Modi ಅವರ ದೇಹ ಭಾಷೆ, ಆತ್ಮವಿಶ್ವಾಸದಲ್ಲಿ ಭಾರೀ ಬದಲಾವಣೆಯಾಗಿದೆ: ರಾಹುಲ್ ಗಾಂಧಿ
Team Udayavani, Aug 22, 2024, 9:09 PM IST
ಜಮ್ಮು: ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ದೇಹ ಭಾಷೆ, ಆತ್ಮವಿಶ್ವಾಸದಲ್ಲಿ ಭಾರೀ ಬದಲಾವಣೆಯಾಗಿದೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ.
ಗುರುವಾರ(ಆ 21)ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಹುಲ್, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ‘ಚುನಾವಣಾ ಫಲಿತಾಂಶದ ನಂತರ ಮೋದಿ ಅವರ ದೇಹ ಭಾಷೆ ಮತ್ತು ಆತ್ಮವಿಶ್ವಾಸವು ತೀವ್ರವಾಗಿ ಬದಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿಯವರ ವಿಶ್ವಾಸವನ್ನು ಅಲುಗಾಡಿಸಿದ್ದಾರೆ. ಅವರು ಚುನಾವಣೆಯ ಮೊದಲು ಪ್ರದರ್ಶಿಸಿದ ಆತ್ಮ ವಿಶ್ವಾಸದ ದೇಹ ಭಾಷೆಯನ್ನು ಕಳೆದುಕೊಂಡಿದ್ದಾರೆ ಎಂದರು.
ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇವೆ. ನನ್ನ ಕುಟುಂಬದ ಹಿನ್ನೆಲೆ ನಿಮ್ಮ ರಾಜ್ಯದ್ದಾಗಿದೆ. ದೆಹಲಿಯಲ್ಲಿ ನಾನು ನಿಮ್ಮ ಸಿಪಾಯಿ ಎಂದು ಪರಿಗಣಿಸಿ. ನನ್ನ ಮನೆಯ ಬಾಗಿಲು ಕಾಂಗ್ರೆಸ್ನ ಸಿಂಹಗಳು(ಪಕ್ಷದ ಕಾರ್ಯಕರ್ತರಿಗೆ) ಯಾವಾಗಲೂ ತೆರೆದಿರುತ್ತದೆ. ನೀವು ನನಗೆ ಆದೇಶವನ್ನು ಮಾತ್ರ ನೀಡಬೇಕು ಮತ್ತು ನಾನು ನಿಮ್ಮ ಮುಂದೆ ಹಾಜರಿರುತ್ತೇನೆ” ಎಂದರು.
ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರ ಹೆಸರು ಹೇಳದೆ ಪಕ್ಷದ ಕಾರ್ಯಕರ್ತರಿಗೆ “ಕಷ್ಟದ ಸಮಯ ಬಂದಾಗ ಮತ್ತು ನಿಮ್ಮ ಮತ್ತು ನಿಮ್ಮ ಸಿದ್ಧಾಂತದ ಮೇಲೆ ದಾಳಿ ನಡೆದಾಗ, ನೀವು ಇನ್ನೂ ನೆಲದ ಮೇಲೆ ಹೋರಾಡಿ, ಧ್ವಜವನ್ನು ಹಾರಿಸಿದ್ದೀರಿ. ಹಲವಾರು ಜನರು ಧ್ವಜವನ್ನು ಎಸೆದು ಓಡಿಹೋದರು. ನೀವು ಓಡಿಹೋಗಲಿಲ್ಲ. ಗುಂಡುಗಳು, ಕೋಲುಗಳು ಮತ್ತು ನಿಂದನೆಗಳನ್ನು ಎದುರಿಸಿದ್ದೀರಿ. ನಿಮ್ಮ ನೆಲದಲ್ಲಿ ದೃಢವಾಗಿ ನಿಂತಿದ್ದೀರಿ. ಹಾಗಾಗಿ ನಾನು ನಿಮ್ಮನ್ನು ಕಾಂಗ್ರೆಸ್ಸಿನ ಸಿಂಹಗಳು ಎಂದು ಕರೆಯುತ್ತೇನೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
West Bengal: ಪ್ರವಾಹ ಪರಿಸ್ಥಿತಿ ಅವಲೋಕಿಸಲು ಹೋದ ಸಂಸದರು, ಶಾಸಕರಿದ್ದ ದೋಣಿ ಪಲ್ಟಿ
ಪ್ರತೀ ಪೇಜರ್ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್ನ ಮೊಸಾದ್?
Mohana Singh: ತೇಜಸ್ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್ ಆಗಿ ಮೋಹನಾ ಸಿಂಗ್ ನೇಮಕ
Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ
Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.