UV Fusion: ಈ ಬಂಧ ಬಿಡಿಸಲಾಗದ ಅನುಬಂಧ
Team Udayavani, Aug 21, 2024, 2:51 PM IST
ಅಣ್ಣ ತಂಗಿಯ ವಿಶೇಷ ಸಂಬಂಧವು ನಿಜಕ್ಕೂ ಅಮೂಲ್ಯ ಇದು ಸ್ನೇಹ, ಪ್ರೀತಿ, ಜಗಳಗಳಿಂದ ಕೂಡಿದ ಒಂದು ನಂಟು. ಅದೆಷ್ಟೋ ಸಣ್ಣಪುಟ್ಟ ವಿಚಾರಗಳಿಗೆ ಜಗಳವಾಡಿ ನಂತರ ಕೋಪವು ಕೇವಲ ಕ್ಷಣಿಕವೇ ಎಂಬುದನ್ನು ಅರಿತು, ನಗುತ್ತಾ ಎಲ್ಲಾ ದ್ವೇಷವನ್ನು ಮರೆಸುವ ಶಕ್ತಿ ಈ ಸಂಬಂಧಕ್ಕಿದೆ. ಇದಕ್ಕಾಗಿಯೇ ಒಂದು ವಿಶೇಷವಾದ ದಿನವನ್ನು ಮೀಸಲಾಡಲಾಗಿದೆ.
ಅದುವೇ ಆಗಸ್ಟ್ 19ರಂದು ಆಚರಿಸುವ ರಕ್ಷಾಬಂಧನ. ರಕ್ಷಾಬಂಧನ ಎಂಬ ಪದ ಕೇಳಿದಾಗಲೇ ಆ ಪದದಲ್ಲಿ ಎಷ್ಟು ತೂಕವಿದೆ ಎಂದು ನಮಗೆ ಅರಿವಾಗುತ್ತದೆ.
ಭಾರತದ ಎಷ್ಟೋ ಪ್ರಮುಖ ಹಬ್ಬಗಳಲ್ಲಿ ಈ ಹಬ್ಬವು ಕೂಡ ಒಂದಾಗಿದೆ. ಈ ಹಬ್ಬದಂದು ತಂಗಿಯಾದವಳು ತನ್ನ ಅಣ್ಣನಿಗೆ ರಾಖೀ ಕಟ್ಟುವುದರ ಮೂಲಕ ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುತ್ತಾಳೆ.
ರಾಖೀ ಎಂದರೆ ಅದು ಕೇವಲ ದಾರವಲ್ಲ ಅಣ್ಣ ತಂಗಿ ಸಂಬಂಧವನ್ನು ಬೆಸೆಯುವ ಪವಿತ್ರವಾದ ಶ್ರೀರಕ್ಷೆ . ರಕ್ಷಾಬಂಧನ ಎನ್ನುವ ಪದವು ರಕ್ಷಣೆ, ಬಲ, ಧೈರ್ಯ, ನಂಬಿಕೆ ಎಂಬ ಅರ್ಥವನ್ನು ತನ್ನೊಳಗೆ ತುಂಬಿಕೊಂಡಿದೆ. ಒಬ್ಬ ಅಣ್ಣನಾದವನು ತನ್ನ ತಂಗಿಗೆ ಯಾವಾಗಲೂ ಬೆನ್ನೆಲುಬಾಗಿ, ಕಾವಲುಗಾರನಾಗಿ, ಅವಳನ್ನು ರಕ್ಷಣೆ ಮಾಡುವವನಾಗಿರುತ್ತಾನೆ.
ತಂಗಿಗೆ ಅಣ್ಣನು ವಿಶ್ವಾಸದ ಸಂಕೇತವಾಗಿರುತ್ತಾನೆ. ಈ ಸಂಬಂಧದ ಪ್ರೀತಿಯ ಸಂಕೇತವಾಗಿ ರಕ್ಷಾಬಂಧನವನ್ನು ಆಚರಿಸಲಾಗುತ್ತದೆ. ಈ ಹಬ್ಬವು ಕೇವಲ ಒಡಹುಟ್ಟಿದ ಸಹೋದರ ಸಹೋದರಿಯರಿಗೆ ಮಾತ್ರ ಸೀಮಿತವಲ್ಲ, ತನ್ನನ್ನು ಅಣ್ಣನಂತೆ ಕಾಳಜಿ ವಹಿಸುವ, ಧೈರ್ಯ ತುಂಬುವ ಪ್ರತಿಯೊಬ್ಬ ವ್ಯಕ್ತಿಯು ಕೂಡ ಈ ರಾಖೀ ಹಬ್ಬವನ್ನು ಆಚರಿಸುತ್ತಾರೆ.
ಹುಣ್ಣಿಮೆಯ ರಾತ್ರಿಯಲ್ಲಿ ಚಂದ್ರನು ಹೇಗೆ ಪ್ರಕಾಶಮಾನವಾಗಿ ಹೊಳೆಯುತ್ತ ಸುಂದರವಾಗಿ ಕಾಣುತ್ತಾನೋ ಅದೇ ರೀತಿ ಒಂದು ಹೆಣ್ಣಿನ ಜೀವನದಲ್ಲಿ ಅವಳು ತಪ್ಪು ಮಾಡಿದಾಗ ಅವಳನ್ನು ತಿದ್ದಲು, ದುಃಖದಲ್ಲಿದಾಗ ಕಣ್ಣೀರು ಓರೆಸಲು, ಭಯದಲ್ಲಿದ್ದಾಗ ಧೈರ್ಯ ತುಂಬಲು ಒಬ್ಬ ಅಣ್ಣನಿದ್ದರೆ ಅವಳ ಬದುಕು ಕೂಡ ಸುಂದರಮಯವಾಗುತ್ತದೆ.
ಅಣ್ಣ ತಂಗಿ ಎನ್ನುವುದು ಕೇವಲ ಹೆಸರಿಗೆ ಮಾತ್ರವಲ್ಲ, ಆ ಎರಡು ಪದಗಳಲ್ಲಿ ಹೇಳಲಾಗದ ಅದೆಷ್ಟೋ ಭಾವನೆಗಳಿವೆ. ಬೆಲೆ ಕಟ್ಟಲಾಗದ ಅತ್ಯಮೂಲ್ಯವಾದ ಬಾಂಧವ್ಯ ಎಂದರು ತಪ್ಪಾಗಲಾರದು. ಬಾಳಿಗೊಂದು ಸಂತೋಷದ ಕಿರಣವನ್ನು ತುಂಬುವ ಈ ಸಂಬಂಧವು ಎಂದೆಂದಿಗೂ ಮರೆಯಲಾಗದ ಅನುಬಂಧ.
ದೀಪ್ತಿ ಕೋಟ್ಯಾನ್
ಎಸ್.ಡಿ.ಎಂ.ಕಾಲೇಜು ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್
Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!
ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು
Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ
Bajpe ಬಸ್ ನಿಲ್ದಾಣ ಕಟ್ಟಡ ಪೂರ್ಣ; 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.