Kollywood: ರಜಿನಿಕಾಂತ್ ʼವೆಟ್ಟೈಯನ್ʼ ರಿಲೀಸ್ ಡೇಟ್ ಔಟ್; ʼಕಂಗುವʼ ಜತೆ ಕ್ಲ್ಯಾಶ್
Team Udayavani, Aug 19, 2024, 11:16 AM IST
ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಅವರ ಮುಂದಿನ ಸಿನಿಮಾ ʼವೆಟ್ಟೈಯನ್ʼ (Vettaiyan) ರಿಲೀಸ್ಗೆ ಡೇಟ್ ಫಿಕ್ಸ್ ಆಗಿದೆ.
ವೆಟ್ಟೈಯನ್ʼ ರಿಲೀಸ್ ದಿನವೇ ಕಾಲಿವುಡ್ ನಲ್ಲಿ ಮತ್ತೊಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಲಿದ್ದು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಪೈಪೋಟಿ ಆಗುವ ಸಾಧ್ಯತೆಯಿದೆ.
ರಜಿನಿಕಾಂತ್ ʼಜೈಲರ್ʼ ಬಳಿಕ ಮತ್ತೆ ಖಾಕಿ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಟಿ.ಜೆ. ಜ್ಞಾನವೇಲ್ ನಿರ್ದೇಶನದ ʼವೆಟ್ಟೈಯನ್ʼ ಈಗಾಗಲೇ ಟೀಸರ್ನಿಂದ ಗಮನ ಸೆಳೆದಿದ್ದು ನಿರೀಕ್ಷೆ ಹೆಚ್ಚಾಗಿಸಿದೆ.
ಇದನ್ನೂ ಓದಿ:Bollywood: ಲೋಕೇಶ್ ಕನಕರಾಜ್ ಜತೆ ಆಮೀರ್ ಸಿನಿಮಾ?; ಕಂಬ್ಯಾಕ್ ಮಾಡ್ತಾರಾ ಖಾನ್?
ಸೋಮವಾರ(ಆ.19ರಂದು) ಸಿನಿಮಾ ತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಅಕ್ಟೋಬರ್ 10ರಂದು ʼವೆಟ್ಟೈಯನ್ʼ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡಿದೆ.
ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಸೂರ್ಯ ʼಕಂಗುವʼ ಜತೆ ʼವೆಟ್ಟೈಯನ್ʼ ರಿಲೀಸ್..: ರಜಿನಿಕಾಂತ್ ಅವರ ʼವೆಟ್ಟೈಯನ್ʼ ರಿಲೀಸ್ ಡೇಟ್ ಬೆನ್ನಲ್ಲೇ ಕಾಲಿವುಡ್ ನಲ್ಲಿ ಬಾಕ್ಸ್ ಆಫೀಸ್ ಪೈಪೋಟಿಯ ಮಾತುಗಳು ಕೇಳಿ ಬರುತ್ತಿದೆ.
ಈಗಾಗಲೇ ಟ್ರೇಲರ್ ಹಾಗೂ ಟೀಸರ್, ಪೋಸ್ಟರ್ ಗಳಿಂದ ಭಾರೀ ಹೈಪ್ ಹೆಚ್ಚಿಸಿರುವ ಶಿವ (Director Shiva) ನಿರ್ದೇಶನದ, ಸೂರ್ಯ(Suriya) ಅಭಿನಯದ ʼಕಂಗುವʼ(Kanguva) ಅಕ್ಟೋಬರ್ 10ರಂದು ರಿಲೀಸ್ ಆಗಲಿದೆ ಎಂದು ಈ ಹಿಂದೆಯೇ ಅನೌನ್ಸ್ ಆಗಿದೆ.
ಬುಡಕಟ್ಟು ಸಮುದಾಯದ ನಡುವಿನ ಅಳಿವು – ಉಳಿವಿನ ಹೋರಾಟದ ಕಥೆಯನ್ನು ʼಕಂಗುವʼ ಒಳಗೊಂಡಿದೆ. ಸೂರ್ಯ, ಬಾಬಿ ಡಿಯೋಲ್ ಪ್ರಧಾನ ಪಾತ್ರದಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ಯಾನ್ ಇಂಡಿಯಾದಲ್ಲಿ ʼವೆಟ್ಟೈಯನ್ʼ ಹಾಗೂ ʼಕಂಗುವʼ ಎರಡೂ ಸಿನಿಮಾಗಳ ಬಗ್ಗೆ ದೊಡ್ಡ ನಿರೀಕ್ಷೆಯಿದ್ದು ಒಂದೇ ದಿನ ಎರಡೂ ಸಿನಿಮಾ ರಿಲೀಸ್ ಆಗಲಿದ್ದು ಬಾಕ್ಸ್ ಆಫೀಸ್ನಲ್ಲಿ ಹೇಗೆ ಆರಂಭವನ್ನು ಪಡೆದುಕೊಳ್ಳುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raghu Thatha: ಓಟಿಟಿಯಲ್ಲಿ ರಿಲೀಸ್ ಆದ 24 ಗಂಟೆಯಲ್ಲೇ ಹೊಸ ದಾಖಲೆ ಬರೆದ ʼರಘು ತಾತʼ
Dhoom 4: ಬಾಲಿವುಡ್ ʼಧೂಮ್-4ʼ ನಲ್ಲಿ ಸೌತ್ ಸ್ಟಾರ್ ಸೂರ್ಯ ವಿಲನ್?
Tollywood: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್- ಅದಿತಿ ರಾವ್; ಇಲ್ಲಿದೆ ಫೋಟೋಸ್
Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ವಿರುದ್ಧ FIR
Kadambari Jethwani: ನಟಿಯನ್ನು ಅಕ್ರಮವಾಗಿ ಬಂಧಿಸಿದ ಆರೋಪ; 3 ಐಪಿಎಸ್ ಅಧಿಕಾರಿಗಳು ಅಮಾನತು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.