Hebri-Malpe ಚತುಷ್ಪಥ ಹೆದ್ದಾರಿ: 3ನೇ ಬಾರಿ 3ಡಿ ನೋಟಿಫಿಕೇಶನ್
Team Udayavani, Aug 22, 2024, 6:25 AM IST
ಉಡುಪಿ: ಹೆಬ್ರಿ-ಮಲ್ಪೆ 169ಎ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಭಾಗವಾಗಿ ನಡೆಯುತ್ತಿರುವ ಹೆಬ್ರಿ-ಆತ್ರಾಡಿ, ಮಲ್ಪೆ-ಕರಾವಳಿ ಬೈಪಾಸ್ ಕಾಮಗಾರಿ ಭೂಸ್ವಾಧೀನ ಪ್ರಕ್ರಿಯೆ ಸಂಬಂಧಿಸಿ ಈಗ 3ನೇ ಬಾರಿ 3ಡಿ ನೋಟಿಫಿಕೇಶನ್ ಹೊರಡಿಸಲಾಗಿದೆ.
ಭೂಸ್ವಾಧೀನ ಪ್ರಕ್ರಿಯೆ ಸಂಬಂಧಿಸಿ 2022ರಿಂದ ಹೊರಡಿಸುತ್ತಿರುವ 3ನೇ ನೋಟಿಫಿಕೇಶನ್ ಇದಾಗಿದೆ. ಇನ್ನು 10 ದಿನಗಳ ಒಳಗೆ ಕೊನೆಯ 4ನೇ ನೋಟಿಫಿಕೇಶನ್ ಹೊರಡಿಸಲಾಗುವುದು ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ. ಈ ಅಧಿಸೂಚನೆ ಪ್ರಕಾರ ಪೆರ್ಡೂರು, ಹಿರಿಯಡಕ, ಕರಾವಳಿ ಬೈಪಾಸ್-ಮಲ್ಪೆವರೆಗೂ ಭೂಸ್ವಾಧೀನ ವಿವರಗಳನ್ನು ಸರ್ವೇ ನಂಬರ್, ಭೂ ಮಾಲಕರ ವಿವರ ಸಹಿತ ತಿಳಿಸಲಾಗಿದೆ.
ಈ ಮಧ್ಯೆ ಹಲವರು ತಮ್ಮ ಆಸ್ತಿಗಳನ್ನು ಉಳಿಸಿಕೊಳ್ಳಲು ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದಾರೆ. ಈಗಾಗಲೇ ಆತ್ರಾಡಿ-ಹೆಬ್ರಿ 26 ಕಿ. ಮೀ. ರಸ್ತೆಯಲ್ಲಿ 20 ಕಿ. ಮೀ. ಪೂರ್ಣಗೊಂಡಿದೆ. ಉಳಿದಿರುವ 6 ಕಿ.ಮೀ.ಯಲ್ಲಿ ಹಿರಿಯಡಕ ಮತ್ತು ಪೆರ್ಡೂರು ಪೇಟೆ ವ್ಯಾಪ್ತಿ ಹೆಚ್ಚಿದೆ. ಈ ಭಾಗದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಕಾಮಗಾರಿ ಅರ್ಧಕ್ಕೆ ಬಾಕಿಯಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಅಧಿಕಾರವನ್ನು ಕುಂದಾಪುರ ಉಪವಿಭಾಗ ಆಯುಕ್ತರಿಗೆ ನೀಡಲಾಗಿದ್ದು, ಹಂತಹಂತವಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.
ಕರಾವಳಿ ಬೈಪಾಸ್ನಿಂದ ಮಲ್ಪೆವರೆಗಿನ ಭೂ ಸ್ವಾಧೀನ ಪ್ರಕ್ರಿಯೆ ಸಮರ್ಪಕವಾಗಿಲ್ಲ. ಪರಿಹಾರ ಪ್ರಕ್ರಿಯೆ ಸರಿಯಾಗಿಲ್ಲ ಎಂಬ ಸಂತ್ರಸ್ತರ ದೂರಿನ ಮೇರೆಗೆ ಜಿಲ್ಲಾಡಳಿತ, ಕಂದಾಯ ಇಲಾಖೆ, ಪ್ರಾಧಿಕಾರ ಜಂಟಿ ಸರ್ವೆ ನಡೆಸಿತ್ತು. ಅದರಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ.
ಪರಿಹಾರಕ್ಕೆ ಸಂಬಂಧಿಸಿ ಹೆದ್ದಾರಿ ಪರಿಹಾರ ಮಾನದಂಡದಂತೆ ಈ ಹಿಂದೆ ನಿಗದಿಪಡಿಸಿದ ಪರಿಹಾರವು ಎಲ್ಲರಿಗೂ ಸಿಗಲಿದೆ. ಬೇಡಿಕೆಯಷ್ಟು ಹೆಚ್ಚು ಪರಿಹಾರ ಸಂತ್ರಸ್ತರಿಗೆ ಸಿಗುವುದು ಕಷ್ಟಸಾಧ್ಯ ಎಂದು ಹೆದ್ದಾರಿ ಪ್ರಾಧಿಕಾರ ಅಭಿಪ್ರಾಯಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.