Siddaramaiah ವಿರುದ್ಧ ಹೆಜ್ಜೆ ಹೆಜ್ಜೆಗೂ ಸಾಕ್ಷ್ಯಗಳಿವೆ: ರವಿಕುಮಾರ್
Team Udayavani, Aug 19, 2024, 1:01 AM IST
ಬೆಂಗಳೂರು: ಮುಡಾ ಹಗರಣದಲ್ಲಿ ಹೆಜ್ಜೆ ಹಜ್ಜೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಕ್ಷ್ಯಗಳಿವೆ. 2013ರ ಚುನಾವಣ ಪ್ರಮಾಣಪತ್ರದಲ್ಲಿ ಈ ವಿಚಾರ ಮುಚ್ಚಿಟ್ಟಿದ್ದ ಅವರು, 2018ರ ಪ್ರಮಾಣಪತ್ರದಲ್ಲಿ ಅದರ ಬೆಲೆ 25 ಲಕ್ಷ ರೂ. ಎಂದು ಉಲ್ಲೇಖೀಸಿದ್ದರು. 2023 ರ ಚುನಾವಣ ಪ್ರಮಾಣಪತ್ರದಲ್ಲಿ 8 ಕೋಟಿ ರೂ. ಎಂದು ನಮೂದಿಸಿದ್ದಾರೆ. ಈಗ ಜಾಗ ಬಿಟ್ಟುಕೊಡುತ್ತೇನೆ 62 ಕೋಟಿ ರೂ. ಕೊಡಿ ಎನ್ನುತ್ತಾರೆ. ಅಲ್ಲಿಗೆ ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡಂತಾಗಿದ್ದು, ದುಪ್ಪಟ್ಟು ಬೆಲೆ ಕೇಳುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಕಿಡಿಕಾರಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಈ ಕಾರಣಕ್ಕಾಗಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ನಿಷ್ಪಕ್ಷಪಾತ ತನಿಖೆಗೆ ಸಹಕರಿಸಬೇಕು. 1997ರಲ್ಲಿ ಬಡಾವಣೆ ನಿರ್ಮಾಣಕ್ಕಾಗಿ 3.25 ಲಕ್ಷ ರೂ. ಪರಿಹಾರ ಕೊಟ್ಟು 3.16 ಎಕರೆಯನ್ನು ಮುಡಾ ಸ್ವಾಧೀನ ಪಡಿಸಿಕೊಂಡಿತ್ತು. ಅದೇ ಜಮೀನನ್ನು ಅಂದು ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಅವರು 1998ರಲ್ಲಿ ಪ್ರಭಾವ ಬೀರಿ ಡಿನೋಟಿಫೀಕೇಶನ್ ಮಾಡಿಸಿದ್ದರು. ಅದೇ ಜಮೀನನ್ನು 3.75 ಲಕ್ಷ ರೂ. ಕೊಟ್ಟು ಸಿದ್ದರಾಮಯ್ಯರ ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಅವರು 2004ರಲ್ಲಿ ಖರೀದಿಸಿ, ಪಾರ್ವತಿ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದರು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.