![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Aug 19, 2024, 9:30 AM IST
ಬೆಂಗಳೂರು: ವಿನಯ್ ರಾಜ್ ಕುಮಾರ್ (Vinay Rajkumar) ರಾ & ರಗಡ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ ʼಪೆಪೆʼ(Pepe Movie) ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.
ಕಿಚ್ಚ ಸುದೀಪ್ (Kiccha Sudeep) ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಟ್ರೇಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, 6 ಲಕ್ಷಕ್ಕೂ ಹೆಚ್ಚಿನ ಮಂದಿ ನೋಡಿ ವಿಜಯ್ ರಾಜ್ಕುಮಾರ್ ಹೊಸ ಅವತಾರಕ್ಕೆ ಭೇಷ್ ಎಂದಿದ್ದಾರೆ.
ಒಂದು ಊರು, ಆ ಊರಿನಲ್ಲಿ ಪ್ರಾಬಲ್ಯರ ನಡುವಿನ ಕಿತ್ತಾಟ. ಹೋರಾಟ, ಹೊಡೆದಾಟ, ಕೊಲೆ -ಕಗ್ಗೊಲೆ, ಮೋಹ – ದ್ರೋಹ.. ಹೀಗೆ ಎಲ್ಲಾ ಅಂಶಗಳನ್ನು ʼಪೆಪೆʼ ಒಳಗೊಂಡಿದೆ ಎನ್ನುವುದನ್ನು ಟ್ರೇಲರ್ ಝಲಕ್ನಲ್ಲೇ ಕಾಣಬಹುದು.
ಇದೊಂದು ಪಕ್ಕಾ ಹಳ್ಳಿಗಾಡಿನ ಗ್ಯಾಂಗ್ ಸ್ಟರ್ ಕಥೆವುಳ್ಳ ಸಿನಿಮಾ. ರಾಯಪ್ಪ, ಧರ್ಮ, ಗುಣ ಎನ್ನುವ ಪ್ರಾಬಲ್ಯ ವ್ಯಕ್ತಿಗಳ ಬಳಿಕ ಬರುವ ʼಪೆಪೆʼ (ವಿನಯ್ ರಾಜ್ ಕುಮಾರ್) ಇಲ್ಲಿ ತನ್ನವರಿಗಾದ ಅನ್ಯಾಯದ ವಿರುದ್ಧ ಹೋರಾಟ ನಡೆಸುವ ಹಾಗೂ ಅದನ್ನು ಸರಿ ಮಾಡಲು ಬಡಿದಾಟ ನಡೆಸುವ ದೃಶ್ಯವನ್ನು ತೋರಿಸಲಾಗಿದೆ.
ವಿನಯ್ ರಾಜ್ ಕುಮಾರ್ ಇಲ್ಲಿ ಪಕ್ಕಾ ಮಾಸ್ ಲುಕ್ನಲ್ಲೇ ಕಾಣಿಸಿಕೊಂಡಿದ್ದಾರೆ. ಒಂದೊಂದು ಆ್ಯಕ್ಷನ್ ಸೀನ್ಗಳು ಸಖತ್ ಆಗಿ ಮೂಡಿಬಂದಿದೆ. ಇಡೀ ಟ್ರೇಲರ್ನಲ್ಲಿ ವಿನಯ್ ರಾಜ್ ಕುಮಾರ್ ಅವರ ಪಾತ್ರ ಹೆಚ್ಚು ಗಮನ ಸೆಳೆಯುತ್ತದೆ.
ವಿನಯ್ ರಾಜ್ ಕುಮಾರ್ ಅವರ ಪಾತ್ರದ ಜೊತೆಗೆ ಅವರ ಡೈಲಾಗ್ಸ್ ಕೂಡ ಸಿನಿಮಾಕ್ಕೆ ಪ್ಲಸ್ ಆಗುವ ಸಾಧ್ಯತೆಯಿದೆ. ಮಯೂರ್ ಪಟೇಲ್ ನೆಗೆಟಿವ್ ಶೇಡ್ ಟ್ರೇಲರ್ ನಲ್ಲಿ ಗಮನ ಸೆಳೆಯುತ್ತದೆ. ನವೀನ್ ಡಿ ಪಡೀಲ್, ಯಶ್ ಶೆಟ್ಟಿ, ಕಾಜಲ್ ಕುಂದರ್ ಅವರ ಪಾತ್ರವೂ ಟ್ರೇಲರ್ನಲ್ಲಿ ಬಂದು ಹೋಗುತ್ತದೆ.
ಶ್ರೀಲೇಶ್ ನಾಯರ್ ನಿರ್ದೇಶನದ ‘ಪೆಪೆʼ ರಾಜಕೀಯ, ಜಾತಿ, ದ್ವೇಷದ ಸುತ್ತ ಸಾಗುವ ರಕ್ತಸಿಕ್ತ ಅಧ್ಯಾಯ ಕಥೆಯನ್ನು ಒಳಗೊಂಡಿದೆ. ಇದೇ ಆಗಸ್ಟ್ 30 ರಂದು ರಿಲೀಸ್ ಆಗಲಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.