Kundapura ಆಸ್ಪತ್ರೆಗಿಲ್ಲ ಕ್ಯಾಂಟೀನ್‌; ರೋಗಿಗಳು, ಸಹಾಯಕರ ಪರದಾಟ

6 ವರ್ಷಗಳ ಹಿಂದೆ ತೆರವಾದದ್ದು ಮತ್ತೆ ತೆರೆದಿಲ್ಲ

Team Udayavani, Aug 22, 2024, 5:41 PM IST

7

ಕುಂದಾಪುರ: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಕಳೆದ 6 ವರ್ಷಗಳಿಂದ ಕ್ಯಾಂಟಿನ್‌ ಸೌಲಭ್ಯ ಇಲ್ಲ. ಇದರಿಂದ  ಒಳರೋಗಿಗಳು, ಅವರ ಸಹಾಯಕರು ಮತ್ತು ಹೊರರೋಗಿಗಳಾಗಿ ಬರುವವರಿಗೆ ಸಮಸ್ಯೆ ಆಗುತ್ತಿದೆ.

ಭಟ್ಕಳ, ಬ್ರಹ್ಮಾವರ, ಬೈಂದೂರು, ಹೆಬ್ರಿ ಸೇರಿದಂತೆ ಸುತ್ತಲ ಅನೇಕ ಊರುಗಳಿಂದ ಇಲ್ಲಿಗೆ ರೋಗಿಗಳು ಆಗಮಿಸುತ್ತಾರೆ. ಈ ಉಪವಿಭಾಗ ಸರಕಾರಿ ಆಸ್ಪತ್ರೆಯಲ್ಲಿ ದಿನದ 24 ಗಂಟೆಗಳ ಕಾಲವೂ ಚಿಕಿತ್ಸೆ ಲಭ್ಯವಿದೆ. ನಿತ್ಯ ಈ ಆಸ್ಪತ್ರೆಗೆ 450ಕ್ಕೂ ಹೆಚ್ಚು ಹೊರ ಮತ್ತು 110ರಷ್ಟು ಒಳ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಾರೆ. ಹೆರಿಗೆಯಲ್ಲೂ ರಾಜ್ಯಮಟ್ಟದಲ್ಲಿ ಅತ್ಯಧಿಕ ಹೆರಿಗೆಯಾದ ಆಸ್ಪತ್ರೆ ಎಂದು ಗುರುತಿಸಲ್ಪಟ್ಟಿದೆ.

2018ರವರೆಗೆ ಈ ಆಸ್ಪತ್ರೆ ವಠಾರದಲ್ಲಿ  ಇದ್ದ ಕ್ಯಾಂಟೀನನ್ನು ಯಾವುದೋ ಕಾರಣಕ್ಕೆ ತೆರವು ಮಾಡಿದ್ದು, ಬಳಿಕ ಪುನರಾರಂಭ ಆಗಲಿಲ್ಲ. ತಾಯಿ ಮಕ್ಕಳ ಆಸ್ಪತ್ರೆಗೆ ಜಿ.ಶಂಕರ್‌ ಅವರಿಂದ 5 ಕೋ.ರೂ. ವೆಚ್ಚದಲ್ಲಿ ಉಚಿತವಾಗಿ ಕಟ್ಟಡ ನಿರ್ಮಾಣವಾಗಿದೆ. ಈ ಕಟ್ಟಡದಲ್ಲಿ ಕೂಡಾ ಕ್ಯಾಂಟಿನ್‌ ಸೌಲಭ್ಯವನ್ನು ಆಸ್ಪತ್ರೆ ಆಡಳಿತ ಮಾಡಲೇ ಇಲ್ಲ. ಈಗಲೂ ಆಸ್ಪತ್ರೆಯ ಆಹಾರ ವಿಭಾಗ ಹೊರತಾದರೆ ಹಣ ಪಾವತಿಸಿ ಆಹಾರ ಖರೀದಿಗೆ ಆಸ್ಪತ್ರೆ ವಠಾರದಲ್ಲಿ ವ್ಯವಸ್ಥೆ ಇಲ್ಲ.

ಕ್ಯಾಂಟೀನ್‌ಗೆ ಜಾಗ ಇದೆ
ಹಳೆ ಕ್ಯಾಂಟೀನ್‌ ಇದ್ದ ಜಾಗದಲ್ಲಿ ಈಗ ಹಾಲಿನ ಅಂಗಡಿ ಇದೆ. ಆದರೆ ಪಾರ್ಕಿಂಗ್‌ ತಾಣ ಸೇರಿದಂತೆ ಆಸ್ಪತ್ರೆಯ ಒಳಗೆ ಹಾಗೂ ಹೊರಗೆ ಪ್ರತ್ಯೇಕವಾದ ವಿಶಾಲ ಜಾಗವಿದೆ. ಈ ಹಿಂದೆ ಆಸ್ಪತ್ರೆಯೊಳಗೆ ಕ್ಯಾಂಟೀನ್‌ ರಚನೆ ಪ್ರಸ್ತಾವ‌ ಬಂದಾಗ ಆರೋಗ್ಯದ ಹಿತದೃಷ್ಟಿ, ಸ್ವತ್ಛತೆಯ ದೃಷ್ಟಿಯಿಂದ ಒಳಗೆ ಅವಕಾಶ ನೀಡಿರಲಿಲ್ಲ.

ಪ್ರಯತ್ನ ಇದೆ
ಆಸ್ಪತ್ರೆ ವಠಾರದಲ್ಲಿ ಕ್ಯಾಂಟೀನ್‌ ಬೇಕೆಂಬ ಬೇಡಿಕೆ ಇದೆ. ಪ್ರಸ್ತುತ ನಾನು ಅಧಿಕಾರ ವಹಿಸಿ ಹೆಚ್ಚು ಸಮಯ ಆಗಿಲ್ಲ. ಒಂದೊಂದೇ ಕೆಲಸ ಕಾರ್ಯಗಳ ಕುರಿತು ಗಮನ ಹರಿಸಿ ಕ್ಯಾಂಟೀನ್‌ ಸೌಕರ್ಯ ಮಾಡುವ ಪ್ರಯತ್ನ ನಡೆಯಲಿದೆ.
ಡಾ| ಚಂದ್ರ ಮರಕಾಲ, ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ, ಕುಂದಾಪುರ

ಯಾಕೆ ಬೇಕು ಕ್ಯಾಂಟೀನ್‌?
ರೋಗಿಗಳಿಗೆ ಇಲ್ಲಿ ಉಚಿತ ಆಹಾರ ನೀಡುತ್ತಾರಾದರೂ  ಅವರ ಜತೆಗೆ ಇರುವವರಿಗೆ ಆಹಾರ ಬೇಕು. ಅನೇಕರಿಗೆ ಆಸ್ಪತ್ರೆ ಆಹಾರ ಹೊರತಾದ ಆಹಾರದ ಅಗತ್ಯವಿರುತ್ತದೆ.

ಜ ಬೆಳಗ್ಗೆ 4 ಗಂಟೆಯಿಂದ ನಗರದಲ್ಲಿ ರೋಗಿಗಳ ಜತೆ ಬಂದವರು ಬಿಸಿನೀರು, ಚಹಾಗಾಗಿ ಅಲೆಯುತ್ತಾರೆ.

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

1

Amparu: ರೆಸ್ಟೋರೆಂಟ್‌ನಲ್ಲಿ ಹೊಡೆದಾಟ

sand

Kundapura: ಮರಳು ಅಕ್ರಮ ಸಾಗಾಟ ಪತ್ತೆ

4

Kundapura: ಕೆಲಸವಿಲ್ಲದೆ ಜುಗುಪ್ಸೆ: ಯುವಕ ಆತ್ಮಹತ್ಯೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.