Railway: ಮತ್ಸ್ಯ ಗಂಧ ಎಕ್ಸ್ಪ್ರೆಸ್ ರೈಲು ಛಾವಣಿ ಕುಸಿತ
Team Udayavani, Aug 18, 2024, 1:40 AM IST
ಉಡುಪಿ: ಮಂಗಳೂರು-ಮುಂಬಯಿ ಮತ್ಸ್ಯ ಗಂಧ ರೈಲಿಗೆ ಹಳೆಯ ಕೋಚ್ ಬದಲು ಹೊಸ ಎಲ್ಎಚ್ಬಿ ಕೋಚ್ ಹಾಕಲು ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರು ಕೇಂದ್ರ ರೈಲ್ವೇ ಸಚಿವರಿಗೆ ಪತ್ರ ನೀಡಿ ಒಂದೇ ವಾರದಲ್ಲಿ ಮತ್ಸéಗಂಧ ರೈಲಿನ ಎಸಿ ಕೋಚಿನ ತಗಡಿನ ಛಾವಣಿಯ ಶೀಟ್ ಕಳಚಿ ಬಿದ್ದಿರುವುದು ಬೆಳಕಿಗೆ ಬಂದಿದೆ.
ಈ ಘಟನೆಯ ಅನಂತರ ಸಂಸದರ ಬೇಡಿಕೆಯಂತೆ ಹಳೆಯ ಕೋಚ್ ಬದಲು ಎಲ್ಎಚ್ಬಿ ಕೋಚ್ ಬದಲಾವಣೆಯ ಬೇಡಿಕೆ ಈಡೇರಿಸುವ ಒತ್ತಾಯ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ಕರಾವಳಿಯ ಪ್ರಯಾಣಿಕರಿಂದಲೂ ಆಗ್ರಹ ಕೇಳಿ ಬಂದಿದೆ.
ರೈಲು ಸೇವೆ ಆರಂಭವಾಗಿ 26 ವರ್ಷ ಉರುಳಿದರೂ ಹಳೆಯ ಐಸಿಎಫ್ ಕೋಚ್ಗಳಲ್ಲೇ ದಕ್ಷಿಣ ರೈಲ್ವೇ ವಿಭಾಗದಿಂದ ಮತ್ಸ್ಯಗಂಧ ರೈಲನ್ನು ಓಡಿಸುತ್ತಿದ್ದು, ಆಧುನಿಕ ಸುರಕ್ಷಿತ ಎಲ್ಎಚ್ಬಿ ಕೋಚ್ ಬೇಕು ಎಂಬ ಪ್ರಯಾಣಿಕರ ಬೇಡಿಕೆ ಇದುವರೆಗೂ ಈಡೇರಿಲ್ಲ.
ಘಟನೆ ಬಗ್ಗೆ ಮಾಹಿತಿ ಪಡೆದ ಕೋಟ ಶ್ರೀನಿವಾಸ್ ಪೂಜಾರಿ ಅವರು ತತ್ಕ್ಷಣವೇ ದಕ್ಷಿಣ ರೈಲ್ವೇ ಹಾಗೂ ರೈಲ್ವೇ ಸಚಿವರಿಗೆ ವಿಷಯ ತಲುಪಿಸುವುದಾಗಿ ತಿಳಿಸಿದ್ದು, ಅತ್ಯಂತ ಕ್ಷಿಪ್ರವಾಗಿ ಮತ್ಸ್ಯ ಗಂಧ ರೈಲಿನ ಕೋಚ್ ಎಲ್ಎಚ್ಬಿ ಮಾಡಲು ಸೂಚನೆ ನೀಡುವುದಾಗಿ ತಿಳಿಸಿದ್ದಾರೆ.
ಜು.23ರಂದು ಸಂಸದರು ಎಲ್ಎಚ್ಬಿ ಕೋಚ್ಗಾಗಿ ನೀಡಿದ ಪತ್ರ ಹಾಗೂ ಅಗಸ್ಟ್ ಮೊದಲ ವಾರದಲ್ಲಿ ಕೋಚ್ನ ಛಾವಣಿ ಕಳಚಿ ಬಿದ್ದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೊಂಕಣ ತೀರದ ಉಳಿದ ಸಂಸದರೂ ಈ ಬೇಡಿಕೆಗೆ ಜತೆಯಾಗಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.