Mines ಕಂಪೆನಿಗಳಿಂದ ತೆರಿಗೆ ಬಾಕಿ ಪಡೆಯಲು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಅಧಿಕಾರ
Team Udayavani, Aug 15, 2024, 12:08 AM IST
ಹೊಸದಿಲ್ಲಿ: ಗಣಿ ಕಂಪೆನಿಗಳು ಬಾಕಿ ಉಳಿಸಿ ಕೊಂಡಿರುವ ರಾಯಧನವನ್ನು ಖನಿಜ ಸಂಪದ್ಭರಿತ ರಾಜ್ಯಗಳು ಸಂಗ್ರಹಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಅಲ್ಲದೇ 2005ರ ಎಪ್ರಿಲ್ 1ರಿಂದಲೇ ಅನ್ವಯ ವಾಗುವಂತೆ ರಾಜ್ಯಗಳು ಬಾಕಿಯುಳಿದಿರುವ ರಾಯಧನ ಮತ್ತು ಲೆವಿ ಹೇರಬಹುದು ಎಂದು ನ್ಯಾಯಪೀಠ ಹೇಳಿದೆ. ಬಾಕಿ ಉಳಿಸಿಕೊಂಡಿರುವ ಯಾವುದೇ ಪಾವತಿ ಮೇಲೆಯೂ ದಂಡ ವಿಧಿಸದಂತೆಯೂ ಸೂಚಿಸಿದೆ.
1989ರಿಂದ ಗಣಿ ಮತ್ತು ಖನಿಜಗಳ ಮೇಲೆ ಹೇರಲಾಗಿರುವ ರಾಯಧನ ಲೆವಿ ರೀಫಂಡ್ಗೆ ರಾಜ್ಯಗಳ ಒತ್ತಾಯವನ್ನು ಕೇಂದ್ರ ಸರಕಾರ ವಿರೋಧಿಸಿದೆ. ರೀಫಂಡ್ ಮಾಡಿದರೆ ಸಾರ್ವಜನಿಕ ಕಂಪೆನಿಗಳು ಮತ್ತು ಜನರ ಮೇಲೆ ಪರಿಣಾಮ ಬೀರಲಿದೆ. ಆರಂಭದ ಲೆಕ್ಕಾಚಾರದ ಪ್ರಕಾರ, 70 ಸಾವಿರ ಕೋಟಿ ರೂ. ಖಜಾನೆಗೆ ಹೊರೆಯಾಗಲಿದೆ ಎಂದು ಕೇಂದ್ರ ತನ್ನ ವಾದವನ್ನು ಮಂಡಿಸಿತಾದರೂ ನ್ಯಾಯಪೀಠ ಇದನ್ನು ಒಪ್ಪಲಿಲ್ಲ.
ಸುಪ್ರೀಂ ಕೋರ್ಟ್ನ ಈ ತೀರ್ಪಿನಿಂದ ಖನಿಜ ಸಂಪದ್ಭರಿತ ರಾಜ್ಯಗಳಾದ ಒಡಿಶಾ, ಝಾರ್ಖಂಡ್, ಪಶ್ಚಿಮ ಬಂಗಾಲ, ಛತ್ತೀಸ್ಗಢ, ಮಧ್ಯಪ್ರದೇಶ, ರಾಜಸ್ಥಾನಗಳಿಗೆ ಲಾಭವಾಗಲಿದೆ. ಈ ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಗಣಿ ಕಂಪೆನಿಗಳ ಮೇಲೆ ಹೆಚ್ಚುವರಿ ಲೆವಿಯನ್ನು ವಿಧಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.