Hangyo ಐಸ್‌ಕ್ರೀಮ್ಸ್‌ ಜತೆಗೆ ಫೇರಿಂಗ್‌ ಕ್ಯಾಪಿಟಲ್‌ 25 ಮಿ. ಡಾಲರ್‌ ಹೂಡಿಕೆ


Team Udayavani, Aug 23, 2024, 12:57 AM IST

Hangyo ಐಸ್‌ಕ್ರೀಮ್ಸ್‌ ಜತೆಗೆ ಫೇರಿಂಗ್‌ ಕ್ಯಾಪಿಟಲ್‌ 25 ಮಿ. ಡಾಲರ್‌ ಹೂಡಿಕೆ

ಮಂಗಳೂರು: ದಕ್ಷಿಣ ಭಾರತದ ಪ್ರಖ್ಯಾತ ಐಸ್‌ಕ್ರೀಮ್‌ ಬ್ರಾಂಡ್‌ ಮಂಗಳೂರಿನ ಹ್ಯಾಂಗ್ಯೋ ಐಸ್‌ಕ್ರೀಮ್ಸ… ಕಂಪೆನಿಯಲ್ಲಿ ಖಾಸಗಿ ಈಕ್ವಿಟಿ ಸಂಸ್ಥೆ ಫೇರಿಂಗ್‌ ಕ್ಯಾಪಿಟಲ್‌ 25 ಮಿಲಿಯನ್‌ ಡಾಲರ್‌ (ಸುಮಾರು 210 ಕೋ. ರೂ.) ಹೂಡಿಕೆ ಮಾಡಿದೆ. ಇದರಿಂದ ದಕ್ಷಿಣ ಭಾರತದಾದ್ಯಂತ ಮಾರುಕಟ್ಟೆ ವ್ಯಾಪ್ತಿ ವಿಸ್ತರಿಸಲು ಹ್ಯಾಂಗ್ಯೋ ಐಸ್‌ಕ್ರೀಂಗೆ ಸಹಕಾರಿಯಾಗಲಿದೆ.

ಹ್ಯಾಂಗ್ಯೋ ಐಸ್‌ಕ್ರೀಮ್ಸ್‌ ಸಂಸ್ಥೆಯ ಬಲವಾದ ಬೆಳವಣಿಗೆ ಹಾಗೂ ಮಾರುಕಟ್ಟೆ ಸಾಮರ್ಥ್ಯವನ್ನು ಗಮನದಲ್ಲಿರಿಸಿ ಫೇರಿಂಗ್‌ ಕ್ಯಾಪಿಟಲ್‌ ಈ ಹೂಡಿಕೆಗೆ ಮುಂದಾಗಿದೆ.

2003ರಲ್ಲಿ ಪೈ ಕುಟುಂಬ ಆರಂಭಿಸಿದ ಹ್ಯಾಂಗ್ಯೋ ದಕ್ಷಿಣ ಭಾರತದ ಅತಿದೊಡ್ಡ ಐಸ್‌ಕ್ರೀಮ್ಸ್‌ ಬ್ರ್ಯಾಂಡ್‌ಗಳಲ್ಲಿ ಒಂದು. ಅತ್ಯುತ್ತಮ ಗುಣಮಟ್ಟ ಮತ್ತು ರುಚಿಕರವಾದ ಹಾಗೂ ಸ್ವಾದಭರಿತ ಐಸ್‌ಕ್ರೀಂಗಳಿಂದ ಗುರುತಿಸಲ್ಪಟ್ಟಿದೆ.

ಹಾಂಗ್ಯೋ ಸ್ಥಾಪಕ ಹಾಗೂ ಎಕ್ಸಿಕ್ಯೂಟಿವ್‌ ಚೇರ್ಮನ್‌ ದಿನೇಶ್‌ ಪೈ ಮಾತನಾಡಿ, ಫೇರಿಂಗ್‌ ಕ್ಯಾಪಿಟಲ್‌ನಿಂದಾಗಿ ಹಾಂಗ್ಯೋ ಐಸ್‌ಕ್ರೀಮ್ಸ್‌ ಉದ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಗ್ರಾಹಕರಿಗೆ ಹೆಚ್ಚು ಉತ್ತೇಜಕ ಉತ್ಪನ್ನಗಳನ್ನು ನೀಡಲು ನೆರವಾಗಲಿದೆ ಎಂದರು.

ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಜಗದೀಶ್‌ ಪೈ ಮಾತನಾಡಿ, ಫೇರಿಂಗ್‌ ಕ್ಯಾಪಿಟಲ್‌ನ ಹೂಡಿಕೆಯಿಂದ ಸೃಷ್ಟಿಯಾಗುವ ಅವಕಾಶಗಳನ್ನು ಬಳಸಿಕೊಳ್ಳಲು ಉತ್ಸುಕರಾಗಿದ್ದೇವೆ. ದೇಶದಲ್ಲಿ ಜನ ಮೆಚ್ಚಿದ ಐಸ್‌ಕ್ರೀಂ ಆಗಿ ಪರಿವರ್ತಿಸಲು ಇದು ಸಹಕಾರಿಯಾಗಲಿದೆ ಎಂದರು.

ಹಾಂಗ್ಯೋ ಕಾರ್ಯತಂತ್ರ ಸಲಹೆಗಾರ ಉಲ್ಲಾಸ್‌ ಕಾಮತ್‌ ಮಾತನಾಡಿ, ನಾವು ಐಸ್‌ಕ್ರೀಮ… ಉದ್ಯಮದಲ್ಲಿ ಅಗಾಧವಾದ ಮಾರುಕಟ್ಟೆ ಹಿಡಿತ ಹೊಂದಿದ್ದೇವೆ. ಫೇರಿಂಗ್‌ ಕ್ಯಾಪಿಟಲ್‌ ಪಾಲುದಾರಿಕೆಯು ದೇಶಾದ್ಯಂತ ಬಲವಾದ ಬ್ರ್ಯಾಂಡ್ ರೂಪಿಸಲು ಸಾಧ್ಯವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಹ್ಯಾಂಗ್ಯೋ ಐಸ್‌ಕ್ರೀಂ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಗಳ ಸುಮಾರು 350 ಜಿಲ್ಲೆಗಳಲ್ಲಿ 30 ಸಾವಿರಕ್ಕೂ ಅಧಿಕ ವಿತರಕರನ್ನು ಹೊಂದಿದೆ. ಆಧುನಿಕ ಹಾಗೂ ಆನ್‌ಲೈನ್‌ ವ್ಯವಹಾರದ ಮೂಲಕ ಕಪ್‌, ಕೋನ್‌ಗಳು, ಟ್ಯೂಬ್‌ಗಳು, ಕುಲ್ಫಿ ಸಹಿತ ವಿವಿಧ ಬಗೆಯ ಸುಮಾರು 1.2 ಲಕ್ಷ ಲೀಟರ್‌ ಐಸ್‌ಕ್ರೀಂಗಳನ್ನು ನಿತ್ಯ ಗ್ರಾಹಕರಿಗೆ ವಿತರಿಸುತ್ತಿದೆ.

ಮುಂದಿನ ಬೆಳವಣಿಗೆಗಾಗಿ ಫೇರಿಂಗ್‌ ಕ್ಯಾಪಿಟಲ್‌ ಜತೆ ಪಾಲುದಾರಿಕೆ ಹೊಂದಲು ಮುಂದಾಗಿದ್ದೇವೆ. ಹ್ಯಾಂಗ್ಯೋ ತನ್ನ ಉತ್ಪಾದನ ಸಾಮರ್ಥ್ಯಗಳನ್ನು ಹೆಚ್ಚಿಸಲು, ಹೊಸ ಉತ್ಪನ್ನ ತಯಾರಿಸಲು ಮತ್ತು ದಕ್ಷಿಣ ಭಾರತದ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಫೇರಿಂಗ್‌ ಕ್ಯಾಪಿಟಲ್‌ನಿಂದ ಸಂಗ್ರಹಿಸಿದ ಬಂಡವಾಳ ಸಹಕಾರಿಯಾಗಲಿದೆ.
– ಪ್ರದೀಪ್‌ ಪೈ, ಸಂಸ್ಥಾಪಕ, ಎಂ.ಡಿ., ಹಾಂಗ್ಯೋ ಐಸ್‌ಕ್ರೀಮ್ಸ್‌

ಹ್ಯಾಂಗ್ಯೋ ಐಸ್‌ಕ್ರೀಮ್ಸ್‌ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕ ಗ್ರಾಹಕ ಕಂಪೆನಿಯಾಗಿದೆ. ಇದು ಅತ್ಯಾಧುನಿಕ ಉತ್ಪಾದನೆ, ವಿತರಣೆ ಮತ್ತು ಗ್ರಾಹಕರ ಬೆಂಬಲದೊಂದಿಗೆ ಉತ್ಪನ್ನಗಳ ಗುಣಮಟ್ಟದಲ್ಲಿ ಸ್ಥಿರತೆ ಕಂಡುಕೊಂಡಿದೆ. ಮುಂದಿನ ಬೆಳವಣಿಗೆಗೆ ಹ್ಯಾಂಗ್ಯೋ ಜತೆ ಫೇರಿಂಗ್‌ ಕ್ಯಾಪಿಟಲ್‌ ಪಾಲುದಾರಿಕೆ ಮಾಡಿಕೊಳ್ಳುತ್ತದೆ.
– ಸಮೀರ್‌ ಶ್ರಾಫ್, ಸಹ ಸಂಸ್ಥಾಪಕ ಮತ್ತು ಎಂ.ಡಿ., ಫೇರಿಂಗ್‌ ಕ್ಯಾಪಿಟಲ್‌

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.