Western Ghats: ಪಶ್ಚಿಮ ಘಟ್ಟದಲ್ಲಿ ಯಾವುದೇ ಯೋಜನೆ ಜಾರಿ ಬೇಡ: ಚಿಪ್ಲಿ
Team Udayavani, Aug 14, 2024, 9:38 PM IST
ಬೆಂಗಳೂರು: ಪಶ್ಚಿಮ ಘಟ್ಟಗಳ ಅಭಿವೃದ್ಧಿ ಕ್ರಮವನ್ನು ಮರು ಪರಿಶೀಲಿಸಬೇಕು ಹಾಗೂ ಗಾಡ್ಗಿಳ್ ವರದಿಯ ಕುರಿತಾಗಿ ಚರ್ಚೆಗಳಾಗಬೇಕು ಎಂದು “ಸೇವ್ ವೈಲ್ಡ್ ಅಟ್ಮಾಸ್ಫೇರ್-ನೇಚರ್ ಆ್ಯಂಡ್ ಮ್ಯಾನ್’ (ಸ್ವಾನ್-ಮ್ಯಾನ್) ಸಂಸ್ಥೆಯ ಕಾರ್ಯದರ್ಶಿ, ಪರಿಸರ ಹೋರಾಟಗಾರ ಅಖೀಲೇಶ್ ಚಿಪ್ಲಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಪಶ್ಚಿಮಘಟ್ಟಗಳು ಸೂಕ್ಷ್ಮ ಪ್ರದೇಶವಾಗಿದ್ದು ಇಲ್ಲಿ ಬಹುತೇಕ ನದಿಗಳು ಉಗಮವಾಗುತ್ತವೆ. ಆದ್ದರಿಂದ ಉಳಿದ ಪ್ರದೇಶಗಳಂತೆ ಈ ಭಾಗಗಳಲ್ಲಿ ಹಾಗೂ ಅಚ್ಚುಕಟ್ಟು ಪ್ರದೇಶಗಳಲ್ಲಿ ಯಾವುದೇ ಯೋಜನೆಗಳನ್ನು ಜಾರಿಗೊಳಿಸದೆ, ವಿಶೇಷ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದರು.
ಪರಿಸರ ಸ್ನೇಹಿ ವಸ್ತುಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ಪಶ್ಚಿಮ ಘಟ್ಟಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕು. ಈ ನಿಟ್ಟಿನಲ್ಲಿ ಗಾಡ್ಗಿಳ್ ವರದಿ ಹಾಗೂ ಇತರ ಅಭಿವೃದ್ಧಿ ಯೋಜ ನೆಗಳ ಕುರಿತು ಗಂಭೀರ ಚರ್ಚೆಗಳ ಆವಶ್ಯಕತೆಯಿದೆ. ಪಶ್ಚಿಮ ಘಟ್ಟವನ್ನು ಉಳಿಸುವ ದಿಶೆಯಲ್ಲಿ ಇದು ಮೊದಲ ಹೆಜ್ಜೆಯಾಗಬೇಕು ಎಂದರು.
ಪ್ರೊಜೆಕ್ಟ್ ವೃಕ್ಷ ಫೌಂಡೇಶನ್ ಅಧ್ಯಕ್ಷ ವಿಜಯ್ ನಿಶಾಂತ್ ಮಾತ ನಾಡಿ, ಸುಸ್ಥಿರ ಅಭಿವೃದ್ಧಿಯತ್ತ ಗಮನ ಹರಿಸದೇ ಪರಿಸರ ನಾಶ ಮಾಡಿರು ವುದು ಪ್ರಾಕೃತಿಕ ವಿಕೋಪಕ್ಕೆ ಮೂಲ ಕಾರಣ. ಯಾವುದೇ ಯೋಜನೆಯ ಜಾರಿಗೆ ಮೊದಲು ಸ್ಥಳೀಯ ಪರಿಸರದ ಗುಣಗಳ ಬಗ್ಗೆ ಅರಿವಿರುವುದು ಬಹಳ ಮುಖ್ಯ ಎಂದು ತಿಳಿಸಿದರು.
ಇದನ್ನೂ ಓದಿ: Apprenticeship Course: ಪದವಿ ಜತೆ ಅಪ್ರಂಟಿಸ್ಶಿಪ್ ಕೋರ್ಸ್ ಆರಂಭ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.