Temple: ಉದ್ಭವ ಶಿವಲಿಂಗ- ಕಿರಿಯಾಡಿಯ ಹಿರಿಯ ದೇವಾಲಯದ ಹಿರಿಯ ಕಥೆ


Team Udayavani, Aug 16, 2024, 4:24 PM IST

Temple: ಉದ್ಭವ ಶಿವಲಿಂಗ- ಕಿರಿಯಾಡಿಯ ಹಿರಿಯ ದೇವಾಲಯದ ಹಿರಿಯ ಕಥೆ

ನಾವು ಮಹಾಭಾರತ ಕಥೆಯನ್ನು ಕೇಳಿರುತ್ತೇವೆ, ಓದಿರುತ್ತೇವೆ. ಅದರಲ್ಲಿ ಪಾಂಡವರೂ ಮತ್ತು ಕೌರವರು ಪಗಡೆ ಆಟವಂತೂ ಒಮ್ಮೆ ಮೈ ಜುಮ್ಮ್ ಎನ್ನುವಂತಿದೆ. ಹೇಗೆ ಶಕುನಿಯು ಮೋಸದ ಪಗಡೆ ಆಡಿ ಪಾಂಡವರನ್ನು ಸೋಲಿಸಿ ವನವಾಸಕ್ಕೆ ಕಳುಹಿಸಿದನು ಎಂದು. ಪಾಂಡವರು ವನವಾಸಕ್ಕೆ ಹೋಗುತ್ತಾರೆ. ಅವರು ಇಡೀ ಭಾರತ ದೇಶವನ್ನು ಸುತ್ತಿ ಬರುತ್ತಾರೆ ಎಂದು ಹೇಳುವುದು ಇದೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮಕ್ಕೆ ಬಂದಿರುತ್ತಾರೆ ಎಂಬ ನಂಬಿಕೆ ಇದೆ. ಇದಕ್ಕೆ ಪ್ರತೀತಿ, ಕಥೆ, ಗ್ರಾಮದ ಹೆಸರು ಸಾಕ್ಷಿ ವಿನಃ ಯಾವುದೇ ಲಿಖಿತ ದಾಖಲೆಗಳು ಇಲ್ಲ.

ನಾನು ಮೊದಲೇ ಹೇಳಿದಂತೆ ಉಜಿರೆ ಗ್ರಾಮದಿಂದ 3 ಕಿ.ಮೀ ಹೋದಾಗ ಕಿರಿಯಾಡಿ ಎಂಬ ರಸ್ತೆಯಲ್ಲಿ ಒಂದು ಶಿವ ದೇವಾಲಯವಿದೆ. ಅಲ್ಲಿಂದ ಸ್ವಲ್ಪ ದೂರ ಹೋದರೆ ಸಿಗುವುದೇ ಭೀಮ ಗುಡ್ಡೆ.ಪ್ರತೀತಿಗಳ ಪ್ರಕಾರ ಹಿಂದೆ ಪಾಂಡವರು ವನವಾಸಕ್ಕೆ ಬಂದು ಇದೇ ಭೀಮ ಗುಡ್ಡೆಯಲ್ಲಿ ವಾಸಿಸುತ್ತಿದ್ದರು. ಆಗ ಜನವಸತಿ ಕಡಿಮೆ ಇತ್ತೋ ಏನೋ ತಿಳಿಯದು.ಅಲ್ಲಿನ ಜನ ಆ ಸ್ಥಳಕ್ಕೆ ಹೆಸರಿಟ್ಟಿದ್ದರೋ ತಿಳಿಯದು. ಆದರೆ ಭೀಮನ ಬಳಗ ಬಂದು ಅಲ್ಲಿ ನೆಲೆಸಿದ ಕಾರಣ ಅವನ ಹೆಸರು ನಾಮಕರಣ ಮಾಡಿದ್ದರು, ಎಂದು ಜನ ಹೇಳುತ್ತಾರೆ.

ಅಲ್ಲಿನ ಕಥೆಯಂತೆ ಭೀಮನ ಸಂಗಡಿಗರು ಒಂದು ದಿನ ಅಲ್ಲಿಯ ತಂಗಿದ್ದರು ಹಾಗೂ ಅಲ್ಲಿಯೇ ತಮ್ಮ ಆಹಾರ ತಯಾರಿಸಿಕೊಂಡಿದ್ದರು ಎಂಬ ನಂಬಿಕೆಯು ಇದೆ. ಆ ಸಮಯದಲ್ಲಿ ನೀರಿನ ಮೂಲಗಳಾದ ಕೆರೆ, ಬಾವಿಗಳು ಇರಲ್ಲಿಲ. ಹುಡುಕಾಡುತ್ತ ಬಂದ ಭೀಮ ಕಿರಿಯಾಡಿ ಎಂಬಲ್ಲಿ ತನ್ನ ಒಂದು ಕೈಯಿಂದ ಮಣ್ಣನ್ನು ಒಂದೇ ಬಾರಿ ಅಗೆದಾಗ ಅಲ್ಲಿ ನೀರು ಸಿಕ್ಕಿತ್ತು. ಅದನ್ನು ಹೀಗ “ಸರಸ್ವತಿ ಕೆರೆ” ಎಂದು ಕರೆಯುತ್ತಾರೆ. ಅವರು ನಿಮಿ೯ಸಿದ ಆ ಕೆರೆ ಕೈಯಲ್ಲಿ ಗುದ್ದಿದಂತೆ ಕಾಣುತ್ತದೆ. ವಷ೯ಪೂತಿ೯ ನೀರು ತುಂಬಿರುತ್ತದೆ. ಕಾಲಕ್ರಮೇಣ ಅದೇ ಕೆರೆಯಲ್ಲಿ ಸರಸ್ವತಿ ದೇವಿ ಸ್ನಾನಕ್ಕೆ ಬರುತ್ತಾರೆ ಎಂಬ ನಂಬಿಕೆ ಹುಟ್ಟಿಕೊಂಡಿತ್ತು.

ಶಿವಲಿಂಗ ಉದ್ಭವಾಯಿತು ಎಂಬ ನಂಬಿಕೆ ಇದೆ. ಅದೇ ಶಿವಲಿಂಗಕ್ಕೆ ಗುಡಿ ಕಟ್ಟಿ ಪೂಜಿಸಲಾಗುತ್ತಿತ್ತು. ಶಿವಲಿಂಗಕ್ಕೆ ಪ್ರತಿದಿನ ಸರಸ್ವತಿ ಕೆರೆಯಿಂದ ನೀರು ತಂದು ಅಭಿಷೇಕ ಮಾಡುತ್ತಾರೆ. ವಿಶೇಷ ದಿನಗಳಾದ ಆಟಿ ಅಮಾವಾಸ್ಯೆ, ಶಿವರಾತ್ರಿ, ಸೋಮವಾರ ವಿಶೇಷ ಪೂಜೆ ನಡೆಯುತ್ತದೆ. ಇಲ್ಲಿ ಶಿವ, ಗಣೇಶ, ಅ‌ನ್ನಪೂರ್ಣೆ ಮುಂತಾದ ದೇವರ ಗುಡಿಗಳಿವೆ. ಪ್ರತಿದಿನ ದೇವರಿಗೆ ಪೂಜೆ ನಡೆಯುತ್ತದೆ. ಕಾಲಕ್ರಮೇಣ ಜನರ ಕೈಯಲ್ಲಿ ದೇವರ ಕೆಲಸವಾಗುವಂತೆ ಜೀರ್ಣೋದ್ಧಾರ ಕ್ರಿಯೆಯೂ ನಡೆಯಿತು.

ಪ್ರತಿವರ್ಷವು ರಥೋತ್ಸವ ಮಾಡಿ ಸಂಭ್ರಮ ಪಡುತ್ತಾರೆ. ಪ್ರಕೃತಿ ಸೌಂದರ್ಯ ಹೇಳುವುದೇ ಬೇಡ ಗಿಡಮರಗಳ ನಡುವೆ ದೇವಾಲಯ. ದೇವಾಲಯದ ಎದುರು ಗದ್ದೆಗಳು, ಆಹಾರಕ್ಕಾಗಿ ಬಂದ ಚಿಲಿಪಿಲಿ ಹಕ್ಕಿಗಳು,ಮೇವಿಗಾಗಿ ಬಂದ ದನ ಕರುಗಳು, ಹಸಿ ಹಸಿರಾಗಿಬಿಟ್ಟ ಚಿಗುರುಗಳು, ಪರಿಮಳ ಸುರಿಸೊ ಹೂವುಗಳು, ಇವುಗಳನ್ನು ನೋಡುವಾಗ ಹಿಂದೆ ನಮ್ಮ ಮುತ್ತಜ್ಜಿ ಮುತ್ತಜ್ಜನ ಕಾಲದ ಪ್ರಕೃತಿ ನೋಡುವಂತೆ ಕಾಣುತ್ತದೆ. ಭಕ್ತರು ದೇವಾಲಯದ ಸುತ್ತಮುತ್ತ ಹಾಗೆ ತಮ್ಮ ಪರಿಸರ ಕಾಪಾಡಿ ಮನಸ್ಸಿಗೆ ದೇಹಕ್ಕೆ ಸಂತೋಷ ಕೊಡುವ ಸ್ಥಳವಾಗಿ ಕಂಡು ಬರುವುದೇ ಈ ಕಿರಿಯಾಡಿ ದೇವಾಲಯ.

– ಕಾವ್ಯ, ಉಜಿರೆ

ಟಾಪ್ ನ್ಯೂಸ್

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

BANDARAKERI

Udupi: ಭಕ್ತರಲ್ಲಿಗೆ ಭಾಗವತ ಭಂಡಾರಕೇರಿ ಶ್ರೀಗಳ ಸಾಧನೆ

Payan

Movie Release: ರಾಜ್ಯಾದ್ಯಂತ “ಪಯಣ್‌’ ಸಿನೆಮಾ ಸೆ.20ರಂದು ತೆರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ಹಳ್ಳಿಯಲ್ಲಿ ಪ್ರತಿಯೊಬ್ಬ ಪುರುಷನು ಎರಡು ಬಾರಿ ಮದುವೆಯಾಗುತ್ತಾನಂತೆ! ಕಾರಣವೂ ವಿಚಿತ್ರ

ಈ ಹಳ್ಳಿಯಲ್ಲಿ ಪ್ರತಿಯೊಬ್ಬ ಪುರುಷನು ಎರಡು ಬಾರಿ ಮದುವೆಯಾಗುತ್ತಾನಂತೆ! ಕಾರಣವೂ ವಿಚಿತ್ರ

smi irani

Smriti Irani ದೆಹಲಿ ಬಿಜೆಪಿಯಲ್ಲಿ ಸಕ್ರಿಯ: ”ಸಿಎಂ ಫೇಸ್” ಆಗಿ ಕೇಳಿ ಬರುತ್ತಿರುವ ಹೆಸರು!

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

Tan removalಗೆ ಟೊಮೆಟೊ ಫೇಸ್‌ ಪ್ಯಾಕ್‌; ನೈಸರ್ಗಿಕ ತ್ವಚೆ ಕಾಳಜಿ

Beauty Tips: ಮುಖದ ಕಾಂತಿ ಹೆಚ್ಚಿಸಲು ಟೊಮ್ಯಾಟೋ ಫೇಸ್‌ ಪ್ಯಾಕ್‌; ಇದರ ಲಾಭವೇನು ಗೊತ್ತಾ?

1

South Indian actors: ನಾಗಾರ್ಜುನ್‌ ಟು ವಿಜಯ್; ದಕ್ಷಿಣ ಭಾರತದ ಶ್ರೀಮಂತ‌ ನಟರು ಯಾರ‍್ಯಾರು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.