Tungabhadra Dam ನೀರು ತಡೆ ಸಾಹಸ ಯಶಸ್ವಿ: 26 ಟಿಎಂಸಿ ಉಳಿಕೆ!
Team Udayavani, Aug 18, 2024, 6:30 AM IST
ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದ ಸ್ಥಳದಲ್ಲಿ ಎಲ್ಲ ಐದು ಸ್ಟಾಪ್ ಲಾಗ್ ಗೇಟ್ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಆ ಮೂಲಕ 26 ಟಿಎಂಸಿಯಷ್ಟು ನೀರು ಪೋಲಾಗುವುದನ್ನು ತಡೆಯುವಲ್ಲಿ ಹಿರಿಯ ತಜ್ಞ ಕನ್ನಯ್ಯ ನಾಯ್ಡು ಅವರ ತಂಡ ಯಶಸ್ಸು ಕಂಡಿದೆ.
ತುಂಗಭದ್ರಾ ಜಲಾಶಯದಲ್ಲಿ ಶುಕ್ರವಾರ ರಾತ್ರಿ 9 ಗಂಟೆ ವೇಳೆಗೆ ಮೊದಲ ತಡೆಗೇಟನ್ನು ಅತ್ಯಂತ ಎಚ್ಚರಿಕೆಯಿಂದ ಇಳಿಸಿ ಯಶಸ್ಸು ಕಂಡಿದ್ದ ತಂಡವು ಶನಿವಾರ ಇಡೀ ದಿನ ಕಾರ್ಯನಿರ್ವಹಿಸಿ ಇನ್ನುಳಿದ ನಾಲ್ಕು ಗೇಟ್ಗಳನ್ನೂ ಅಳವಡಿಸಿದೆ.
ಅಣೆಕಟ್ಟು ತಜ್ಞ ಕನ್ನಯ್ಯ ನಾಯ್ಡು ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ಯಶಸ್ವಿಯಾಗುತ್ತಲೇ ಜಲಾಶಯ ತಜ್ಞರು-ಅಧಿ ಕಾರಿ ವಲಯದಲ್ಲಿ ಸಂಭ್ರಮ ಮನೆ ಮಾಡಿತು. ಸಿಎಂ, ಡಿಸಿಎಂ ಡಿಕೆಶಿ, ವಿವಿಧ ಸಚಿವರ ಸಹಿತ ಗಣ್ಯರು ಹಾಗೂ ಅನ್ನದಾತರ ವಲಯದಿಂದ ಶ್ರಮಿಸಿದ ತಜ್ಞರು ಹಾಗೂ ಕಾರ್ಮಿಕರಿಗೆ ಅಭಿನಂದನೆ ವ್ಯಕ್ತವಾಯಿತು.
ಈ ಐದು ಸ್ಟಾಪ್ ಲಾಗ್ ಅಳವಡಿಕೆ ಹಿನ್ನೆಲೆಯಲ್ಲಿ ಜಲಾಶಯದ ಎಲ್ಲ ಗೇಟ್ಗಳನ್ನು ಬಂದ್ ಮಾಡಲಾಗಿದೆ. ಆ ಮೂಲಕ ಜಲಾಶಯದ ಭದ್ರತೆಯ ದೃಷ್ಟಿಯಿಂದ ನದಿಪಾತ್ರಕ್ಕೆ ಹರಿಬಿಡಲಾಗಿದ್ದ ನೀರನ್ನು ಸ್ಥಗಿತಗೊಳಿಸಲಾಯಿತು. ಕಳೆದ ಆರು ದಿನಗಳಲ್ಲಿ ನದಿ ಪಾತ್ರಕ್ಕೆ 35 ಟಿಎಂಸಿ ಹಾಗೂ ಕಾಲುವೆಗಳಿಗೆ ಎಂಟು ಟಿಎಂಸಿ ನೀರನ್ನು ಹರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಜಿಂದಾಲ್ ಕ್ರೇನ್ಗಳ ಸಹಾಯ
ಜಲಾಶಯದಲ್ಲಿ ಸ್ಟಾಪ್ ಲಾಗ್ ಗೇಟ್ ಅಳವಡಿಕೆಗೆ ಬೃಹತ್ ಕ್ರೇನ್ಗಳ ಆವಶ್ಯಕತೆ ಇತ್ತು. ಆದರೆ ಸ್ಥಳೀಯ ಕೈಗಾರಿಕೆಗಳಲ್ಲಿ ಅಂತಹ ಕ್ರೇನ್ಗಳು ಇರಲಿಲ್ಲ. ಜಿಂದಾಲ್ ಕಂಪೆನಿ ಸಹಕಾರ ನೀಡಿದ್ದರಿಂದ ಆ ಕಂಪೆನಿಯ ಎರಡು ಕ್ರೇನ್ಗಳನ್ನು ಬಳಸಿ ಕಾರ್ಯಾಚರಣೆ ನಡೆಸಿ ಎಲ್ಲ ಸ್ಟಾಪ್ ಲಾಗ್ಗಳನ್ನು ಅಳವಡಿಸಲಾಯಿತು.
ನದಿಯಲ್ಲಿ ಮುರಿದ ಗೇಟ್ !
ಶನಿವಾರ ನದಿ ಪಾತ್ರಕ್ಕೆ ಹರಿಯುವ ನೀರು ಹೆಚ್ಚುಕಡಿಮೆ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ಮುರಿದ ಹೋಗಿದ್ದ 19ನೇ ಕ್ರೆಸ್ಟ್ ಗೇಟ್ ಗೋಚರಿಸಿತು
ಸ್ಟಾಪ್ ಲಾಗ್ನಲ್ಲಿ ಸಣ್ಣ ಸೋರಿಕೆ!
ಜಲಾಶಯದ 19ನೇ ಕ್ರೆಸ್ಟ್ ಗೇಟ್ನಲ್ಲಿ ಐದು ತಡೆಗೇಟು ಅಳವಡಿಕೆ ಮಾಡಿದ್ದರೂ ಸಣ್ಣ ಪ್ರಮಾಣದ ನೀರು ಸೋರಿಕೆ ಇದೆ. ಇದನ್ನು ಪೂರ್ಣವಾಗಿ ತಡೆಯಲು ಅಸಾಧ್ಯ. ಇನ್ನು ಮುಂದೆ ಜಲಾಶಯದಲ್ಲಿ 100 ಟಿಎಂಸಿ ನೀರು ಸಂಗ್ರಹವಾದರೂ ತಡೆಯಬಲ್ಲ ಸಾಮರ್ಥ್ಯವನ್ನು ಈ ಸ್ಟಾಪ್ ಲಾಗ್ಗಳು ಹೊಂದಿವೆ. ಆದರೂ ಮುಂದಿನ ಮುಂಗಾರು ವೇಳೆಗೆ ಹೊಸ ಕ್ರೆಸ್ಟ್ ಗೇಟ್ ಅಳವಡಿಕೆ ಮಾಡುವುದು ಅನಿವಾರ್ಯ ಎಂದು ತಜ್ಞ ಕನ್ನಯ್ಯ ನಾಯ್ಡು ಹೇಳಿದ್ದಾರೆ.
ಈ ಜಲಾಶಯಕ್ಕೆ 70 ವರ್ಷ ಆಗಿದೆ. ಪ್ರತೀ 45 ವರ್ಷಗಳಿಗೆ ಒಮ್ಮೆ ಕ್ರಸ್ಟ್ ಗೇಟ್ ಬದಲಿಸಬೇಕು. ಆದರೆ ಇಲ್ಲಿ ಬದಲಿಸಿಲ್ಲ. ಮುಂದೆ ಎಲ್ಲ ಗೇಟ್ಗಳನ್ನು ಬದಲಿಸುವಂತೆ ಸರಕಾರಕ್ಕೆ ಸಲಹೆ ನೀಡಲಾಗುವುದು.
– ಕನ್ನಯ್ಯ ನಾಯ್ಡು , ಅಣೆಕಟ್ಟು ತಜ್ಞ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತಾಯಿ, ಅಕ್ಕ
Dandeli: ನಗರದಲ್ಲಿ ಸರಣಿ ಕಳ್ಳತನ… ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು, ಪೊಲೀಸರ ಭೇಟಿ
Munirathna: ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ ಮಾಡಿದ ಮಹಿಳೆ; ಎಫ್ಐಆರ್
Traffic: ಆಗುಂಬೆ ಘಾಟಿಯಲ್ಲಿ ವಾಹನ ಬ್ರೇಕ್ ಫೇಲ್, ಟ್ರಾಫಿಕ್ ನಲ್ಲಿ ಸಿಲುಕಿದ ಆಂಬ್ಯುಲೆನ್ಸ್
Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Udupi: ಯುಜಿಡಿ ಚೇಂಬರ್ ಅವ್ಯವಸ್ಥೆಗಿಲ್ಲ ಪರಿಹಾರ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
Channapatnam by-election: ಡಿಕೆಸು ಕೈ ಅಭ್ಯರ್ಥಿ ಮಾಡಲು ಕಾರ್ಯಕರ್ತರ ಒತ್ತಡ
Thekkatte: ಶಾಲಾ ವಾಹನ ಹೈಮಾಸ್ಟ್ ಕಂಬಕ್ಕೆ ಢಿಕ್ಕಿ; ಚಾಲಕನಿಗೆ ಗಂಭೀರ ಗಾಯ
Chamarajanagara: ಲಂಚ ಪಡೆಯುತ್ತಿದ್ದ ಡಿಆರ್ಎಫ್ಒ ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.