Udupi ಗೀತಾರ್ಥ ಚಿಂತನೆ-14; ಭಗವದಿಚ್ಛೆಗೆ ವಿರುದ್ಧ ಅಧರ್ಮ
Team Udayavani, Aug 23, 2024, 1:14 AM IST
ಯಾವುದು ಧರ್ಮ ಎಂದು ತಿಳಿದ ಬಳಿಕ ಯಾವುದು ಅಧರ್ಮ ಎಂದು ತಿಳಿಯುವುದೂ ಮುಖ್ಯವೇ. “ತನ್ನ ಪಾಲಿಗೆ ಬಂದ ಕಾರ್ಯವನ್ನು ಭಗವಂತನ ಪೂಜೆ ಎಂದು ಮಾಡುವುದು ಶ್ರೇಷ್ಠ ಧರ್ಮ’ ಎಂಬ “ಧರ್ಮ’ ಕುರಿತಾದ ಒಂದು ವಾಕ್ಯದ ವ್ಯಾಖ್ಯೆ ಬಳಿಕ “ತದ್ವಿರುದ್ಧ ಅಧರ್ಮಃ’ ಎಂಬ ಮಾತಿದೆ.
ತನ್ನ ಪಾಲಿಗೆ ಬಂದ ಕೆಲಸವನ್ನು ಭಗವಂತನ ಪೂಜೆ ಎಂದು ಶ್ರದ್ಧೆಯಿಂದ ಮಾಡದೆ ಇರುವುದು ಅಧರ್ಮವಾಗಿದೆ. ಮುಖ್ಯವಾಗಿರುವುದು ಮಾಡುವ ಕರ್ಮವು ಭಗವಂತನ ಇಚ್ಛೆಗೆ ಪೂರಕವಾಗಿದೆಯೋ? ಇಲ್ಲವೋ? ಎಂಬುದು.
ಇಲ್ಲಿ ಭಗವಂತನ ಇಚ್ಛೆಯೇ ಮುಖ್ಯ. ಕೆಲವು ಕರ್ಮಗಳು ವಿಹಿತವೂ ಅಲ್ಲ, ವಿರುದ್ಧವೂ ಅಲ್ಲ ಮೂರನೆಯದಾದ ತಟಸ್ಥ ಕರ್ಮಗಳು ಇರುತ್ತವೆ. ಇದು ಪೂರಕವಾಗಿದ್ದರೆ ಧರ್ಮ ಎಂದು ಪರಿಗಣಿಸಬೇಕು. ಅರ್ಜುನ ಒಂದೆಡೆ ತನ್ನ ಮನಸ್ಸು ಬಂಧುಬಳಗದವರನ್ನು ಹೊಡೆಯಲು ಒಪ್ಪುವುದಿಲ್ಲ ಎನ್ನುತ್ತಾನೆ, ಶ್ರೀಕೃಷ್ಣ ಅದೇ ಹೊತ್ತಿಗೆ “ನಾನು ಎಲ್ಲರನ್ನೂ ಕೊಂದಾಗಿದೆ.
ನೀನು ಹೊಡೆಯುವುದಷ್ಟೆ ಬಾಕಿ’ (ಮಯಾಹತಾನ್) ಎನ್ನುತ್ತಾನೆ. ಇಲ್ಲಿ ಅರ್ಜುನನ ಮನಸ್ಸು ಏನು ಹೇಳುತ್ತದೆ ಎನ್ನುವುದು ಮುಖ್ಯವಲ್ಲ. ಭಗವಂತನ ದೃಷ್ಟಿಯೇನು ಎನ್ನುವುದು ಮುಖ್ಯ. ಆದ್ದರಿಂದಲೇ “ಧರ್ಮಸ್ಯ ಪ್ರಭುಃ ಅಚ್ಯುತಃ’ ಎಂಬು ಬಣ್ಣಿಸಲಾಗಿದೆ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ
Tungabhadra ಡ್ಯಾಂನ ಎಲ್ಲ 33 ಗೇಟ್ ಬದಲಿಸಲು ತಜ್ಞರ ಸಲಹೆ
Congress-NC ಮೈತ್ರಿಗೆ ಪಾಕ್ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ
Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ
High Court: ಬಾಂಬ್ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.