Alvas ಪ್ರತಿಷ್ಠಾನ – ಮಂಗಳೂರು ಟಿಐಇ ಸಂಸ್ಥೆಗಳ ನಡುವೆ ಶೈಕ್ಷಣಿಕ ಒಪ್ಪಂದ


Team Udayavani, Aug 23, 2024, 12:47 AM IST

Alvas ಪ್ರತಿಷ್ಠಾನ – ಮಂಗಳೂರು ಟಿಐಇ ಸಂಸ್ಥೆಗಳ ನಡುವೆ ಶೈಕ್ಷಣಿಕ ಒಪ್ಪಂದ

ಮೂಡುಬಿದಿರೆ: ಉದ್ಯಮ ಶೀಲತೆಯನ್ನು ಪ್ರೋತ್ಸಾಹಿಸುವ ಧ್ಯೇಯದೊಂದಿಗೆ ಮಂಗಳೂರಿನ ದಿ ಇಂಡಸ್‌ ಎಂಟ್ರಪ್ರಿನ್ಯೂರ್ (ಟಿಐಇ) ಹಾಗೂ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿವೆ.

ಇದರನ್ವಯ “ಟಿಐಇ ಎಲೈಟ್‌’ ಎಂಬ ವಿನೂತನ ಕಾರ್ಯಕ್ರಮವು ಆಳ್ವಾಸ್‌ನ ಸಂಸ್ಥೆಗಳಲ್ಲಿ 2024-25ನೇ ಸಾಲಿನಲ್ಲಿ ಅನುಷ್ಠಾನಗೊಳ್ಳಲಿದೆ. ಶೈಕ್ಷಣಿಕ ವಲಯ ಹಾಗೂ ಉದ್ಯೋಗ ಮಾರುಕಟ್ಟೆಯ ನಡುವಿನ ಅಂತರವನ್ನು ಕಡಿಮೆ ಮಾಡಿ, ವಿದ್ಯಾರ್ಥಿಗಳಿಗೆ ಔದ್ಯೋಗಿಕ ವಲಯದ ಸ್ಪಷ್ಟ ಚಿತ್ರಣವನ್ನು ಶಿಕ್ಷಣದ ಅವ ಧಿಯಲ್ಲಿ ನೀಡಲು ಈ ಒಡಂಬಡಿಕೆ ಸಹಕಾರಿಯಾಗಲಿದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರು ತಿಳಿಸಿದರು.

ಸಿಲಿಕಾನ್‌ ಬೀಚ್‌
ಕರಾವಳಿ ಭಾಗದಲ್ಲಿ ಹೆಚ್ಚಿನ ಉದ್ದಿಮೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವುದರ ಮೂಲಕ ಈ ಭಾಗವನ್ನು ಭಾರತದ ಸಿಲಿಕಾನ್‌ ಬೀಚ್‌ ಮಾಡುವ ಗುರಿಯನ್ನು ಹೊಂದಿದೆ. ಮಂಗಳೂರು ಹಾಗೂ ಉಡುಪಿ ಭಾಗದ 100ಕ್ಕೂ ಅ ಧಿಕ ಕಂಪೆನಿಗಳು ಈ ಘಟಕದ ಭಾಗವಾಗಿದ್ದು, ನ್ಯೂವಿಯಸ್‌ ಸೊಲೂಷನ್ಸ್‌, ನೋವಿಗೋ ಸೊಲೂಷನ್ಸ್‌, 99 ಗೇಮ್ಸ್‌ ಹಾಗೂ ಗ್ಲೋ ಟಚ್‌ ಟೆಕ್ನಾಲಜಿಸ್‌ ಮೊದಲಾದ ಕಂಪೆನಿಗಳು ಮೆಂಟರಿಂಗ್‌, ಶಿಕ್ಷಣ, ಜಾಗತಿಕ ಜಾಲ ಒದಗಿಸುವಿಕೆ, ಹೂಡಿಕೆ ಹಾಗೂ ಉದ್ಯಮಶೀಲತೆಗೆ ಒತ್ತನ್ನು ನೀಡುವ ಕಾರ್ಯಗಳಲ್ಲಿ ತೊಡಗಿವೆ.

ಪ್ರಯೋಜನಗಳು
ಈ ಒಡಂಬಡಿಕೆಯು ಸಂಸ್ಥೆಯ ವಿದ್ಯಾರ್ಥಿಗಳಿಗೆ ಒಂದು ಹಾಗೂ ಮೂರು ತಿಂಗಳು ಕಾಲ ಇಂಟರ್ನ್ಶಿಪ್‌ ಅವಕಾಶವನ್ನು ಕಲ್ಪಿಸಿ, ಆ ಮೂಲಕ ಉತ್ತಮ ಉದ್ಯೋಗ ಪಡೆಯಲು ಸಹಕಾರಿಯಾಗಲಿವೆ. ಟಿಐಇ ತನ್ನ ಸಂಪನ್ಮೂಲ ವ್ಯಕ್ತಿಗಳನ್ನು ಆಳ್ವಾಸ್‌ನ ವಿವಿಧ ಕಾಲೇಜುಗಳ ಅಧ್ಯಯನ ಮಂಡಳಿಯಲ್ಲಿ ನೇಮಿಸಲಿದ್ದು, ಅವರು ವಿವಿಧ ವಿಷಯಗಳ ಕುರಿತು ಸಲಹೆ, ಸೂಚನೆ ನೀಡಲಿದ್ದಾರೆ.

ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜಿನ ಇಬ್ಬರು ಆಯ್ದ ವಿದ್ಯಾರ್ಥಿಗಳ ಸ್ಟಾರ್ಟಅಪ್‌ಗಳಿಗೆ ಸೂಕ್ತ ಮಾರ್ಗದರ್ಶನ, ಸಂಪನ್ಮೂಲ ಒದಗಣೆ, ಉದ್ಯಮದ ವೃದ್ಧಿಗೆ ಉತ್ತಮ ನೆಟ್‌ವರ್ಕ್‌ಗಳನ್ನು ಒದಗಿಸಲಾಗುತ್ತದೆ. ಉದ್ಯಮಶೀಲರ ಜಾಗತಿಕ ಜಾಲಕ್ಕೆ ಪ್ರವೇಶವಾಗುವಂತೆ, ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಉದ್ಯಮಿಗಳು, ಹೂಡಿಕೆದಾರರು ಮತ್ತು ಯಶಸ್ವಿ ನಾಯಕರ ಪರಿಚಯವಾಗುವುದರ ಜತೆಗೆ ಜಾಗತಿಕ ಮಟ್ಟದ ನೆಟ್‌ವರ್ಕ್‌ ಸಾ ಧಿಸಲು ಅನುಕೂಲವಾಗುತ್ತದೆಟಿಐಇ ಕೋ ಆರ್ಡಿನೇಟರ್‌ ಅಖೀಲೇಶ್‌, ಗ್ಲೋಟಚ್‌ ಮುಖ್ಯಸ್ಥ ಪ್ರಸಾದ್‌ ಹೆಬ್ಟಾರ್‌, 99 ಗೇಮ್ಸ್‌ನ ರೋಹಿತ್‌ ಭಟ್‌, ಆಳ್ವಾಸ್‌ಎಂಜಿನಿಯರಿಂಗ್‌ ಕಾಲೇಜಿನ ಪ್ರಾಚಾರ್ಯ ಡಾ| ಪೀಟರ್‌ ಫೆರ್ನಾಂಡಿಸ್‌, ಆಳ್ವಾಸ್‌ ಕಾಲೇಜಿನ ಪ್ರಾಚಾರ್ಯ ಡಾ| ಕುರಿಯನ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.