CM Siddaramaiah ವಿರುದ್ಧ ಲೋಕಾಯುಕ್ತದಲ್ಲಿ 61 ಪ್ರಕರಣ: ಎಚ್.ಡಿ.ಕುಮಾರಸ್ವಾಮಿ
50 ಪ್ರಕರಣ ವಿಚಾರಣ ಹಂತಕ್ಕೇ ಬಂದಿಲ್ಲ, 2018ರಲ್ಲಿ ನನ್ನ ವಿರುದ್ಧ ಇದ್ದ ಪ್ರಕರಣಗಳ ಮುಚ್ಚಿ ಹಾಕಿಸಲು ಸಾಧ್ಯವಿರಲಿಲ್ಲವೇ?
Team Udayavani, Aug 22, 2024, 6:35 AM IST
ಬೆಂಗಳೂರು: ಮುಡಾ ಹಗರಣದಲ್ಲಿ ಸಿಲುಕಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನಾವು ಹೇಳಿದ್ದೇವಾ? ಇದು ಸರಕಾರ ಮಾಡಿಕೊಂಡಿರುವ ಸ್ವಯಂಕೃತ ಅಪರಾಧ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹರಿಹಾಯ್ದರು.
ಪಕ್ಷದ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2014ರಿಂದ ಇದುವರೆಗೆ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ, ಕರ್ತವ್ಯಲೋಪ ಸೇರಿ ಲೋಕಾಯುಕ್ತದಲ್ಲಿ 61 ಪ್ರಕರಣಗಳಿವೆ. ಈ ಪೈಕಿ 50 ಪ್ರಕರಣಗಳು ತನಿಖೆ ಹಂತಕ್ಕೇ ಬಂದಿಲ್ಲ ಎಂದರು. ಹಿಂದೆ ಇದ್ದ ಲೋಕಾಯುಕ್ತ ನ್ಯಾ| ವಿಶ್ವನಾಥ ಶೆಟ್ಟಿ ಅವರೇ ಒಪ್ಪಿಕೊಂಡಿದ್ದಂತೆ ಸಂಸ್ಥೆಯ ಮುಂದೆ 7 ಸಾವಿರ ಪ್ರಕರಣಗಳಿದ್ದು ಜ್ಯೇಷ್ಠತೆ ಆಧಾರದ ಮೇಲೆ ಇತ್ಯರ್ಥ ಮಾಡಲಾಗುತ್ತಿದೆ. ವಿಳಂಬ ಮಾಡುತ್ತಿಲ್ಲ ಎಂದಿ
ದ್ದರು. ಅನಂತರ ಭಾಸ್ಕರ ರಾವ್ ಎಂಬುವರನ್ನು ಕೂರಿಸಿ ಲೋಕಾಯುಕ್ತದ ನರ ಕಿತ್ತು ಎಸಿಬಿ ಮೂಲಕ ತಮ್ಮ ವಿರುದ್ಧದ ಪ್ರಕರಣಗಳನ್ನೆಲ್ಲ ಮುಚ್ಚಿ ಹಾಕಿಕೊಂಡರು.
ಇಂತಹವರು ನನ್ನ ಜೀವನ ತೆರೆದ ಪುಸ್ತಕ, ಹಿಂದುಳಿದ ವರ್ಗದ ನಾಯಕ ಎಂಬ ಕಾರಣಕ್ಕೆ ಹೊಟ್ಟೆ ಕಿಚ್ಚು ಎಂದೆಲ್ಲ ಭಜನೆ ಮಾಡುತ್ತಿದ್ದಾರೆ. ನೀವು ಸರಿ ಇದ್ದಿದ್ದರೆ ವಿರೋಧ ಪಕ್ಷ ಏನು ಮಾಡಲು ಸಾಧ್ಯ? 2018ರಲ್ಲಿ ನನ್ನ ವಿರುದ್ಧ ಇದ್ದ ಪ್ರಕರಣಗಳನ್ನು ಮುಚ್ಚಿ ಹಾಕಿಸಲು ಸಾಧ್ಯವಿರಲಿಲ್ಲವೇ? ನಾನು ಮನಸ್ಸು ಮಾಡಿದ್ದರೆ 5 ನಿಮಿಷದಲ್ಲಿ ಕ್ಲೋಸ್ ಮಾಡಿಸುತ್ತಿದ್ದೆ. ಆದರೆ, ನಾನು ನಿಮ್ಮಂತೆ ಅಲ್ಲ. ನನ್ನನ್ನೂ ಒಳಗೊಂಡಂತೆ ತನಿಖೆಗೆ ಆದೇಶಿಸಿಕೊಂಡಿದ್ದವನು ಎಂದು ಹೇಳಿದರು.
ಸಿಎಂ ಕಚೇರಿಯಿಂದಲೇ ಮಾಹಿತಿ
ಅಂದು ನಿವೃತ್ತ ಐಪಿಎಸ್ ಅಧಿಕಾರಿ (ಕೆಂಪಯ್ಯ)ಯನ್ನು ಇಟ್ಟುಕೊಂಡು ಜೈಲಿಗೆ ಕಳುಹಿಸಲು ನೋಡಿದ ಸಿದ್ದರಾಮಯ್ಯ ಇಂದು ಕಾನೂನು ಸಲಹೆಗಾರ (ಪೊನ್ನಣ್ಣ)ನನ್ನು ಇಟ್ಟುಕೊಂಡು ಅದೇ ಪ್ರಯತ್ನ ಮಾಡುತ್ತಿದ್ದಾರೆ. ನೂರು ಸಿದ್ದರಾಮಯ್ಯ ಬಂದರೂ ಅದು ಸಾಧ್ಯವಿಲ್ಲ. ಪೊನ್ನಣ್ಣ, ನೀನೊಬ್ಬನೇ ಬುದ್ಧಿವಂತ ಅಲ್ಲ. ನಿನಗೊಬ್ಬನಿಗೇ ಕಾನೂನು ತಿಳಿದಿರುವುದಲ್ಲ. ರಾತ್ರಿಯೆಲ್ಲ ಕೂತು ಏನು ಚರ್ಚಿಸಿದ್ದೀರಿ ಗೊತ್ತಿದೆ. ಸಿಎಂ ಕಚೇರಿಯಿಂದಲೇ ನನಗೆ ಮಾಹಿತಿ ಕೊಡುವವರಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಅಷ್ಟು ಸುಲಭವಾಗಿ ಬಿಡಲ್ಲ
ಬೇಲೆಕೇರಿ ಬಂದರಿನ ಅದಿರು ಕದ್ದು ಮಾರಿದವರ ಮೇಲೆ ಸಿಬಿಐ ಚಾರ್ಜ್ಶೀಟ್ ಹಾಕಿತ್ತು. 2015ರಲ್ಲಿ ಅಂತಹ 105 ಅರ್ಜಿಗಳ ಪೈಕಿ ಸಿದ್ದರಾಮಯ್ಯ ಎಷ್ಟಕ್ಕೆ ಗಣಿಗಾರಿಕೆ ನಡೆಸಲು ಅನುಮತಿ ಕೊಟ್ಟಿಲ್ಲ ಎಂದು ದಾಖಲೆಗಳನ್ನು ಪ್ರದರ್ಶಿಸಿ ಒಳಗಿಟ್ಟುಕೊಂಡ ಕುಮಾರಸ್ವಾಮಿ, ಇನ್ನೂ ಸಮಯ ಇದೆ. ಆತುರ ಇಲ್ಲ.
ಎಲ್ಲವನ್ನೂ ಈಗಲೇ ಬಹಿರಂಗಗೊಳಿಸಿದರೆ ದಾಖಲೆ ತಿದ್ದುವ ನಿಪುಣರಿದ್ದಾರೆ. ನಾನೂ ಸೇಫ್ ಗೇಮ್ ಆಡಬೇಕಿದೆ. ಅಷ್ಟಿಲ್ಲದಿದ್ದರೆ, ಬೈರತಿ ಸುರೇಶ್ ಹೆಲಿಕಾಪ್ಟರ್ನಲ್ಲಿ ತಂದ ದಾಖಲೆಗಳೇನಾದವು? ಎಲ್ಲಿಗೆ ಹೋದವು? ಕಪ್ಪು ಚುಕ್ಕೆ ಇಲ್ಲವಂತೆ. ಅಷ್ಟು ಸುಲಭವಾಗಿ ಬಿಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ನೇರ ಸವಾಲು ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತಾಯಿ, ಅಕ್ಕ
Dandeli: ನಗರದಲ್ಲಿ ಸರಣಿ ಕಳ್ಳತನ… ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು, ಪೊಲೀಸರ ಭೇಟಿ
Munirathna: ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ ಮಾಡಿದ ಮಹಿಳೆ; ಎಫ್ಐಆರ್
Traffic: ಆಗುಂಬೆ ಘಾಟಿಯಲ್ಲಿ ವಾಹನ ಬ್ರೇಕ್ ಫೇಲ್, ಟ್ರಾಫಿಕ್ ನಲ್ಲಿ ಸಿಲುಕಿದ ಆಂಬ್ಯುಲೆನ್ಸ್
Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.