Malayalam ಚಿತ್ರರಂಗದಲ್ಲಿ ನಟಿಯರಿಗೆ ವ್ಯಾಪಕ ಲೈಂಗಿಕ ಕಿರುಕುಳ: ಏನಿದು ವರದಿ?
ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಸ್ಫೋಟಕ ಮಾಹಿತಿಗಳನ್ನು ಒಳಗೊಂಡಿದೆ...
Team Udayavani, Aug 19, 2024, 6:11 PM IST
ತಿರುವನಂತಪುರಂ: ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಸೋಮವಾರ(ಆ19) ಬಿಡುಗಡೆಯಾಗಿದ್ದು ಮಲಯಾಳಂ ಚಿತ್ರರಂಗದಲ್ಲಿ ನಟಿಯರು ಎದುರಿಸುತ್ತಿರುವ ವ್ಯಾಪಕ ಮತ್ತು ನಿರಂತರ ಲೈಂಗಿಕ ಕಿರುಕುಳದ ಮೇಲೆ ಬೆಳಕು ಚೆಲ್ಲಿದೆ.
ಚಿತ್ರರಂಗದಲ್ಲಿ ಕೆಲಸ ಪ್ರಾರಂಭಿಸುವ ಮೊದಲೇ ಅನಗತ್ಯ ಲೈಂಗಿಕ ಕಿರುಕುಳಗಳಿಗೆ ಒಳಗಾಗಿದ್ದೇವೆ ಎಂದು ಹಲವರು ಆರೋಪಿಸಿದ್ದರು. ಈಗ ವರದಿಯು ಸಮಸ್ಯೆಯ ವ್ಯಾಪಕ ಸ್ವರೂಪವನ್ನು ಎತ್ತಿ ತೋರಿಸಿದೆ, ಉದ್ಯಮದಲ್ಲಿನ ಮಹಿಳಾ ವೃತ್ತಿಪರರ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ಕಾಳಜಿಯನ್ನು ಹುಟ್ಟುಹಾಕಿದೆ.
2019 ರಲ್ಲಿ ಸರಕಾರ ನೇಮಿಸಿದ ನ್ಯಾಯಮೂರ್ತಿ ಹೇಮಾ ಸಮಿತಿ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಿ ಬಹು ನಿರೀಕ್ಷಿತ ವರದಿಯನ್ನು ಬಿಡುಗಡೆ ಮಾಡಿದ್ದು, ಕಿರುಕುಳ, ಶೋಷಣೆ ಮತ್ತು ದೌರ್ಜನ್ಯದ ಸ್ಫೋಟಕ ಮಾಹಿತಿಗಳನ್ನು ಒಳಗೊಂಡಿದೆ. ವರದಿಯ ಪ್ರತಿಯನ್ನು ಐದು ವರ್ಷಗಳ ನಂತರ ಆರ್ಟಿಐ ಕಾಯ್ದೆಯಡಿ ಮಾಧ್ಯಮಗಳಿಗೆ ನೀಡಲಾಗಿದೆ.
ಆಘಾತಕಾರಿ ಮತ್ತು ನಾಚಿಕೆಗೇಡಿನ ವಿಚಾರ ಬಹಿರಂಗಪಡಿಸುವಿಕೆಯಲ್ಲಿ, ನಟಿಯರು ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ, ಮದ್ಯಪಾನ ಮಾಡಿದ ವ್ಯಕ್ತಿಗಳು ನಟಿಯರ ಕೊಠಡಿಯ ಬಾಗಿಲುಗಳನ್ನು ಒಡೆದ ಉದಾಹರಣೆಗಳೂ ವರದಿಯನ್ನು ಸೇರಿವೆ.ಲೈಂಗಿಕ ಕಿರುಕುಳ ಅನುಭವಿಸಿದ ಅನೇಕರು ಭಯದ ಕಾರಣ ಪೊಲೀಸರಿಗೆ ದೂರು ನೀಡಲು ಹಿಂಜರಿದಿದ್ದಾರೆ ಎಂದು ಹೇಳಿದೆ.
“ಮಿನುಗುವ ನಕ್ಷತ್ರಗಳು ಮತ್ತು ಸುಂದರವಾದ ಚಂದ್ರನೊಂದಿಗೆ ಆಕಾಶವು ರಹಸ್ಯಗಳಿಂದ ತುಂಬಿದೆ. ಆದರೆ ವೈಜ್ಞಾನಿಕ ತನಿಖೆಯು ನಕ್ಷತ್ರಗಳು ಮಿನುಗುವುದಿಲ್ಲ, ಚಂದ್ರನು ಸುಂದರವಾಗಿ ಕಾಣುವುದಿಲ್ಲ ಎಂದು ತಿಳಿದುಬಂದಿದೆ. ನೀವು ನೋಡುವುದನ್ನೇ ನಂಬಬೇಡಿ, ಉಪ್ಪು ಕೂಡ ಸಕ್ಕರೆಯಂತೆ ಕಾಣುತ್ತದೆ” ಎಂದು ವರದಿಯ ಆರಂಭಿಕ ಸಾಲುಗಳಲ್ಲೇ ಉಲ್ಲೇಖಿಸಲಾಗಿದೆ.
2017 ರಲ್ಲಿ ನಟ ದಿಲೀಪ್ ನಟಿಯ ಮೇಲೆ ಹಲ್ಲೆ ನಡೆಸಿದ ಗಂಭೀರ ಪ್ರಕರಣದ ನಂತರ ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಮತ್ತು ಲಿಂಗ ಅಸಮಾನತೆಯ ಸಮಸ್ಯೆಗಳನ್ನು ಅಧ್ಯಯನ ಮಾಡಲು ಸಮಿತಿಯನ್ನು ರಚಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raghu Thatha: ಓಟಿಟಿಯಲ್ಲಿ ರಿಲೀಸ್ ಆದ 24 ಗಂಟೆಯಲ್ಲೇ ಹೊಸ ದಾಖಲೆ ಬರೆದ ʼರಘು ತಾತʼ
Dhoom 4: ಬಾಲಿವುಡ್ ʼಧೂಮ್-4ʼ ನಲ್ಲಿ ಸೌತ್ ಸ್ಟಾರ್ ಸೂರ್ಯ ವಿಲನ್?
Tollywood: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್- ಅದಿತಿ ರಾವ್; ಇಲ್ಲಿದೆ ಫೋಟೋಸ್
Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ವಿರುದ್ಧ FIR
Kadambari Jethwani: ನಟಿಯನ್ನು ಅಕ್ರಮವಾಗಿ ಬಂಧಿಸಿದ ಆರೋಪ; 3 ಐಪಿಎಸ್ ಅಧಿಕಾರಿಗಳು ಅಮಾನತು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.