Communal riots: “ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಲ್ಲೆ ಖಂಡನೀಯ’: ಸುಬುಧೇಂದ್ರ ಸ್ವಾಮೀಜಿ
ಮಂತ್ರಾಲಯದಲ್ಲಿ ರಾಯರ ರಥೋತ್ಸವ ಸಂಭ್ರಮ, ಮೈಸೂರು ರಾಜ ಮನೆತನದ ಯದುವೀರ ಒಡೆಯರ್ ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ
Team Udayavani, Aug 23, 2024, 6:20 AM IST
ರಾಯಚೂರು: ಯಾವುದೇ ಮತೀಯ ಹಾಗೂ ಸಮುದಾಯಗಳ ಮೇಲೆ ದಾಳಿ ಹಾಗೂ ಹಲ್ಲೆ ನಡೆಯಬಾರದು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದಿರುವ ದಾಳಿ ಖಂಡನೀಯ ಎಂದು ಮಂತ್ರಾಲಯದ ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ವಿಷಾದ ವ್ಯಕ್ತಪಡಿಸಿದರು.
ಮಂತ್ರಾಲಯದಲ್ಲಿ ಗುರುವಾರ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಉತ್ತರಾರಾಧನೆ ಮಹೋತ್ಸವ ನಿಮಿತ್ತ ಶ್ರೀ ಪ್ರಹ್ಲಾದರಾಜರ ಮಹಾರಥೋತ್ಸವಕ್ಕೆ ಚಾಲನೆ ನೀಡಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ದೇಶದಲ್ಲಿ ಶಾಂತಿ ನೆಲೆಸಲಿ. ಮತೀಯ ಗಲಭೆಗಳು ನಿಲ್ಲಲಿ. ಭಕ್ತರ ಕಷ್ಟ ನೀಗಿಸುವ ಶ್ರೀ ಗುರುರಾಯರ ವರ್ಣನೆ ಅಸಾಧ್ಯ. ಗುರುರಾಯರ ಭಕ್ತರು ದೇಶ-ವಿದೇಶಗಳ ಮೂಲೆ-ಮೂಲೆಗಳಿಂದ ಆರಾಧನೆಗೆ ಆಗಮಿಸುತ್ತಾರೆ. ದೇಶ ಸೇರಿದಂತೆ ವಿಶ್ವದಲ್ಲಿ ಶಾಂತಿ-ನೆಮ್ಮದಿ ಲಭಿಸಲಿ ಎಂದು ರಾಯರಲ್ಲಿ ಪ್ರಾರ್ಥಿಸಲಾಗುವುದು ಎಂದರು.
ರಥೋತ್ಸವ ಮೂಲಕ ಎಲ್ಲ ಭಕ್ತರಿಗೆ ದರ್ಶನ ನೀಡಲು ಪ್ರಹ್ಲಾದರಾಜರ ಅವತಾರದಲ್ಲಿ ರಾಯರು ರಥಾರೂಢರಾಗಿ ಮಂತ್ರಾಲಯದ ರಥಬೀದಿಯಲ್ಲಿ ಆಗಮಿಸುವರು. ಇದು ಎಲ್ಲರೂ ಆಚರಿಸುವ ಹಬ್ಬವಾಗಿದೆ. ರಾಯರ ಆರಾಧನಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಠದ ಎಲ್ಲ ಸಿಬಂದಿಯ ನಿರಂತರ ಪರಿಶ್ರಮದಿಂದ ಸಾಧ್ಯ. ಶ್ರೀಮಠದ ಸಿಬಂದಿಗೆ ದಿನದ ಭತ್ತೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಘೋಷಿಸಿದರು.
ಸ್ವರ್ಣ ಕವಚ ಲೋಕಾರ್ಪಣೆ
ಮಹಾರಥೋತ್ಸವಕ್ಕೆ ಹೆಲಿಕಾಪ್ಟರ್ ಮೂಲಕ ಶ್ರೀಗಳು ಪುಷ್ಟವೃಷ್ಟಿ ಮಾಡಿದರು. ಬೃಂದಾವನ ಸುತ್ತಲಿನ ಶಿಲಾಮಂಟಪಕ್ಕೆ ಅಳವಡಿಸುತ್ತಿರುವ ಸ್ವರ್ಣ ಕವಚವನ್ನು ಶ್ರೀಮಠದ ಪೀಠಾಧಿ ಪತಿ ಸುಬುಧೇಂದ್ರ ತೀರ್ಥರು ಹಾಗೂ ಮೈಸೂರು ರಾಜ ಮನೆತನದ ಯದುವೀರ ಒಡೆಯರ್ ಜಂಟಿಯಾಗಿ ಲೋಕಾರ್ಪಣೆ ಮಾಡಿದರು. ಬಳಿಕ ಪ್ರಹ್ಲಾದರಾಜರ ಗಜವಾಹನೋತ್ಸವದಲ್ಲಿ ಪಾಲ್ಗೊಂಡ ಯದುವೀರ್ ಚಾಮರ ಸೇವೆ ಮಾಡಿದರು.
ರಾಘವೇಂದ್ರಾನುಗ್ರಹ ಪ್ರಶಸ್ತಿ
ನಿಜವಾದ ಭಕ್ತಿ ನೋಡಬೇಕಿದ್ದರೆ ಮೈಸೂರು ದಸರಾ ನೋಡಬೇಕು ಎನ್ನುವ ಮಾತಿದೆ. ಮಂತ್ರಾಲಯದ ವೈಭವ ಕಂಡಾಗ ಆ ಮಾತನ್ನು ಸ್ವಲ್ಪ ಬದಲಿಸಿ ಮೈಸೂರು ದಸರಾ ಇಲ್ಲವೇ ರಾಯರ ಆರಾಧನೆ ನೋಡಬೇಕು ಎನ್ನಬೇಕಿದೆ ಎಂದು ಮೈಸೂರು ರಾಜ ಮನೆತನದ ಯದುವೀರ ಒಡೆಯರ್ ಬಣ್ಣಿಸಿದರು.
ರಾಯರ 353ನೇ ಆರಾಧನಾ ಮಹೋತ್ಸವ ಪ್ರಯುಕ್ತ ಗುರುವಾರ ನಡೆದ ಉತ್ತಾರಾರಾಧನೆಯಂದು ಶ್ರೀಮಠದಿಂದ ಶ್ರೀ ರಾಘವೇಂದ್ರಾನುಗ್ರಹ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಮಠಕ್ಕೆ ಇದು ನನ್ನ ಮೊದಲ ಭೇಟಿ. ಇಂಥ ಅವಕಾಶ ಸಿಕ್ಕಿರುವುದು ದೊಡ್ಡ ಸೌಭಾಗ್ಯ ಎಂದು ಭಾವಿಸುತ್ತಿದ್ದೇವೆ. ಎಷ್ಟೋ ದಾಳಿಗಳು ನಿರಂತರವಾಗಿ ನಡೆದಾಗ್ಯೂ ನಮ್ಮ ಭಾರತದ ಪರಂಪರೆಗೆ ಕಿಂಚಿತ್ತೂ ಧಕ್ಕೆಯಾಗಿಲ್ಲ. ಇಂಥ ಪರಂಪರೆಯನ್ನು ಇದೇ ರೀತಿ ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli ಹಣಗೆರೆಕಟ್ಟೆಯಲ್ಲಿ ಪ್ಯಾಲೆಸ್ತೀನ್ ಪರ ಫ್ಲೆಕ್ಸ್:ಕ್ರಮಕ್ಕೆ ಆರಗ ಒತ್ತಾಯ
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
Raichur: ಬಿಜೆಪಿಯವರು ಮೈಮೇಲೆ ಬಂದಂತೆ ಆಡುತ್ತಿದ್ದಾರೆ: ಸಚಿವ ಎನ್.ಎಸ್.ಭೋಸರಾಜು
Upendra: ಸಿನಿರಂಗದಲ್ಲಿ ಗಂಡಸರಿಗೂ ಶೋಷಣೆ ಆಗಿದೆ- ಉಪೇಂದ್ರ
Haveri; ಖಾಸಗಿ ಬಸ್ ಪಲ್ಟಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.