First in history; ಡೆಮಾಕ್ರಾಟ್ ಸಭೆಯಲ್ಲಿ ಕನ್ನಡಿಗನ ವೇದ ಘೋಷ
Team Udayavani, Aug 23, 2024, 6:45 AM IST
ಶಿಕಾಗೊ: ಅಮೆರಿಕದ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾ ವೇಶದ 3ನೇ ದಿನ ವೇದಮಂತ್ರ ಗಳೊಂದಿಗೆ ಆರಂಭವಾಯಿತು. ಮೊದಲ ಬಾರಿಗೆ ಪಕ್ಷದ ಸಭೆ ವೇದ ಮಂತ್ರಗಳೊಂದಿಗೆ ಆರಂಭ ಆಯಿತು. ಉಡುಪಿ ಪೇಜಾವರ ಮಠದಲ್ಲಿ ಪುರೋಹಿ ತರಾಗಿದ್ದ ರಾಕೇಶ್ ಭಟ್ ವೇದ ಮಂತ್ರ ಘೋಷ ನಡೆಸಿಕೊಟ್ಟರು. “ನಾವೆಲ್ಲರೂ ಒಗ್ಗಟ್ಟಾಗಿರಬೇಕು. ಒಟ್ಟಾಗಿ ಚಿಂತಿಸ ಬೇಕು. ಇದರಿಂದ ಲೋಕ ಕಲ್ಯಾಣ ಆಗಲಿ. ನಮ್ಮನ್ನು ಬಲಿಷ್ಠಗೊಳಿಸಲಿ’ ಎಂದು ರಾಕೇಶ್ ಭಟ್ ಹೇಳಿದ್ದಾರೆ. ಸಭೆಯಲ್ಲಿ ವಸುಧೈವ ಕುಟುಂಬಕಂ, ಅಸತೋಮಾ ಸದ್ಗಮಯ ಮಂತ್ರಗಳನ್ನೂ ಪಠಿಸಲಾಯಿತು.
ಯಾರು ಈ ರಾಕೇಶ್ ಭಟ್?
ಅಮೆರಿಕದ ಮೇರಿಲ್ಯಾಂಡ್ನ ಶಿವ ವಿಷ್ಣು ಮಂದಿರದಲ್ಲಿ ರಾಕೇಶ್ ಭಟ್ ಅರ್ಚಕರಾಗಿದ್ದಾರೆ. ಋಗ್ವೇದ ಮತ್ತು ಮಾಧ್ವ ಆಗಮ ತಂತ್ರಸಾರ ದಲ್ಲಿ ಶಿಕ್ಷಣ ಪಡೆದಿದ್ದಾರೆ. ಪೇಜಾ ವರ ಶ್ರೀಗಳು ಇವರ ಗುರುಗಳಾಗಿ ದ್ದಾರೆ. ಬೆಂಗಳೂರಿನ ಆಸ್ಟೀನ್ ಕಾಲೇಜಿನಲ್ಲಿ ಇಂಗ್ಲಿಷ್, ಕನ್ನಡ ಹಾಗೂ ಸಂಸ್ಕೃತ ಎಂಎ ಮಾಡಿ ದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್, ತುಳು ಭಾಷೆಗಳು ಬರುತ್ತವೆ. ಸೇಲಮ್ನಲ್ಲಿರುವ ರಾಘವೇಂದ್ರ ಸ್ವಾಮಿ ದೇಗುಲ ದಲ್ಲೂ ಪುರೋಹಿತರಾಗಿದ್ದರು. 2013ರಲ್ಲಿ ಅಮೆರಿಕಕ್ಕೆ ತೆರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cyclone: ಯಾಗಿ ಚಂಡಮಾರುತಕ್ಕೆ ದಕ್ಷಿಣ ಏಷ್ಯಾದಲ್ಲಿ 500 ಮಂದಿ ಸಾವು
Pagers explode: ಲೆಬನಾನ್ನಲ್ಲಿ ಸ್ಫೋಟ: 8 ಮಂದಿ ಮೃತ್ಯು, 2,700ಕ್ಕೂ ಅಧಿಕ ಮಂದಿಗೆ ಗಾಯ
Afghanistan; ಪೋಲಿಯೋ ಲಸಿಕೆಗೆ ತಾಲಿಬಾನ್ ತಡೆ: ವಿಶ್ವಸಂಸ್ಥೆ ಆರೋಪ
Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್ ಮಹಿಳೆಯರು!
Elon Musk: ಬೈಡೆನ್, ಕಮಲಾ ಮೇಲೇಕೆ ಹ*ತ್ಯಾ ಪ್ರಯತ್ನ ನಡೆಯುತ್ತಿಲ್ಲ?ಎಲಾನ್ ಮಸ್ಕ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.