Karnataka Cricket; ಯರೇಗೌಡ ಮತ್ತೆ ರಾಜ್ಯ ತಂಡದ ಕೋಚ್
Team Udayavani, Aug 17, 2024, 12:00 AM IST
ಬೆಂಗಳೂರು: ಕರ್ನಾಟಕದ ಮಾಜಿ ಆಟಗಾರ ಕೆ. ಯರೇಗೌಡ ಮತ್ತೂಮ್ಮೆ ರಾಜ್ಯ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ. ಅವರು ಪಿ.ವಿ. ಶಶಿಕಾಂತ್ ಸ್ಥಾನವನ್ನು ತುಂಬಲಿದ್ದಾರೆ. ಶಶಿಕಾಂತ್ ತ್ರಿಪುರ ತಂಡದ ಕೋಚ್ ಆಗಿ ತೆರಳಿದ್ದಾರೆ.ಕರ್ನಾಟಕ ವನಿತಾ ತಂಡದ ಕೋಚ್ ಆಗಿ ಕರುಣಾ ಜೈನ್ ಅವರನ್ನು ನೇಮಿಸಲಾಗಿದೆ.
ಇದಕ್ಕೂ ಮುನ್ನ 2018ರಿಂದ 4 ವರ್ಷಗಳ ಕಾಲ ಯರೇಗೌಡ ರಾಜ್ಯ ಸೀನಿಯರ್ ತಂಡದ ಕೋಚ್ ಆಗಿದ್ದರು. ಕಳೆದ ಸಲ ಅವರು ಅಂಡರ್-23 ತಂಡದ ತರಬೇತುದಾರರಾಗಿದ್ದರು. ಸಿ.ಕೆ. ನಾಯ್ಡು ಟ್ರೋಫಿ ಚಾಂಪಿಯನ್ಶಿಪ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈಗ ಸೋಮಶೇಖರ್ ಎನ್. ಶಿರಗುಪ್ಪಿ ಅವರನ್ನು ಅಂಡರ್-23 ತಂಡದ ಕೋಚ್ ಆಗಿ ನೇಮಿಸಲಾಗಿದೆ.
ಯರೇಗೌಡ ಮೊದಲ ಅವಧಿಯಲ್ಲಿ ಕೋಚ್ ಆಗಿದ್ದಾಗ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್, ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ ಪ್ರವೇಶಿಸಿತ್ತು.
ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದ ಯರೇಗೌಡ, ಪ್ರಥಮ ದರ್ಜೆ ಕ್ರಿಕೆಟ್ನ 212 ಇನ್ನಿಂಗ್ಸ್ಗಳಲ್ಲಿ 7,650 ರನ್ ಗಳಿಸಿದ್ದಾರೆ.
ಕರ್ನಾಟಕ ತಂಡದ ಕೋಚಿಂಗ್ ಸಿಬಂದಿ·ಸೀನಿಯರ್ ತಂಡ: ಕೆ. ಯರೇಗೌಡ (ಪ್ರಧಾನ ಕೋಚ್), ಮನ್ಸೂರ್ ಅಲಿ ಖಾನ್ (ಬೌಲಿಂಗ್ ಕೋಚ್), ಶಬರೀಶ್ ಪಿ. ಮೋಹನ್ (ಫೀಲ್ಡಿಂಗ್ ಕೋಚ್).
·ಅಂಡರ್-23: ಸೋಮಶೇಖರ್ ಎನ್. ಶಿರಗುಪ್ಪಿ (ಪ್ರಧಾನ ಕೋಚ್), ರೋಹಿತ್ ಸಭರ್ವಾಲ್ (ಫೀಲ್ಡಿಂಗ್ ಕೋಚ್).
·ಅಂಡರ್-19: ಕೆ.ಬಿ. ಪವನ್ (ಪ್ರಧಾನ ಕೋಚ್), ಎಸ್.ಎಲ್. ಅಕ್ಷಯ್ (ಬೌಲಿಂಗ್ ಕೋಚ್).
·ಅಂಡರ್-16 ಮತ್ತು ಅಂಡರ್-14: ಕುಣಾಲ್ ಕಪೂರ್ (ಪ್ರಧಾನ ಕೋಚ್), ಆದಿತ್ಯ ಬಿ. ಸಾಗರ್ (ಸಹಾಯಕ ಕೋಚ್).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್
Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!
ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು
Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ
Bajpe ಬಸ್ ನಿಲ್ದಾಣ ಕಟ್ಟಡ ಪೂರ್ಣ; 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.