UV Fusion: ಗತವೈಭವ ಸಾರುವ ಚೌಟರ ಅರಮನೆ


Team Udayavani, Aug 21, 2024, 4:38 PM IST

10-uv-fusion-1

ತುಳುನಾಡು ಶತ ಶತಮಾನಗಳಿಂದ ತನ್ನದೇ ಆದ ಭಾಷಾ ಸೊಗಡು, ಸಂಸ್ಕೃತಿ, ಕಲಾ ವೈವಿಧ್ಯ, ಗುತ್ತು ಮನೆ, ದೈವಾರಾಧನೆಗಳಿಂದ ವಿಶ್ವದಲ್ಲಿಯೇ ಪ್ರಸಿದ್ಧಿ ಹೊಂದಿದೆ. ಕರಾವಳಿ ತೀರದ ದಕ್ಷಿಣಕನ್ನಡ, ಮೂಡುಬಿದಿರೆ, ಕಾರ್ಕಳ, ಉಡುಪಿ ಭಾಗಗಳನ್ನು ಒಳಗೊಂಡ ಈ ತುಳುನಾಡಿನಲ್ಲಿ ದಿಟ್ಟತನದಿಂದ ಆಳ್ವಿಕೆ ನಡೆಸಿದ ಅದೇಷ್ಟೋ ರಾಜ ಮನೆತನಗಳಿವೆ.

ಸಾಮಂತರಾಜ-ರಾಣಿಯರ ಸಾಧನೆಯ ಹೆಜ್ಜೆ ಗುರುತುಗಳು ಗತವೈಭವ ಸಾರುವಇಲ್ಲಿನ ಅರಮನೆಗಳ ಮೂಲಕ ಇಂದಿಗೂ ಉಳಿದುಕೊಂಡಿವೆ. ಈ ಸಾಲಿಗೆ ಸೇರುವ ಮೂಡುಬಿದಿರೆಯ ಚೌಟರ ಅರಮನೆ ತುಳುನಾಡಿನ ಕಥೆ ಹೇಳುತ್ತದೆ. ಈ ಚೌಟರ ಅರಮನೆಯ ಅಂಗಳಕ್ಕೆ ಕಾಲಿಡುತ್ತಿದ್ದಂತೆ ವಿಶಿಷ್ಟ ಅನುಭವವಾಗುತ್ತದೆ. ಸುತ್ತಲು ಹಸುರಿನ ವಾತಾವರಣ, ವಿಶಾಲ ಪ್ರಾಗಂಣ, ಕೆಂಪು ಕಲ್ಲು ಹಾಸಿನ ಒಳಾಂಗಣ. ವಿಭಿನ್ನ ಕೆತ್ತನೆಯೊಂದಿಗೆ ಕಂಗೊಳಿಸೋ ಹಿರಿದಾದ ಕಂಬಗಳು ಅರಮನೆಯನ್ನು ಆಕರ್ಷಣಿಯವಾಗಿಸಿವೆ.

ಚೌಟ ರಾಜವಂಶವು 12 ನೇ – 18 ನೇ ಶತಮಾನಗಳಲ್ಲಿ ತುಳುನಾಡು ಪ್ರದೇಶದ ಕೆಲವು ಭಾಗಗಳನ್ನು ಆಳಿದ ಜೈನ ರಾಜವಂಶವಾಗಿದೆ. ಈ ಚೌಟರ ಅರಮನೆ ನೋಡುವುದಕ್ಕೆ ಈಗಲೂ ಪ್ರವಾಸಿಗರು ಆಗಮಿಸುತ್ತಾರೆ. ಸುಮಾರು ಎಂಟು ಎಕರೆ ಕೋಟೆಯ ನಡುವೆ ಇದ ªಅರಮನೆ ಇದೀಗ ರಾಜ ಪ್ರಾಂಗಣವನ್ನ ಮಾತ್ರ ಉಳಿಸಿಕೊಂಡಿದೆ. ಸಂಪೂರ್ಣವಾಗಿ ಕಾಷ್ಟಶಿಲ್ಪಗಳೇ ಕಾಣ ಸಿಕ್ಕುವ ಈ ಅರಮನೆಯಲ್ಲಿ ಸಪ್ತನಾರಿತುರಗ, ನವನಾರಿಕುಂಜರ ಎಂಬ ಎರಡು ಶಿಲ್ಪಗಳು ವಿಶೇಷವಾಗಿವೆ.

ಇತಿಹಾಸದ ಪ್ರಕಾರ ಮೂಲತಃ ಪುತ್ತಿಗೆಯಲ್ಲಿದ್ದ ಅರಮನೆಯಲ್ಲಿ ಬೆಂಕಿ ಅನಾಹುತವಾದ ಮೇಲೆ ಕುಲದೇವರಾದ ಸೋಮನಾಥನ ಸಹಿತ ಮೂಡುಬಿದಿರೆಗೆ ಬಂದ ಚೌಟರು ತಮ್ಮದೇ ಆದ ವಿಸ್ತಾರವಾದ ಅರಮನೆ ಕಟ್ಟಿದರಂತೆ. ದಪ್ಪನೆಯ ಮರಗಳಿಂದ ತಯಾರಾದ ನೋಡಲು ಮನಸೂರೆಗೊಳಿಸುವ ಕೆತ್ತನೆಗಳು ಇಂದಿಗೂ ಜನರನ್ನ ಆಕರ್ಷಿಸುತ್ತದೆ. ಈ ಅರಮನೆಯಲ್ಲಿ ದಪ್ಪನೆಯ ಕಂಬದ ತುಂಬೆಲ್ಲ ಶೃಂಗಾರದ ಚಿತ್ರಗಳು ಕಾಣಸಿಗುತ್ತವೆ.

ನೂರಾರು ವರ್ಷಗಳು ಕಳೆದರೂ ಕೂಡ ಚೂರೇಚೂರು ಭಾಗವನ್ನೂ ಗೆದ್ದಲು ಮುಟ್ಟಿಲ್ಲ ಎಂಬುದು ಅಚ್ಚರಿಯ ಸಂಗತಿ. ಅರಮನೆಯ ಹೊರಗಡೆ ರಸ್ತೆ ಬದಿಯಲ್ಲಿ ಪೋರ್ಚುಗೀಸರನ್ನು ತನ್ನ ದೀವಟಿಗೆಯಿಂದಲೇ ಹೆದರಿಸಿ ಸಂಸ್ಥಾನವನ್ನು ಉಳಿಸಿಕೊಂಡ ದೀರ ಮಹಿಳೆ ರಾಣಿ ಅಬ್ಬಕ್ಕನ ಪ್ರತಿಮೆ, ಚೌಟ ಮನೆತನಕ್ಕೆ ಸೇರಿದ ದೈವ ಪೀಠ, ಆನೆ ಬಾಗಿಲು ಹೆಸರಿನ ಮಹಾದ್ವಾರ ಕಾಣಬಹುದು.

ಅರಮನೆಯ ಒಳಭಾಗದ ಒಂದು ಕೋಣೆಯಲ್ಲಿ ಅವರ ಮನೆತನದ ಹಳೆಯ ಸಾಮಗ್ರಿಗಳು, ಕವಚ, ಖಡ್ಗ, ದೈವ ಸಾಮಗ್ರಿಗಳು, ಚೌಟ ವಂಶಸ್ಥರ ಪೀಳಿಗೆ ನಕ್ಷೆ ನೋಡಬಹುದು. ಅರಮನೆಯ ಎದುರು ವಿಶಾಲ ಕೋಟೆಯಿತ್ತೆಂದೂ ಆ ಕೋಟೆಯಲ್ಲಿ ಕೂತು ರಾಜ ಪ್ರಜೆಗಳ ಆಲಿಸುತ್ತಿದ್ದನೆಂದೂ ಹೇಳಲಾಗುತ್ತೆ. ಈಗ ಆ ಕೋಟೆಯು ಅಳಿದು ಹೋದಿದ್ದು ಅದರ ಕೆಲವು ಅವಶೇಷಗಳು, ಮೆಟ್ಟಿಲುಗಳ ಮೂಲಕ ಆ ಕೋಟೆಯನು °ಗುರುತಿಸಬಹುದಾಗಿದೆ.

ಹೀಗೆ ಹತ್ತಾರು ವೈಶಿಷ್ಟ್ಯತೆಗಳನ್ನು ಹೊಂದಿರೋ ಚೌಟರ ಅರಮನೆ ಇಂದಿಗೂ ಇತಿಹಾಸ ಪ್ರಿಯರ ನೆಚ್ಚಿನ ತಾಣವಾಗಿ ಉಳಿದಿರುವುದು ವಿಶೇಷ. ಇದೀಗ ಮೂಲ ವಂಶಸ್ಥರು ಅರಮನೆಯನ್ನು ಸರ್ಕಾರಕ್ಕೆ ಒಪ್ಪಿಸಿದ್ದು, ಕೇಂದ್ರ ಸರ್ಕಾರದ ಭಾರತೀಯ ಪುರಾತತ್ವ ಇಲಾಖೆಯು ಈ ಅರಮನೆಯ ಸಂರಕ್ಷಣೆಯ ಹೊಣೆಯನ್ನು ಹೊತ್ತಿದೆ.

-ದಿವ್ಯಾ

ನಾಯ್ಕನ ಕಟ್ಟೆ

ಟಾಪ್ ನ್ಯೂಸ್

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

BANDARAKERI

Udupi: ಭಕ್ತರಲ್ಲಿಗೆ ಭಾಗವತ ಭಂಡಾರಕೇರಿ ಶ್ರೀಗಳ ಸಾಧನೆ

Payan

Movie Release: ರಾಜ್ಯಾದ್ಯಂತ “ಪಯಣ್‌’ ಸಿನೆಮಾ ಸೆ.20ರಂದು ತೆರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

25-uv-fusion

UV Fusion: ಬದುಕೆಂಬ ಪುಸ್ತಕದ ಪ್ರತಿ ಪುಟವೂ ಸುಂದರ

24-uv-fusion

UV Fusion: ಬಾಂಧವ್ಯದ ಬಂಧವನ್ನು ಬೆಸೆಯೋಣ…

23-uv-fusion

UV Fusion: ಮಾತಿನ ಅರ್ಥ ಒಳಾರ್ಥಗಳು..!

21-uv-fusion

UV Fusion: ಹೊತ್ತು ಮಾಗುವ ಮುನ್ನ ನಿಮ್ಮನ್ನು ನೀವು ಅರಿಯಿರಿ!

20-uv-fusion

UV Fusion: ಬದುಕಬೇಕು ಅಂತರಾಳ ಒಪ್ಪುವಂತೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.