Surathkal: ಹೆದ್ದಾರಿ 66: ಮುಕ್ಕ-ಕೂಳೂರು ಕತ್ತಲೆ ಪಯಣ
ಸಮರ್ಪಕ ನಿರ್ವಹಣೆಯಿಲ್ಲದೆ ಸೊರಗುತ್ತಿದೆ ಬೀದಿದೀಪ!
Team Udayavani, Aug 19, 2024, 6:44 PM IST
ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಮುಕ್ಕ ಪಣಂಬೂರು, ಕೂಳೂರು ವ್ಯಾಪ್ತಿಯಲ್ಲಿ ಬೀದಿದೀಪ ಅಳವಡಿಸಿದ್ದರೂ ಸಮರ್ಪಕ ನಿರ್ವಹಣೆಯಿಲ್ಲದೆ ಸೊರಗುತ್ತಿದೆ.
ಮಳೆಗಾಲದ ಮುನ್ನ ಉರಿಯದ ಹಲವು ದೀಪಗಳು, ಈಗಲೂ ಇದೇ ಪರಿಸ್ಥಿತಿ ಮುಂದುವರಿದಿದೆ. ಮಳೆಗಾಲದಲ್ಲಿ ಹೆದ್ದಾರಿ ಬದಿ ದೀಪವಿಲ್ಲದೆ ವಾಹನ ಸವಾರರು ಓಡಾಡುವಂತಾಗಿತ್ತು.
ಹೆದ್ದಾರಿ ಕಾಮಗಾರಿ ಮುಗಿದು ಹಲವು ವರ್ಷಗಳೇ ಬೀದಿ ದೀಪ ಅಳವಡಿಕೆಗೆ ಸಮಯ ಹಿಡಿಯಿತು.
ನ್ಯೂ ಮಂಗಳೂರು ಪೋರ್ಟ್ ರೋಡ್ ಆಗಿದ್ದರಿಂದ ಎನ್ಎಂಪಿಎ ತನ್ನ ನಿಧಿಯಿಂದ ಸ್ವಲ್ಪ ಅನುದಾನ, ಮಹಾನಗರ ಪಾಲಿಕೆಯಿಂದ ಅನುದಾನ ಹೀಗೆ ವಿವಿಧ ಮೂಲಗಳಿಂದ ಬೀದಿ ದೀಪವನ್ನು ಕೊನೆಗೂ ಹಾಕಲಾಯಿತಾದರೂ ನಿರ್ವಹಣೆ ಇದೀಗ ಕಬ್ಬಿಣದ ಕಡಲೆಯಾಗಿದೆ. ಕೆಲವೆಡೆ ಎಲ್ಇಡಿ ಬಲ್ಬ್ ಉರಿಯುತ್ತಿಲ್ಲ. ಅಪಘಾತವಲಯವಾದ ಹೊಸಬೆಟ್ಟು ತಿರುವು, ಮುಕ್ಕ ತಡಂಬೈಲ್ ಮತ್ತಿತರೆಡೆ ದೀಪವೇ ಇಲ್ಲ. ಇನ್ನೊಂದೆಡೆ ಸರ್ವಿಸ್ ರಸ್ತೆಯಿಲ್ಲದೆ ಜನತೆ ಹೆದ್ದಾರಿ ಬದಿಯೇ ನಡೆದುಕೊಂಡು ಹೋಗುವ ಅನಿವಾರ್ಯ ಇರುವುದರಿಂದ ಬೀದಿ ದೀಪದ ಅಗತ್ಯವಿದೆ.
ಧರೆಗೆ ಉರುಳಿದ ಬೀದಿದೀಪಗಳ ಕಂಬ
ಈ ವ್ಯಾಪ್ತಿಯ ಹೆದ್ದಾರಿಯಲ್ಲಿ ಅಳವಡಿಸಿದ ಬೀದಿ ದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದ ಉದಾಹರಣೆಗಳಿಲ್ಲ. ಅಪಘಾತಕ್ಕೀಡಾಗಿ ಬೀದಿದೀಪಗಳ ಕಂಬ ತಡಂಬೈಲ್ನಲ್ಲಿ ಧರೆಗೆ ಉರುಳಿವೆ. ಹೊಸ ಕಂಬ ಎದ್ದು ನಿಂತಿಲ್ಲ. ಬೀದಿ ದೀಪದ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru; ಕುಂಟಿಕಾನದಲ್ಲಿ ಅಪಘಾತ: ಕಾಲೇಜು ವಿದ್ಯಾರ್ಥಿ ಸಾ*ವು
Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ
Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ
Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್ ಗಾಂಧಿ
Hampankatta: ಪಾರ್ಕಿಂಗ್ ಸಮಸ್ಯೆಗೆ ‘ಮಲ್ಟಿ ಲೆವೆಲ್’ ಉತ್ತರ!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.