D.K.Shivakumar ಶಿಫಾರಸಿನಂತೆ ಮಾಡಿದ್ದ ಪಿಡಿಒಗಳ ವರ್ಗಾವಣೆಗೆ ತಡೆ
Team Udayavani, Aug 18, 2024, 1:44 AM IST
ರಾಮನಗರ: ಜಿಲ್ಲೆಯ 20 ಮಂದಿ ಪಿಡಿಒಗಳನ್ನು ವರ್ಗಾವಣೆ ಮಾಡಿ ಬೇರೆ ಪಂಚಾಯತ್ಗಳಿಗೆ ನಿಯೋಜನೆ ಮಾಡುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಿಫಾರಸಿನ ಮೇರೆಗೆ ಜಿ.ಪಂ. ಸಿಇಒ ಹೊರಡಿಸಿದ್ದ ಆದೇಶಕ್ಕೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ತಡೆ ನೀಡಿದೆ.
ಆ. 14ರಂದು ಆದೇಶ ಹೊರಡಿಸಿದ್ದ ಜಿ.ಪಂ. ಸಿಇಒ ದಿಗ್ವಿಜಯ್ ಬೋಡ್ಕೆ ಅವರು 13 ಮಂದಿ ಪಿಡಿಒಗಳ ವರ್ಗಾವಣೆ, 7 ಮಂದಿ ಗ್ರೇಡ್-1 ಕಾರ್ಯದರ್ಶಿ ಗಳನ್ನು ಪ್ರಭಾರ ಪಿಡಿಒಗಳಾಗಿ ನಿಯೋಜನೆ ಮಾಡಿದ್ದರು. ಪಿಡಿಒಗಳ ನೇಮಕ ಮತ್ತು ಶಿಸ್ತು ಪ್ರಾಧಿಕಾರದ ಮುಖ್ಯಸ್ಥರು ಪಂಚಾಯತ್ರಾಜ್ ಇಲಾಖೆ ಆಯುಕ್ತ ರಾಗಿದ್ದು, ಪಿಡಿಒಗಳ ವರ್ಗಾವಣೆಗೆ ಇವರ ಅನುಮತಿ ಕಡ್ಡಾಯ. ಈ ನಿಯಮ ಪಾಲನೆ ಮಾಡದೆ ಏಕಾಏಕಿ ವರ್ಗಾವಣೆ ಮಾಡಿರುವ ಕ್ರಮ ಸರಿಯಲ್ಲ ಎಂದು ಇಲಾಖೆಯ ಆಯುಕ್ತರು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.