷ್ಟೇ.!ಹಾಗಾಗಿ ಅವರ ಜನರನ್ನು ಸಾಕುವ ಜವಾಬ್ದಾರಿಯನ್ನು ನಾವು ಹೊತ್ತ ಹಾಗೆ.

ಆದುದರಿಂದಲೆಸ ಇಂತಹ ಪ್ರತಿಭಾವಂತರನ್ನು ತಮ್ಮ ದೇಶಗಳಿಗೆ ಸೆಳೆಯುವ ಕಾರಣಕ್ಕಾಗಿಯೇ ಅತ್ಯುತ್ತಮವಾದ ಪರಿಸರ ಪರಿಕರ ಸ್ವಾಫ್ಟ್ ವೇರ್ ಕಂಪನಿಗಳನ್ನು ಸ್ಥಾಪನೆಗೆ ಪೂರಕವಾದ ವ್ಯವಸ್ಥೆ..ಸ್ವಲ್ಪಮಟ್ಟಿಗೆ ಬೇರೆ ಬೇರೆ ತರದಲ್ಲಿ ಆಕಷಿ೯ಸುವ ತಂತ್ರಗಾರಿಕೆಗಳನ್ನು ಅಳವಡಿಸಿಕೊಳ್ಳುತ್ತವೆ..ಅದು ಕೂಡಾ ಅವರ ಲಾಭಕ್ಕಾಗಿಯೇ ನಮ್ಮ ಲಾಭಕ್ಕಾಗಿ ಅಲ್ಲ.‌

ಹಾಗಾದರೆ ನಮ್ಮಲ್ಲಿ ಅಂದರೆ ಭಾರತದಲ್ಲಿ ಈ ಆರ್ಥ ಚಿಂತನೆ ಯಾಕೆ ಹುಟ್ಟಿ ಕೊಳ್ಳಲಿಲ್ಲವೇಕೆ? .ನಮ್ಮಲ್ಲಿ ಇರುವ 145ಕೇೂಟಿ ಜನರನ್ನು ನಮ್ಮ ದುಡಿಮೆಯಲ್ಲಿಯೇ ನಮ್ಮ ಖರ್ಚಿನಲ್ಲಿಯೇ ಸಾಕ ಬೇಕಾದ ಪರಿಸ್ಥಿತಿ. ಅವರ ವಿದ್ಯಾಭ್ಯಾಸ ಆರೇೂಗ್ಯ ಉದ್ಯೋಗ..ಗ್ಯಾರಂಟಿ ಸಬ್ಸಿಡಿ ಒಂದೇ ಎರಡೇ.. ಎಲ್ಲದಕ್ಕೂ ನಮ್ಮ ದುಡಿಮೆಯಲ್ಲಿಯೇ ನೇೂಡಿ ಕೊಳ್ಳ ಬೇಕು.ನಮಗಾಗಿ ದುಡಿಯುವ ಹೊರಗಿನ ಕೈಗಳು ಇಲ್ಲಿ ಬರಲೇ ಇಲ್ಲ.ಹೊರಗಿನವರು ಬಂದು ನಮಗಾಗಿ ಕೆಲಸ ಮಾಡುವ ಆಥಿ೯ಕತೆಯ ಕಡೆಗೆ ನಾವು ಗಮನ ಹರಿಸಲೇ ಇಲ್ಲ..ಬದಲಾಗಿ ಬೇರೆಯವರಿಗಾಗಿ ದುಡಿಯಲು ನಾವು ಹೊರದೇಶಗಳಿಗೆ ಉದ್ಯೋಗ ಹುಡುಕಿಕೊಂಡು ಹೇೂಗುವ ಪರಿಸ್ಥಿತಿ ನಮ್ಮದು..ಹಾಗಾಗಿ ನಾವು ಸುಲಭ ದಾರಿಯಲ್ಲಿ ಶ್ರೀಮಂತರಾಗಲೂ ಸಾಧ್ಯವಿಲ್ಲ..ಏನಿದ್ದರೂ ಹಾಸಿಗೆ ಇದ್ದಷ್ಟೆ ಕಾಲು ಚಾಚಿ ಮಲಗುವ ಆರ್ಥಿ ಕ ಬದುಕು ನಮ್ಮದು.ಅಲ್ವೇ?.

*ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಉಡುಪಿ 

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.