Vinesh Phogat: ಹೋರಾಟ ಮುಂದುವರಿಯುತ್ತದೆ..; ಕುತೂಹಲ ಮೂಡಿಸಿದ ಪೋಗಾಟ್ ಪತ್ರ
Team Udayavani, Aug 17, 2024, 10:30 AM IST
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿಯಲ್ಲಿ ಫೈನಲ್ ಗೇರಿದರೂ ತೂಕ ಹೆಚ್ಚಾದ ಕಾರಣ ಅನರ್ಹಗೊಂಡು ಐತಿಹಾಸಿಕ ಪದಕ ತಪ್ಪಿಸಿಕೊಂಡಿದ್ದ ವಿನೇಶ್ ಫೋಗಾಟ್ (Vinesh Phogat) ಭಾವುಕ ಪತ್ರವೊಂದನ್ನು ಬರೆದಿದ್ದಾರೆ. ಆ ಪತ್ರದ ಕೊನೆಯ ಸಾಲುಗಳು ಕುತೂಹಲ ಮೂಡಿಸಿವೆ.
ಆರಂಭದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಾದ ಡಾ.ದಿನ್ಶಾ ಪರ್ದೀವಾಲಾ, ಡಾ.ವೇಯ್ನ ಪ್ಯಾಟ್ರಿಕ್ ಲೊಂಬಾರ್ಡ್, ಕೋಚ್ ಅಕೋಸ್ರನ್ನು ಮನತುಂಬಿ ವಿನೇಶ್ ಹೊಗಳಿದ್ದಾರೆ. ಕೊನೆಯಲ್ಲಿ “ಬೇರೆ ಯಾವುದೇ ಸಂದರ್ಭದಲ್ಲಾದರೂ ನಾನು 2032ರವರೆಗೆ ಸ್ಪರ್ಧಿಸುತ್ತಲೇ ಇರುವ ಬಗ್ಗೆ ಯೋಚಿಸುತ್ತಿದ್ದೆ. ಭವಿಷ್ಯದಲ್ಲಿ ನನಗೇನು ಕಾದಿದೆಯೋ ಗೊತ್ತಿಲ್ಲ. ಆದರೆ ನನ್ನ ಹೋರಾಟ ಮಾತ್ರ ಮುಂದುವರಿಯುತ್ತದೆ’ ಎಂದು ಹೇಳಿದ್ದಾರೆ. ಈ ಸಾಲುಗಳು ಕುತೂಹಲ ಮೂಡಿಸಿವೆ.
ಪ್ಯಾರಿಸ್ ನಲ್ಲಿ ಪದಕ ತಪ್ಪಿಸಿಕೊಂಡ ಮೇಲೆ ಅವರು ಭಾವುಕರಾಗಿ ಕುಸ್ತಿಗೆ ವಿದಾಯ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
— Vinesh Phogat (@Phogat_Vinesh) August 16, 2024
ವಿನೇಶ್ ಸಾಯುವ ಭೀತಿ ಉಂಟಾಗಿತ್ತು: ಕೋಚ್
ಒಲಿಂಪಿಕ್ಸ್ ನಲ್ಲಿ ತೂಕ ಕಡಿಮೆಗೊಳಿಸುವ ಯತ್ನದ ವೇಳೆ ವಿನೇಶ್ ಸಾಯಬಹುದು ಎಂಬ ಭೀತಿ ಉಂಟಾಗಿತ್ತು ಎಂದು ಕೋಚ್ ವಾಲ್ಲರ್ ಅಕೋಸ್ ಹೇಳಿದ್ದಾರೆ. ಕುಸ್ತಿ ಫೈನಲ್ಗೂ ಮುನ್ನ ವಿನೇಶ್ ತೂಕ ಇಳಿಸಲು ಐದೂವರೆ ಗಂಟೆ ಕಾಲ ನಡೆದ ಪ್ರಯತ್ನದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.
ಸೆಮಿಫೈನಲ್ ಬಳಿಕ ವಿನೇಶ್ ತೂಕ 2.7 ಕೆಜಿ ಹೆಚ್ಚಾಗಿತ್ತು. ಆರಂಭದಲ್ಲಿ ಅವರಿಗೆ 1 ಗಂಟೆ 20 ನಿಮಿಷಗಳ ಕಾಲ ವ್ಯಾಯಾಮ ಮಾಡಿಸಿದೆವು. ಮಧ್ಯರಾತ್ರಿಯಿಂದ ಬೆಳಗ್ಗೆ 5.30 ರವರೆಗೆ ಆಗಾಗ 2-3 ನಿಮಿಷ ಮಾತ್ರ ವಿನೇಶ್ ವಿಶ್ರಾಂತಿ ಪಡೆದರು. ಒಂದು ಹಂತದಲ್ಲಿ ಅವರು ಕುಸಿದು ಬಿದ್ದಿದ್ದರು ಎಂದು ಕೋಚ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
Contractors Association ಅಧ್ಯಕ್ಷ ಕೆಂಪಣ್ಣ ವಿಧಿವಶ; ಗಣ್ಯರ ಸಂತಾಪ
Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Sep.20: ಮುನಿಯಾಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಕಾಲೇಜು ಘಟಿಕೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.