Mobile Library: ಮಕ್ಕಳಲ್ಲಿ ಓದಿನ ಹವ್ಯಾಸ ಬೆಳೆಸುವ ಸಂಚಾರಿ ಗ್ರಂಥಾಲಯ


Team Udayavani, Aug 21, 2024, 5:08 PM IST

12-uv-fusion

ಜಗತ್ತು ಆಧುನಿಕತೆಯ ಹಿಂದೆ ಓಡುತ್ತಿದೆ. ಇಂದಿನ ದಿನಗಳಲ್ಲಿ ಅದಕ್ಕೆ ತಕ್ಕಂತೆ ಬದಲಾವಣೆಗಳು ಅನಿವಾರ್ಯ. ಕಾಲಕ್ಕನುಗುಣವಾಗಿ ಮಾನವನ ದಿನನಿತ್ಯದ ಚಟುವಟಿಕೆಗಳಲ್ಲಿ, ವಿಚಾರಶೀಲತೆಯಲ್ಲಿ ಹಾಗೂ ವಿಜ್ಞಾನ – ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೇರಳವಾದ ಅನ್ವೇಷಣೆಗಳನ್ನು ಕಾಣುತ್ತಿದ್ದೇವೆ. ಅದೇ ರೀತಿ ಉದ್ಯೋಗಿಗಳಿಗೆ ಸಮಯದ ಅಭಾವ ಮತ್ತು ಡಿಜಿಟಲ್‌ ಯುಗಕ್ಕೆ ಮಕ್ಕಳು ಅಂಟಿಕೊಂಡಿರುವುದು ಈಗೀನ ಆಧುನಿಕತೆಯ ಒಂದಿಷ್ಟು ಭಾಗಗಳು.

ಮೊಬೈಲ್‌, ಲ್ಯಾಪ್‌ಟಾಪ್‌ ಹಾಗೂ ವಿಡಿಯೋ ಗೈಮ್ಸ್ ಗಳಂತಹ ಇನ್ನಿತರ ತಂತ್ರಜ್ಞಾನಗಳಿಗೆ ಅಂಟಿಕೊಂಡಿರುವ ಮಕ್ಕಳು, ಓದುವ ಹವ್ಯಾಸಗಳಿಂದ ದೂರವಾಗುತ್ತಿದ್ದಾರೆ. ಪುಸ್ತಕ ಓದುವ ಹವ್ಯಾಸವನ್ನು ವೃದ್ದಿಗೊಳಿಸುವ ವಿಶೇಷ ಪ್ರಯತ್ನ ಇಂದಿನ ದಿನಗಳಲ್ಲಿ ಅನಿವಾರ್ಯತೆ ಇದೆ. ಇದು ಕೂಡ ಅಂತಹ ಬದಲಾವಣೆಗಳ ಒಂದು ಭಾಗ, ಪುಸ್ತಕ ಓದುವ ಹವ್ಯಾಸ ನಶಿಸುತ್ತಿರುವ ಈ ದಿನಗಳಲ್ಲಿ ಇಂದಿನ ಪೀಳಿಗೆಗೆ ಓದಿನ ಹವ್ಯಾಸ ವೃದ್ದಿಗೊಳಿಸುವ ವಿಶೇಷ ಪ್ರಯತ್ನವೇ ಸಂಚಾರಿ ಗ್ರಂಥಾಲಯ.

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಹದಾಸೆಯಿಂದ ಮೊಬೈಲ್‌ ಗೀಳಿನಿಂದ ವಿದ್ಯಾರ್ಥಿಗಳನ್ನು ಓದಿನ ಕಡೆಯ ಸೆಳೆಯುವ ಉದ್ದೇಶದಿಂದ ಜ್ಞಾನವಾಹಿನಿ ಎಂಬ ಈ ಸಂಚಾರಿ ಗ್ರಂಥಾಲಯವನ್ನು ಹುಟ್ಟು ಹಾಕಿದರು. ಇದು ಈಗ ದಕ್ಷಿಣ ಕನ್ನಡ, ಮೈಸೂರು ಮತ್ತು ಧಾರವಾಡ ಜಿಲ್ಲೆಯಾದ್ಯಂತ ಸಂಚರಿಸುತ್ತಾ ಮಕ್ಕಳಿಗೆ ಓದಿನ ಅಭಿರುಚಿಯನ್ನು ಪಸರಿಸುತ್ತಿದೆ.

ಅದೇ ರೀತಿ ಮಕ್ಕಳಿಗೆ ತಂತ್ರಜ್ಞಾನ ಮಾದರಿಗಳಿಗೆ ಅನುಗುಣವಾಗಿ ಈ ಸಂಚಾರಿ ಗ್ರಂಥಾಲಯವನ್ನು ಮಾರ್ಪಾಡು ಮಾಡಲಾಗಿದೆ. ಹವಾನಿಯಂತ್ರಿತ ಹಳದಿ ಬಸ್ಸನ್ನು ಓದಿನ ರುಚಿ ತಕ್ಕಂತೆ ರೂಪಿಸಲಾಗಿದೆ. ಸ್ಟಡಿ ಟೇಬಲ್‌, ಸುಮಾರು 10 ರಿಂದ 12ಜನರು ಕುಳಿತು ಓದಬಹುದಾದ ಗ್ರಂಥಾಲಯ ಇದಾಗಿದೆ. ಫ್ಯಾನ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಇದರಲ್ಲಿ ಕಾಣಬಹುದು. ಪುಸ್ತಕ ಹಾಗೂ ಇ-ಪುಸ್ತಕ ವ್ಯವಸ್ಥೆಯನ್ನು ನಾವಿಲ್ಲಿ ನೋಡಬಹುದು.

ನ್ಯಾಷನಲ್‌ ಡಿಜಿಟಲ್‌ ಲೈಬ್ರರಿ ಸೌಲಭ್ಯದ ಮೂಲಕ ಕುಳಿತಲ್ಲೆ ಹಲವಾರು ತರಹದ ಪುಸ್ತಕಗಳನ್ನು ಓದಬಹುದಾಗಿ. ಕಾಟೂìನ್‌ ಪುಸ್ತಕಗಳು, ಪಂಚತಂತ್ರ ಕಥೆಗಳು, ಕನ್ನಡ ಸಾಹಿತ್ಯ ಪುಸ್ತಕಗಳು ಸೇರಿದಂತೆ ಸುಮಾರು 221 ಕನ್ನಡ ಪುಸ್ತಕ ಸಹಿತ ಒಂದು ಸಾವಿರ ಪುಸ್ತಕಗಳು, ಮಕ್ಕಳಲ್ಲಿ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಲು ಇಂಗ್ಲಿಷ್‌ ಹಾಗೂ ಕನ್ನಡ ದಿನಪತ್ರಿಕೆಗಳು ಸಹ ಸಂಚಾರಿ ಗ್ರಂಥಾಲಯದಲ್ಲಿದ್ದು ಈಗ ಓದಿಗೆ ಲಭ್ಯವಿವೆ. ಪ್ರಾಥಮಿಕ ಶಾಲೆಗಳ ಮಕ್ಕಳನ್ನು ಗುರಿಯಾಗಿಸಿಕೊಂಡು ಈ ಗ್ರಂಥಾಲಯವನ್ನು ರೂಪಿಸಿದ್ದು, ಅತೀ ಹೆಚ್ಚು ಸಮಯವನ್ನು ಗ್ರಂಥಾಲಯದಲ್ಲಿ ಕಳೆದವರಿಗೆ ವಿಶೇಷ ಗೌರವವಾಗಿ ಪ್ರಮಾಣಪತ್ರವನ್ನು ಸಹ ಇಲ್ಲಿ ನೀಡಲಾಗುತ್ತದೆ.

ಅದೇ ರೀತಿ ಭೇಟಿ ನೀಡಿ ಪ್ರತಿಯೊಬ್ಬ ಓದುಗನಿಗೂ ರಶೀದಿಯನ್ನು ಕೊಡಲಾಗುತ್ತದೆ. ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿನ ಮಕ್ಕಳನ್ನು ಉದ್ದೇಶವಾಗಿಟ್ಟುಕೊಂಡು ಜಿಲ್ಲಾದ್ಯಂತ ಸಂಚಾರಿ ಗ್ರಂಥಾಲಯ ಬಸ್ಸು ಸಂಚರಿಸುತ್ತಿದೆ. ಉದ್ಯಾನದಂತಹ ಸಾರ್ವಜನಿಕ ಸ್ಥಳಗಳ ಬಳಿ ಈ ವ್ಯವಸ್ಥೆ ಒದಗಿಸುವುದರಿಂದ ಆಡಿ ದಣಿದ ಮಕ್ಕಳು ವಿಶ್ರಾಂತಿಗಾಗಿ ಬಂದು ಪುಸ್ತಕಗಳತ್ತ ಕಣ್ಣಾಡಿಸಿ ಓದಲು ಮನಸ್ಸು ಮಾಡುತ್ತಾರೆ. ಮಕ್ಕಳೊಂದಿಗೆ ಬರುವ ಪೋಷಕರು, ಹಿರಿಯರು ಕೂಡ ಪುಸ್ತಕಗಳನ್ನು ತೆಗೆದು ಓದುತ್ತಾರೆ. ಈ ಮೂಲಕ ಈ ಯೋಜನೆ ಸಫಲವಾಗುತ್ತಿರುವುದು ಸಂತೋಷದ ಸಂಗತಿ.

 ವಿಜಯಕುಮಾರ್‌ ಹೀರೇಮಠ ಗದಗ

ಟಾಪ್ ನ್ಯೂಸ್

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

BANDARAKERI

Udupi: ಭಕ್ತರಲ್ಲಿಗೆ ಭಾಗವತ ಭಂಡಾರಕೇರಿ ಶ್ರೀಗಳ ಸಾಧನೆ

Payan

Movie Release: ರಾಜ್ಯಾದ್ಯಂತ “ಪಯಣ್‌’ ಸಿನೆಮಾ ಸೆ.20ರಂದು ತೆರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

25-uv-fusion

UV Fusion: ಬದುಕೆಂಬ ಪುಸ್ತಕದ ಪ್ರತಿ ಪುಟವೂ ಸುಂದರ

24-uv-fusion

UV Fusion: ಬಾಂಧವ್ಯದ ಬಂಧವನ್ನು ಬೆಸೆಯೋಣ…

23-uv-fusion

UV Fusion: ಮಾತಿನ ಅರ್ಥ ಒಳಾರ್ಥಗಳು..!

21-uv-fusion

UV Fusion: ಹೊತ್ತು ಮಾಗುವ ಮುನ್ನ ನಿಮ್ಮನ್ನು ನೀವು ಅರಿಯಿರಿ!

20-uv-fusion

UV Fusion: ಬದುಕಬೇಕು ಅಂತರಾಳ ಒಪ್ಪುವಂತೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.