Karkala: ತಾಲೂಕು ಕೇಂದ್ರವಾದರೂ ಹೆಬ್ರಿಗಿಲ್ಲ ರೈತ ಸಂಪರ್ಕ ಕೇಂದ್ರ

ಬಹುತೇಕ ಗ್ರಾಮಗಳಿಗೆ ಆ ಕಡೆ ಅಜೆಕಾರು ಕೇಂದ್ರವೂ ದೂರ; ಈ ಕಡೆ ಕುಂದಾಪುರವೂ ದೂರ!

Team Udayavani, Aug 19, 2024, 4:23 PM IST

Karkala: ತಾ| ಕೇಂದ್ರವಾದರೂ ಹೆಬ್ರಿಗಿಲ್ಲ ರೈತ ಸಂಪರ್ಕ ಕೇಂದ್ರ

ಕಾರ್ಕಳ: ಹೆಬ್ರಿಯನ್ನು ತಾಲೂಕು ಕೇಂದ್ರವಾಗಿ ಘೋಷಿಸಿದ್ದರೂ ಇಲಾಖೆಗಳಲ್ಲಿನ ಸವಲತ್ತುಗಳನ್ನು ಇನ್ನೂ ಒದಗಿಸಿಲ್ಲ. ಅದರಲ್ಲಿ ರೈತರಿಗೆ ಅತೀ ಮುಖ್ಯವಾದ ರೈತ ಸಂಪರ್ಕ ಕೇಂದ್ರವೇ ಹೆಬ್ರಿಗೆ ಸಿಕ್ಕಿಲ್ಲ.  ಇಲ್ಲಿನ ರೈತರು ಒಂದೋ ಕಾರ್ಕಳ ತಾಲೂಕಿನ ವ್ಯಾಪ್ತಿಗೆ ಬರುವ  ಅಜೆಕಾರು, ಇಲ್ಲವೇ ಕುಂದಾಪುರದ ರೈತ ಸಂಪರ್ಕ ಕೇಂದ್ರವನ್ನೇ ಅವಲಂಬಿಸಬೇಕಾಗಿದೆ.

ಕಾರ್ಕಳ ತಾಲೂಕಿನಲ್ಲಿ  ಕಾರ್ಕಳ ಹಾಗೂ  ಅಜೆಕಾರಿನ ಹೋಬಳಿ ಕೇಂದ್ರದಲ್ಲಿ ರೈತ ಸಂಪರ್ಕ ಕೇಂದ್ರಗಳಿವೆ. ಹೆಬ್ರಿ ತಾಲೂಕು ಹೊಸದಾಗಿ ರಚನೆಯಾಗಿದ್ದು ಹೋಬಳಿಗಳ ನಿರ್ಮಾಣವಾಗಲೀ, ರೈತ ಸಂಪರ್ಕ ಕೇಂದ್ರವಾಗಲೀ ಆಗಿಲ್ಲ. ಹೀಗಾಗಿ ಹೆಬ್ರಿ ತಾಲೂಕಿನ ಗ್ರಾಮಗಳು ಅಜೆಕಾರು ಮತ್ತು ಕುಂದಾಪುರ ಹೋಬಳಿಗಳಲ್ಲಿ ಹಂಚಿ ಹೋಗಿವೆ.

ಕಾರ್ಕಳ ತಾಲೂಕಿನ 7 ಹಾಗೂ ಹೆಬ್ರಿ ತಾಲೂಕಿನ 6 ಸೇರಿ ಒಟ್ಟು 13 ಗ್ರಾಮಗಳು  ಅಜೆಕಾರು ರೈತ ಸಂಪರ್ಕ ಕೇಂದ್ರದ  ವ್ಯಾಪ್ತಿ ಬರುತ್ತವೆ.  ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ, ಶಿರ್ಲಾಲು, ಮಾಳ, ಹಿರ್ಗಾನ, ಯರ್ಲಪಾಡಿ, ಕಡ್ತಲ, ಹೆಬ್ರಿ ತಾಲೂಕಿನ ಹೆಬ್ರಿ,

ವರಂಗ, ನಾಡ್ಪಾಲು, ಬೆಳಂಜೆ, ಚಾರ, ಶಿವಪುರ ಗ್ರಾಮಗಳು  ಅಜೆಕಾರು ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ಬರುತ್ತವೆ. ಹೆಬ್ರಿ ತಾಲೂಕಿನ ಗ್ರಾಮಗಳಾದ ಬೆಳ್ವೆ ಅಲ್ಬಾಡಿ, ಮಡಾಮಕ್ಕಿ, ಶೇಡಿಮನೆ, ಗ್ರಾಮಗಳು ಕುಂದಾಪುರ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಆಶ್ರಯಿಸಿವೆ.

ಹೆಬ್ರಿಯಲ್ಲೇ ಇದ್ದರೆ ಏನೇನು ಲಾಭ?

ಹೆಬ್ರಿಯಲ್ಲೇ  ರೈತ ಸಂಪರ್ಕ ಕೇಂದ್ರ ಸ್ಥಾಪನೆಯಾದರೆ ಸರಕಾರ ನೀಡುವ ಬಿತ್ತನೆ ಬೀಜಗಳು, ಗೊಬ್ಬರಗಳು, ಕೃಷಿ ಪರಿಕರಗಳು  ಸೇರಿದಂತೆ  ಅನೇಕ ಸೇವೆಗಳು ಸ್ಥಳೀಯ ಮಟ್ಟದಲ್ಲೇ ಅಂದರೆ 15 ಕಿ.ಮೀ. ಅಂತರದಲ್ಲಿ ದೊರಕಲಿವೆ.

ಜನಸಂಪರ್ಕ ಸಭೆಯಲ್ಲೂ ಪ್ರಸ್ತಾಪ

ಹೆಬ್ರಿ ತಾಲೂಕಿನಲ್ಲಿ ರೈತ ಸಂಪರ್ಕ ಕೇಂದ್ರ  ಇಲ್ಲದೆ ಇರುವುದರಿಂದ ರೈತರಿಗೆ ಆಗುವ ತೊಂದರೆಗಳ ಕುರಿತು  ಹಲವು ಬಾರಿ ಸರಕಾರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಜನಸಂಪರ್ಕ ಸಭೆಯಲ್ಲೂ  ಒತ್ತಾಯ ಕೇಳಿಬಂದಿತ್ತು.

ಸರಕಾರದಿಂದ ಅನುಮೋದನೆ ಅಗತ್ಯ

ತಾಲೂಕು ಹಾಗೂ ಹೋಬಳಿ ಕೇಂದ್ರವಾಗಿರುವ ಹೆಬ್ರಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ, ಕೇಂದ್ರಕ್ಕೆ ಅವಶ್ಯವಿರುವ ಹುದ್ದೆಗಳ ಸೃಜನೆಗೆ ಸರಕಾರದಿಂದ  ಅನುಮೋದನೆ ದೊರೆಯಬೇಕಾಗಿದೆ.

ಅನುಮೋದನೆ ಸಿಗಬೇಕಿದೆ

ಹೆಬ್ರಿ ಹೋಬಳಿಯಲ್ಲಿ ರೈತ ಸಂಪರ್ಕ ಕೇಂದ್ರವಾದಲ್ಲಿ ರೈತರಿಗೆ ತುಂಬಾ ಅನುಕೂಲ. ರೈತರಿಗೆ ಇದರಿಂದ ಹೆಚ್ಚಿನ ಪ್ರಯೋಜನ  ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ರೈತರು ಬೇಡಿಕೆ ಸಂಬಂಧ ಮನವಿ ಮಾಡಿದ್ದು ಸರಕಾರದಿಂದ ಅನುಮೋದನೆಗೊಂಡಲ್ಲಿ ಈಡೇರಲಿದೆ. -ಸಿದ್ಧಪ್ಪ , ಕೃಷಿ ಅಧಿಕಾರಿ, ಕೃಷಿ ಇಲಾಖೆ ಕಾರ್ಕಳ

ರೈತರಿಗೆ ಸಂಪರ್ಕವೇ ಸಿಗುತ್ತಿಲ್ಲ!

ಹೆಬ್ರಿ ತಾಲೂಕಿನ ಹೆಬ್ರಿ, ವರಂಗ, ನಾಡ್ಪಾಲು, ಬೆಳಂಜೆ, ಚಾರ, ಶಿವಪುರ ಗ್ರಾಮಗಳು ಅಜೆಕಾರು ರೈತ ಸಂಪರ್ಕ ಕೇಂದ್ರಕ್ಕೆ, ಕುಂದಾಪುರದ ತಾಲೂಕಿನ ಬೆಳ್ವೆ ಅಲ್ಬಾಡಿ, ಮಡಾಮಕ್ಕಿ, ಶೇಡಿ ಮನೆಗಳು ಕುಂದಾಪುರ ಕೇಂದ್ರಕ್ಕೆ ಸಂಪರ್ಕ ಹೊಂದಿವೆ.  ಹೆಬ್ರಿ, ನಾಡ್ಪಾಲು, ಬೆಳಂಜೆ, ಚಾರ ಶಿವಪುರ ಗ್ರಾಮಗಳು  ಅಜೆಕಾರು ರೈತ ಸಂಪರ್ಕ ಕೇಂದ್ರದಿಂದ ಸುಮಾರು 20-27 ಕಿಮೀ ದೂರದಲ್ಲಿವೆ. ಅದೇ  ಬೆಳ್ವೆ ಅಲ್ಬಾಡಿ, ಮಡಾಮಕ್ಕಿ, ಶೇಡಿಮನೆ ಗ್ರಾಮಗಳು ಕುಂದಾಪುರದಿಂದ 35 ಕಿ.ಮೀ. ದೂರದಲ್ಲಿದೆ. ಇದರಿಂದ ಹೆಬ್ರಿಯ ಕೃಷಿಕರಿಗೆ ರೈತ ಸಂಪರ್ಕ ಕೇಂದ್ರಗಳ ಪ್ರಯೋಜನ ಪಡೆಯುವುದು ಕಷ್ಟವಾಗಿದೆ.

-ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.