Wandse: ಕೊಚ್ಚಿ ಹೋದ ಮರದ ದಿಣ್ಣೆ, ಮತ್ತೆ ಬಂದ್ದದ್ದೂ ದಿಣ್ಣೆಯೇ!
ನೈಕಂಬ್ಳಿ -ಹಳಿಯಮ್ಮ ದೇಗುಲ; ಕಿರು ಸೇತುವೆಗೆ ಜನರಿಂದ ಬೇಡಿಕೆ
Team Udayavani, Aug 22, 2024, 5:53 PM IST
ವಂಡ್ಸೆ: ನೈಕಂಬ್ಳಿ -ಹಳಿಯಮ್ಮ ದೇಗುಲ ಹಾಗೂ ಮಹಾಲಿಂಗೇಶ್ವರ ದೇಗುಲಗಳ ನಡುವಿನ ಗ್ರಾಮಸ್ಥರ ನಿತ್ಯಸಂಚಾರದ ಸಂಪರ್ಕ ಕೊಂಡಿಯಾಗಿದ್ದ ಮರದ ದಿಣ್ಣೆಯ ಕಾಲುಸಂಕ ಭಾರೀ ಮಳೆಯ ರಭಸಕ್ಕೆ ಕೊಚ್ಚಿಹೋಗಿದ್ದು, ಇದೀಗ ತುರ್ತು ತಾತ್ಕಾಲಿಕ ನೆಲೆಯಲ್ಲಿ ಮರದ ದಿಣ್ಣೆಯ ಕಾಲುಸಂಕ ನಿರ್ಮಾಣವಾಗಿದೆ. ಆದರೆ, ಇಲ್ಲಿನ ಜನರು ಕಿರುಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ನೈಕಂಬ್ಳಿ, ಮಾರಣಕಟ್ಟೆ ಹಾಗೂ ಮಹಾಲಿಂಗೇಶ್ವರ ದೇಗುಲಕ್ಕೆ ಸಾಗುವ ಮರದ ದಿಣ್ಣೆ ಕೊಚ್ಚಿ ಹೋದ ಬಳಿಕ ಗ್ರಾ.ಪಂ. ಇರುವ ಸಂಪನ್ಮೂಲಗಳನ್ನು ಕ್ರೋಡೀಕರಿಸಿ, ಗ್ರಾಮಸ್ಥರ ಸಹಕಾರದೊಡನೆ ಇದೀಗ ತಾತ್ಕಾಲಿಕ ಕಾಲುಸಂಕ ನಿರ್ಮಿಸಿದೆ.
ಗ್ರಾಮಸ್ಥರು ಕಿರುಸೇತುವೆಗೆ ಆಗ್ರಹಿಸುತ್ತಿದ್ದರೂ ಪಂಚಾಯತ್ಗೆ ಒಂದು ಕೋಟಿ ವೆಚ್ಚದ ನಿರ್ಮಾಣ ಕಷ್ಟಸಾಧ್ಯವಾಗಿದೆ. ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿಯವರ ಶಿಫಾರಸಿನಂತೆ ಈ ಹಿಂದೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅನುದಾನ ಬಿಡುಗಡೆಗೆ ಶಿಫಾರಸು ಮಾಡಿದ್ದರು. ಆದರೆ, ಅನುದಾನ ಬಿಡುಗಡೆಯಾಗದೆ ಯೋಜನೆ ಕಡತದಲ್ಲೇ ಬಾಕಿ ಉಳಿದಿದೆ. ಈಗ ಗ್ರಾಮಸ್ಥರು ಸರಕಾರ ಮತ್ತು ಸಂಸದರ ನೆರವು ಕೋರಿದ್ದಾರೆ.
125 ಮನೆ, ಶಾಲೆ, ಅಂಗನವಾಡಿಗಳಿರುವ ಪ್ರದೇಶ
ಪರಿಸರದಲ್ಲಿ 125ಕ್ಕೂ ಮಿಕ್ಕಿ ಮನೆಗಳಿದ್ದು, ಸರಕಾರಿ ಹಿ.ಪ್ರಾ. ಶಾಲೆ ಸಹಿತ ಅಂಗನವಾಡಿ ಶಾಲೆ ಕೂಡ ಇದೆ. ಗ್ರಾಮಸ್ಥರು ವಂಡ್ಸೆ ಹಾಗೂ ಕೊಲ್ಲೂರಿಗೆ ತೆರಳಲು ಈ ಮಾರ್ಗವನ್ನೇ ಅವಲಂಬಿಸಿದ್ದಾರೆ.
ಸಂಪನ್ಮೂಲ ಒದಗಿಸಿದಲ್ಲಿ ಕಿರುಸೇತುವೆ
ಚಿತ್ತೂರು ಗ್ರಾ.ಪಂ.ನಲ್ಲಿ ಸಂಪನ್ಮೂಲದ ಕೊರತೆ ಇದೆ. ರಾಜ್ಯ ಸರಕಾರ, ಜನಪ್ರತಿನಿಧಿಗಳು ಸಂಪನ್ಮೂಲ ಒದಗಿಸಿದಲ್ಲಿ ಕಿರುಸೇತುವೆ ನಿರ್ಮಿಸಬಹುದು. ಈ ದಿಸೆಯಲ್ಲಿ ಗ್ರಾಮಸ್ಥರ ಮನವಿಗೊಂದು ಶಾಶ್ವತ ಪರಿಹಾರ ಒದಗಿಸಲು ಇಲಾಖೆ ಹಾಗೂ ಸಚಿವರು ಹೆಚ್ಚಿನ ಕಾಳಜಿ ವಹಿಸಿ ಶ್ರಮಿಸುವಂತಾಗಲಿ.
– ರವಿರಾಜ್ ಶೆಟ್ಟಿ, ಅಧ್ಯಕ್ಷರು, ಚಿತ್ತೂರು ಗ್ರಾ.ಪಂ.
-ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!
Katapady:ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಾಹನ
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?
Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್
Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!
ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು
Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.