Heavy Rain ದಿಡುಪೆ, ಮಿತ್ತಬಾಗಿಲು ಪ್ರದೇಶದಲ್ಲಿ ಉಕ್ಕಿ ಹರಿದ ನದಿ: ಜನರ ಸ್ಥಳಾಂತರ
Team Udayavani, Aug 19, 2024, 11:52 PM IST
ಬೆಳ್ತಂಗಡಿ: ಕೇವಲ ಒಂದು ತಾಸಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ದಿಡುಪೆ, ಮಿತ್ತಬಾಗಿಲು, ಅರ್ಬಿ ಫಾಲ್ಸ್, ಕಡಮಗುಂಡಿ ಕಡೆಯಿಂದ ಬಂದ ನೀರಿನ ಪ್ರಮಾಣ ನೇತ್ರಾವತಿ ಉಕ್ಕಿ ಹರಿವಂತೆ ಮಾಡಿದ್ದು ಪ್ರವಾಹದ ಭೀತಿ ಎದುರಾಗಿತ್ತು.
ಘಟ್ಟ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ನೀರು ಏರಿಕೆ ಯಾಗಿದೆ. ನೀರಿನ ಮಟ್ಟ 2019ರಲ್ಲಿ ಬಂದ ಪ್ರವಾಹವನ್ನು ಮೀರಿಸುವಂ ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ನೇತ್ರಾವತಿ ಉಗಮ ಸ್ಥಳ ದಿಂದ ನೀರು ದೊಡ್ಡ ಪ್ರಮಾಣದಲ್ಲಿ ಬಾರದ ಕಾರಣ ಹೆಚ್ಚಿನ ಅನಾಹುತ ಆಗಿಲ್ಲ.
ನೀರಿನ ತೀವ್ರತೆಯಿಂದಾಗಿ ದಿಡುಪೆ ಮಲ್ಲ ಸಾಗುವ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಮಿತ್ತ ಬಾಗಿಲು, ದಿಡುಪೆ, ಬರ್ಕಳೊಟ್ಟು ಬನದಬಾಗಿಲು ಶಶಿಧರ್ ಅವರ ಮನೆ ವರೆಗೆ ನೀರು ನುಗ್ಗಿದ್ದು, ತೋಟ, ಗದ್ದೆ ಜಲಾವೃತವಾಗಿದೆ. ಸಮೀಪದ ಬಿರ್ಮನೊಟ್ಟು ರಾಜಪ್ಪ ಗೌಡರ ಮನೆಗೆ ನೀರು ನುಗ್ಗಿದೆ. ದಿಡುಪೆ ಪಂಚಾಯತ್ ಕಟ್ಟಡದ ಎದುರು ತಡೆಗೋಡೆಗೆ ಹಾನಿಯಾಗಿದ್ದು, ರಮೇಶ್ ಗೌಡರ ಮನೆಗೂ ನೀರು ನುಗ್ಗಿದೆ.
ಕೊಲ್ಲಿ-ಕಲೆಟ್ಟು ಪನಿಕಲ್ ಸಾಗುವ ರಸ್ತೆಯ ಮೋರಿ ಕುಸಿದಿದ್ದು, ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಿದೆ. ಕುಕ್ಕಾವು ಹಾಗೂ ಎರ್ಮಾಲ್ ಪಲ್ಕೆ ಭಾಗದಲ್ಲಿ ಅತಿ ಹೆಚ್ಚು ನೀರು ಬಂದಿರುವುದರಿಂದ ನೇತ್ರಾವತಿ ನೀರು ಹರಿವು ಹೆಚ್ಚಳವಾಗಿದೆ. ಮಳೆ ಪ್ರಮಾಣ ಕಂಡಾಗ ಘಾಟಿಯ ಅಲ್ಲಲ್ಲಿ ನೀರಿನ ಝರಿ ಇಳಿಯುವ ದೃಶ್ಯ ಆತಂಕಕ್ಕೆ ಕಾರಣವಾಗಿತ್ತು.
ದಿಡುಪೆ ಗಣೇಶನಗರದ ಅಪಾಯ ದಲ್ಲಿರುವ ಮನೆ ಮಂದಿ ಯನ್ನು ಸ್ಥಳಾಂತರಿಸಲಾಗಿದೆ. ವಿಶೇಷವೆಂದರೆ, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ ಸಹಿತ ಬೇರ್ಯಾವ ಪ್ರದೇಶದಲ್ಲಿ ಮಳೆ ಸುರಿದಿಲ್ಲ. ಕೇವಲ ಘಟ್ಟ ಪ್ರದೇಶದಲ್ಲಿ ಬಂದ ಮಳೆಯಿಂದಾಗಿ ನೇತ್ರಾವತಿ ಉಕ್ಕಿ ಹರಿದು ಆತಂಕ ಸೃಷ್ಟಿಸಿತ್ತು.
ಉಡುಪಿಯಲ್ಲಿ
ಉಡುಪಿ: ಜಿಲ್ಲೆಯ ವಿವಿಧೆಡೆ ಸೋಮವಾರ ಉತ್ತಮ ಮಳೆಯಾಗಿದೆ. ಬೆಳಗ್ಗಿನಿಂದಲೇ ಬಿಸಲು-ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನ ಅನಂತರ ಪದೇಪದೆ ಮಳೆ ಸುರಿದಿದೆ. ಬೈಂದೂರು, ಕುಂದಾಪುರ, ಅಮಾಸೆಬೈಲು, ಬ್ರಹ್ಮಾವರ, ಹೆಬ್ರಿ, ಕಾರ್ಕಳ, ಪಡುಬಿದ್ರಿ, ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ರವಿವಾರ ತಡರಾತ್ರಿಯೂ ಹಲವೆಡೆ ಕೆಲಕಾಲ ಮಳೆಯಾಗಿದೆ.
ದಕ್ಷಿಣ ಕನ್ನಡದಲ್ಲಿ ಬಿಸಿಲು, ಮಳೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಹಗಲು ವೇಳೆಯಲ್ಲಿ ಬಿಸಿಲ ವಾತಾವರಣವಿತ್ತು. ಸಂಜೆಯಾಗುತ್ತಿದ್ದಂತೆ ಗ್ರಾಮಾಂತರ ಪ್ರದೇಶಗಳು ಸಹಿತ ವಿವಿಧೆಡೆ ಮಳೆ ಮಳೆಯಾಗಿದೆ.
ಕೆಲವು ದಿನಗಳಿಂದ ವಾತಾವರಣ ಯಥಾಸ್ಥಿತಿಯಿದ್ದು, ಕ್ಷೀಣವಾಗಿರುವ ಮುಂಗಾರು ಮಳೆ ಬಿರುಸು ಪಡೆದಿಲ್ಲ. ಈ ವಾರಾಂತ್ಯದ ವರೆಗೂ ಮಳೆ ಬಿರುಸಾಗುವ ಸಾಧ್ಯತೆ ಇಲ್ಲ. ಸದ್ಯದ ಮುನ್ಸೂಚನೆಯಂತೆ ಮಂಗಳವಾರಕ್ಕೆ ಕರಾವಳಿಗೆ ಎಲ್ಲೋ ಅಲರ್ಟ್ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು, ಬುಧವಾರದಿಂದ ಯಾವುದೇ ಅಲರ್ಟ್ ಇಲ್ಲ. ವ್ಯಾಪಕ ಮಳೆಯ ಸಾಧ್ಯತೆ ಸದ್ಯಕ್ಕಿಲ್ಲ.
ಮಂಗಳೂರಿನಲ್ಲಿ ದಿನದ ತಾಪಮಾನ ಗರಿಷ್ಠ 30.8 ಡಿ.ಸೆ. ದಾಖಲಾಗಿದ್ದು, ಕನಿಷ್ಠ 25.1 ಡಿ.ಸೆ.ದಾಖಲಾಗಿದೆ. ಬಿಸಿಲ ಝಳ ಹೆಚ್ಚಾಗುತ್ತಿದ್ದು, ಕೆಲವೊಮ್ಮೆ ಆಕಾಶದಲ್ಲಿ ಮೋಡವೂ ಕಾಣಿಸುವುದರಿಂದ ಉರಿ ಬಿಸಿಲಿನ ಅನುಭವವಾಗುತ್ತಿದ್ದು, ಬೆವರುವಿಕೆಯೂ ಹೆಚ್ಚಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ninthikallu-ಬೆಳ್ಳಾರೆ-ಸುಳ್ಯ ರಸ್ತೆಯಲ್ಲಿ ಹೊಂಡ-ಗುಂಡಿಗಳದ್ದೇ ಸಾಮ್ರಾಜ್ಯ
High Court ನಿರ್ದೇಶನ: ಕೊಂಬಾರಿನ ರಸ್ತೆ, ಬಿರ್ಮೆರೆಗುಂಡಿ ಸೇತುವೆಗೆ 1.31 ಕೋಟಿ ರೂ.
ಖಾಯಂ ಪಿಡಿಓ, ಕಾರ್ಯದರ್ಶಿ ನೇಮಕಕ್ಕೆ ಒತ್ತಾಯ;ಗ್ರಾ.ಪಂ.ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ
Belthangady ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಅಸ್ಥಿತ್ವಕ್ಕೆ; ಲೋಗೋ ಅನಾವರಣ
Dharmasthala: ಶೌರ್ಯ ಯೋಧರು ಆಪತ್ಕಾಲದ ಆಪ್ತ ರಕ್ಷಕರು: ಡಾ.ಡಿ.ವೀರೇಂದ್ರ ಹೆಗ್ಗಡೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Udupi: ಯುಜಿಡಿ ಚೇಂಬರ್ ಅವ್ಯವಸ್ಥೆಗಿಲ್ಲ ಪರಿಹಾರ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
Channapatnam by-election: ಡಿಕೆಸು ಕೈ ಅಭ್ಯರ್ಥಿ ಮಾಡಲು ಕಾರ್ಯಕರ್ತರ ಒತ್ತಡ
Thekkatte: ಶಾಲಾ ವಾಹನ ಹೈಮಾಸ್ಟ್ ಕಂಬಕ್ಕೆ ಢಿಕ್ಕಿ; ಚಾಲಕನಿಗೆ ಗಂಭೀರ ಗಾಯ
Chamarajanagara: ಲಂಚ ಪಡೆಯುತ್ತಿದ್ದ ಡಿಆರ್ಎಫ್ಒ ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.