Honeytrap business: ಅಕ್ಕ-ತಮ್ಮನಿಂದ ಹನಿಟ್ರ್ಯಾಪ್ ದಂಧೆ
ಮಿಸ್ಡ್ ಕಾಲ್ ಕೊಟ್ಟು ಯುವಕರನ್ನು ಖೆಡ್ಡಾಕ್ಕೆ ಬೀಳಿಸುತ್ತಿದ್ದ ಆರೋಪಿಗಳ ಬಂಧನ; ಫುಡ್ ಡೆಲಿವರಿ ಬಾಯ್ಗೆ ಹನಿಟ್ರ್ಯಾಪ್ ಮಾಡಿ ಸಿಕ್ಕಿಬಿದ್ದ ಸಹೋದರ-ಸಹೋದರಿ
Team Udayavani, Aug 16, 2024, 2:37 PM IST
ಬೆಂಗಳೂರು: ಮಿಸ್ಡ್ ಕಾಲ್ ಕೊಟ್ಟು ಯುವಕರು ಹಾಗೂ ಕೆಲ ಪುರುಷರನ್ನು ಪರಿಚಯಿಸಿಕೊಂಡು ಬಳಿಕ ಹನಿಟ್ರ್ಯಾಪ್ ಮಾಡಿ, ಬ್ಲ್ಯಾಕ್ವೆುàಲ್ ಮಾಡುತ್ತಿದ್ದ ಅಕ್ಕ-ತಮ್ಮ ಸೇರಿ ಮೂವರು ಸಂಪಿಗೆಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಅಗ್ರಹಾರ ಲೇಔಟ್ ನಿವಾಸಿ ನಜ್ಮಾ ಕೌಸರ್ (38), ಈಕೆಯ ಸಹೋದರ ಮೊಹಮ್ಮದ್ ಖಲೀಲ್(24) ಹಾಗೂ ಹೆಗಡೆನಗರ ನಿವಾಸಿ ಮೊಹಮ್ಮದ್ ಅತೀಕ್ (30) ಬಂಧಿತರು.
ಆರೋಪಿತ ಗ್ಯಾಂಗ್ ಇತ್ತೀಚೆಗೆ ಸಂಪಿಗೆಹಳ್ಳಿ ನಿವಾಸಿ, ಡೆಲಿವರಿ ಬಾಯ್ ಕೃಷ್ಣ ಎಂಬಾತನನ್ನು ಹನಿಟ್ರ್ಯಾಪ್ ಮಾಡಿ ಮೊಬೈಲ್ ಹಾಗೂ ನಗದು ಸುಲಿಗೆ ಮಾಡಿತ್ತು. ಆರೋಪಿಗಳ ಪೈಕಿ ನಜ್ಮಾ ಕೌಸರ್ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಕೌಟುಂಬಿಕ ವಿಚಾರವಾಗಿ ಪತಿಯಿಂದ ದೂರವಾಗಿ ಮಕ್ಕಳ ಜತೆ ವಾಸವಾಗಿದ್ದಾಳೆ.
ಈಕೆಯ ಸಹೋದರ ಮೊಹಮ್ಮದ್ ಖಲೀಲ್ ಯಾವುದೇ ಕೆಲಸಕ್ಕೆ ಹೋಗದೆ, ಅಕ್ಕನ ಅಕ್ರಮ ದಂಧೆಗೆ ಸಹಕಾರ ನೀಡುತ್ತಿದ್ದಾನೆ. ಇನ್ನು ಮೊಹಮ್ಮದ್ ಅತೀಕ್ ಪರಿಚಯಸ್ಥನಾಗಿದ್ದು, ಹಣ ಸಂಪಾದನೆಗಾಗಿ ಮೂವರು ಸಂಚು ರೂಪಿಸಿ ಹನಿಟ್ರ್ಯಾಪ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ಸೇರಿ ಬೇರೆ ಬೇರೆ ಮಾರ್ಗಗಳಲ್ಲಿ ದೊರೆಯುವ ನಂಬರ್ ಗಳಲ್ಲಿ ಆಯ್ಕೆ ಮಾಡಿಕೊಂಡು ಕರೆ ಮಾಡಿ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಫುಡ್ವರಿ ಬಾಯ್ ಆಗಿರುವ ಕೃಷ್ಣಗೆ ಕೆಲ ದಿನಗಳ ಹಿಂದೆ ನಜ್ಮಾ ಮಿಸ್ಡ್ ಕಾಲ್ ಕೊಟ್ಟಿದ್ದಳು. ಅಪರಿಚಿತ ನಂಬರ್ ಆಗಿದ್ದರಿಂದ ಕೃಷ್ಣ ಕರೆ ಮಾಡಿದಾಗ ನಜ್ಮಾ ಕರೆ ಸ್ವೀಕರಿಸಿ ಮಾತನಾಡಿದ್ದಾಳೆ. ಈ ವೇಳೆಯೇ ತನ್ನ ಹೆಸರು ಉಲ್ಲೇಖಿಸಿ ಪರಿಚಯಸಿಕೊಂಡು ನಜ್ಮಾ, ಕೃಷ್ಣಗೆ ಪ್ರತಿ ನಿತ್ಯ ಕರೆ ಮಾಡಿ ಮಾತನಾಡುತ್ತಿದ್ದಳು. ಈ ಮಧ್ಯೆ ಕೆಲ ದಿನಗಳ ಹಿಂದೆ ಸೆಕ್ಸ್ ವಿಚಾರ ಪ್ರಸ್ತಾಪಿಸಿದ ಆಕೆ, ಒಂದು ದಿನ ಇಬ್ಬರು ಸೇರೋಣ ಎಂದು ಆಮಿಷವೊಡ್ಡಿದ್ದಳು. ಆ ನಂತರ ತುರ್ತಾಗಿ ಹಣ ಬೇಕಾಗಿದೆ ಎಂದು ಕೃಷ್ಣನಿಂದ 1,400 ರೂ. ಅನ್ನು ಫೋನ್ ಪೇ ಮೂಲಕ ಪಡೆದುಕೊಂಡಿದ್ದಳು.
ಬೆಡ್ರೂಮ್ಗೆ ನುಗ್ಗಿ ವಂಚಕರು!:
ಈ ಮಧ್ಯೆ ಆ.8 ರಂದು ಕೃಷ್ಣಗೆ ಕರೆ ಮಾಡಿದ ನಜ್ಮಾ, ಸೆಕ್ಸ್ ಮಾಡೋಣ ಬಾ ಎಂದು ಅಗ್ರಹಾರ ಲೇಔಟ್ನಲ್ಲಿರುವ ತನ್ನ ಮನೆಗೆ ಕರೆಸಿಕೊಂಡಿದ್ದಾಳೆ. ಆತ ಬರುತ್ತಿದ್ದಂತೆ ನೇರವಾಗಿ ಬೆಡ್ ರೂಮ್ಗೆ ಕರೆದೊಯ್ದು ಆತನ ಪಕ್ಕ ಕುಳಿತುಕೊಂಡು ಕುಶಲೋಪರಿ ವಿಚಾರಿಸಿದ್ದಾಳೆ. ಅದೇ ಕ್ಷಣದಲ್ಲಿ ಇತರೆ ಇಬ್ಬರು ಆರೋಪಿಗಳು ಏಕಾಏಕಿ ಬೆಡ್ ರೂಮ್ಗೆ ನುಗ್ಗಿ ತನ್ನ ತಂಗಿ ಜತೆ ಏನ್ಮಾಡುತ್ತಿದ್ದಿಯಾ? ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ. ಬಳಿಕ ಕೃಷ್ಣನ ಮೊಬೈಲ್ ಕಸಿದುಕೊಂಡು, ಕೂಡಲೇ ಹಣ ಕೊಡು ಇಲ್ಲವಾದರೆ ಅತ್ಯಾಚಾರ ಕೇಸ್ ದಾಖಲಿಸುತ್ತೇವೆ ಎಂದು ಬ್ಲ್ಯಾಕ್ಮೇಲ್ ಮಾಡಿ, ಒಂದಷ್ಟು ಹಣ ಕಸಿದು ಕೊಂಡಿದ್ದಾರೆ. ಬಳಿಕ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದರು. ನಂತರ ಕೃಷ್ಣ ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ಎಫ್ ಐಆರ್ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
25-30 ಮಂದಿಗೆ ವಂಚನೆ, ಮನೆ ಬದಲಿಸುತ್ತಿದ್ದ ನಜ್ಮಾ
ಆರೋಪಿಗಳ ವಿಚಾರಣೆಯಲ್ಲಿ ಇದುವರೆಗೂ ಸುಮಾರು 25-30 ಮಂದಿಗೆ ವಂಚಿಸಿದ್ದಾರೆ ಎಂಬುದು ಗೊತ್ತಾಗಿದೆ. ಕನಿಷ್ಠ 5 ಸಾವಿರ ರೂ.ನಿಂದ 2 ಲಕ್ಷ ರೂ. ವರೆಗೆ ಹನಿಟ್ರ್ಯಾಪ್ ಮಾಡಿ ಹಣ ಸುಲಿಗೆ ಮಾಡಿದ್ದಾರೆ. ಆದರೆ, ಕೆಲವರು ಮಾರ್ಯಾದೆಗೆ ಹೆದರಿ ದೂರು ನೀಡಿಲ್ಲ. ಇನ್ನು ನಜ್ಮಾ, ಒಬ್ಬ ವ್ಯಕ್ತಿಗೆ ವಂಚಿಸಿದ ಬಳಿಕ, ಮನೆ ಬದಲಾಯಿಸುತ್ತಿದ್ದಳು. ಹೀಗೆ ಹೆಗಡೆನಗರ, ಅಗ್ರಹಾರ ಲೇಔಟ್ ಸೇರಿ ನಾಲ್ಕೈದು ಕಡೆಗಳಲ್ಲಿ ಹತ್ತಾರು ಮನೆಗಳನ್ನು ಬದಲಾಯಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದರು. ಸಂಪಿಗೆಹಳ್ಳಿ ಠಾಣಾಧಿಕಾರಿ ಎಂ.ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಜಾಲತಾಣದಲ್ಲಿ ನಂಬರ್ ಕಳವು
ಸಾಮಾಜಿಕ ಜಾಲತಾಣ ಫೇಸ್ಬುಕ್, ಇನ್ಸ್ಟ್ರಾಗ್ರಾಂ ಗಳಲ್ಲಿ ಬಳಕೆದಾರರು ನೋಂದಾಯಿಸುವ ಮೊಬೈಲ್ ನಂಬರ್ಗಳನ್ನು ನಜ್ಮಾ ಮತ್ತು ತಂಡ ಕಳವು ಮಾಡುತ್ತಿತ್ತು. ಬಳಿಕ ಆ ನಂಬರ್ಗೆ ನಜ್ಮಾ ಮೂಲಕ ಕರೆ ಮಾಡಿಸಿ ಯುವಕರು ಅಥವಾ ಪುರುಷರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!
Bengaluru: ಮೆಜೆಸ್ಟಿಕ್ ಬಳಿ ಬಿಎಂಟಿಸಿ ಬಸ್ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು
Bengaluru: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮತ್ತೆ 9 ಮೊಬೈಲ್ ಫೋನ್ಗಳು ಪತ್ತೆ!
Leopard: ಎಲೆಕ್ಟ್ರಾನಿಕ್ ಸಿಟಿ ಎನ್ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ
Anekal: ಶಾಲಾ ಬಸ್ ಅಡ್ಡಗಟ್ಟಿ ಚಾಲಕನಿಗೆ ತೀವ್ರ ಹಲ್ಲೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್
Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!
ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು
Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ
Bajpe ಬಸ್ ನಿಲ್ದಾಣ ಕಟ್ಟಡ ಪೂರ್ಣ; 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.