Bollywood: ‘ಪಠಾಣ್ʼ ನಿರ್ದೇಶಕ ಸಿದ್ದಾರ್ಥ್ ಜತೆ ಕೈಜೋಡಿಸಲಿದ್ದಾರೆ ʼಕಿಲಾಡಿʼ ಅಕ್ಷಯ್
Team Udayavani, Aug 21, 2024, 5:28 PM IST
ಮುಂಬಯಿ: ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್(Akshay Kumar) ಅವರ ಸಿನಿಮಾಗಳು ಸತತ ಸೋಲು ಕಾಣುತ್ತಿದೆ. ಇತ್ತೀಚೆಗೆ ಬಂದ ʼಖೇಲ್ ಖೇಲ್ ಮೇʼ (Khel Khel Mein) ಕೂಡ ಕೆಲಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿದೆ.
ಅಕ್ಷಯ್ ಕುಮಾರ್ ಒಂದು ದೊಡ್ಡ ಗೆಲುವು ಕಾಣದೆ ವರ್ಷಗಳೇ ಕಳೆದಿದೆ. ಅವರ ಯಾವುದೇ ಸಿನಿಮಾಗಳು ಹಿಟ್ ಲಿಸ್ಟ್ ಗೆ ಸೇರುತ್ತಿಲ್ಲ. ಬಾಲಿವುಡ್ ನ ಖ್ಯಾತ ನಿರ್ದೇಶಕರೊಬ್ಬರು ಅಕ್ಷಯ್ ಕುಮಾರ್ ಅವರ ಸಿನಿಮಾಕ್ಕೆ ಬಂಡವಾಳ ಹಾಕಲಿದ್ದು, ಇದು ಅಕ್ಷಯ್ ಅವರಿಗೆ ದೊಡ್ಡ ಬ್ರೇಕ್ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಬಾಲಿವುಡ್ ನಲ್ಲಿ ʼಬ್ಯಾಂಗ್ ಬ್ಯಾಂಗ್ʼ, ʼವಾರ್ʼ, ʼಪಠಾಣ್ʼ ಮತ್ತು ʼಫೈಟರ್ʼ ನಂತಹ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಸಿದ್ದಾರ್ಥ್ ಆನಂದ್ (Siddharth Anand) ತಮ್ಮ ಪ್ರೊಡಕ್ಷನ್ ಹೌಸ್ ʼಮಾರ್ಫ್ಲಿಕ್ಸ್ʼ ನಡಿಯಲ್ಲಿ 10 ಸಿನಿಮಾಗಳನ್ನು ನಿರ್ಮಾಣ ಮಾಡಲು ಸಿದ್ದರಾಗಿದ್ದು, ಇದರಲ್ಲಿ ಅಕ್ಷಯ್ ಕುಮಾರ್ ಅವರ ಒಂದು ಸಿನಿಮಾನೂ ಸೇರಿದೆ ಎಂದು ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ʼಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈʼ, ʼಡರ್ಟಿ ಪಿಕ್ಚರ್.. ನಂತಹ ಸಿನಿಮಾಗಳನ್ನು ಮಾಡಿರುವ ನಿರ್ದೇಶಕ ಮಿಲನ್ ಲುಥ್ರಿಯಾ (Milan Luthria) ಅಕ್ಷಯ್ ಕುಮಾರ್ ಅವರ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದು, ಇದನ್ನು ಸಿದ್ದಾರ್ಥ್ ಆನಂದ್ ಅವರ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಲಿದೆ ಎಂದು ವರದಿ ತಿಳಿಸಿದೆ.
ಇದೊಂದು ಆ್ಯಕ್ಷನ್ ಮೂವಿ ಆಗಲಿದ್ದು ಅಕ್ಷಯ್ ಕುಮಾರ್ ಹಿಂದೆಂದೂ ಕಾಣದ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.
ಸಿದ್ದಾರ್ಥ್ ಆನಂದ್ ಅವರ ಮಾರ್ಫ್ಲಿಕ್ಸ್, ಹಲವು ಬಾಲಿವುಡ್ ಸಿನಿಮಾಗಳಿಗೆ ಬಂಡವಾಳ ಹಾಕಲಿದ್ದು, ಸುಜೋಯ್ ಘೋಷ್ ನಿರ್ದೇಶನದ, ಶಾರುಖ್, ಸುಹಾನಾ, ಅಭಿಷೇಕ್ ಬಚ್ಚನ್ ಅಚರ ʼಕಿಂಗ್ʼ(KING Movie), ಸೈಫ್ ಅಲಿ ಖಾನ್ ಮತ್ತು ಜೈದೀಪ್ ಅಹ್ಲಾವತ್ ಅವರೊಂದಿಗೆ ರಾಬಿ ಗ್ರೆವಾಲ್ ನಿರ್ದೇಶನ ಮಾಡುತ್ತಿರುವ ʼಜ್ಯುವೆಲ್ ಥೀಫ್ (Jewel Thief),ʼಹೃತಿಕ್ ರೋಷನ್ ಅವರ ʼಕ್ರಿಶ್ -4ʼ (Krrish 4) ಸೇರಿದಂತೆ ಹಲವು ಸಿನಿಮಾಗಳ ಬಂಡವಾಳ ಹಾಕಲಿದೆ.
ಇತ್ತ ಅಕ್ಷಯ್ ಕುಮಾರ್ ʼಜಾಲಿ ಎಲ್ ಎಲ್ ಬಿ-3(Jolly LLB 3), ʼವೆಲ್ ಕಂ ಟು ದಿ ಜಂಗಲ್ʼ (Welcome To The Jungle), ʼಹೌಸ್ ಫುಲ್ -5ʼ (Housefull 5 ) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhoom 4: ಬಾಲಿವುಡ್ ʼಧೂಮ್-4ʼ ನಲ್ಲಿ ಸೌತ್ ಸ್ಟಾರ್ ಸೂರ್ಯ ವಿಲನ್?
Tumbbad 2: ಪ್ರಳಯ್ ಆಯೇಗಾ.. ಹಾರಾರ್ ಥ್ರಿಲ್ಲರ್ ‘ತುಂಬಾಡ್ʼ ಸೀಕ್ವೆಲ್ ಅನೌನ್ಸ್
Jawan Movie: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ಸೂಪರ್ ಹಿಟ್ ʼಜವಾನ್ʼ
Actor James Hollcroft: ಕೆಲ ದಿನಗಳ ಹಿಂದಷ್ಟೇ ನಾಪತ್ತೆಯಾಗಿದ್ದ ನಟ ಶವವಾಗಿ ಪತ್ತೆ
Anil Mehta: ಮಲೈಕಾ ಆರೋರಾ ತಂದೆ ಆ*ತ್ಮಹ*ತ್ಯೆ; ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ?
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.